ಮೈಸೂರು: ಮಕ್ಕಳಿಲ್ಲವೆಂಬ ಕೊರಗಿನಿಂದ ಹೊರಬರಲಾದೇ ವ್ಯಕ್ತಿಯೊಬ್ಬ ನೇಣಿಗೆ ಕೊರಳೊಡ್ಡಿರುವ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಜಂಗಲ್ ರೆಸಾರ್ಟ್’ನ ವಸತಿ ಗೃಹದಲ್ಲಿ ನಡೆದಿದೆ.
ಧರ್ಮರಾಜು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
3 ವರ್ಷದಿಂದ ಜಂಗಲ್ ರೆಸಾರ್ಟ್’ನಲ್ಲಿ ಶೌಚಾಲಯ ಶುಚಿತ್ವ ಕಾರ್ಯ ನಿರ್ವಹಿಸುತ್ತಿದ್ದ. ವಿವಾಹವಾಗಿ 5 ವರ್ಷವಾದ್ರೂ ಮಕ್ಕಳಾಗಿಲ್ಲ ಎಂಬ ವಿಚಾರಕ್ಕೆ ಧರ್ಮರಾಜು ಮತ್ತು ಪತ್ನಿ ನಡುವೆ ಜಗಳ ನಡೆದಿತ್ತು. ಪತ್ನಿ ಜಗಳವಾಡಿಕೊಂಡು ತವರಿಗೆ ತೆರಳಿದ್ದ ವೇಳೆ ಕರ್ತವ್ಯಕ್ಕೆ ರಜೆ ಹಾಕಿದ ಧರ್ಮರಾಜು ವಸತಿ ಗೃಹದಲ್ಲಿ ನೇಣಿಗೆ ಶರಣಾಗಿದ್ದಾನೆ.
![](https://pratidhvani.com/wp-content/uploads/2021/09/suicide-dh-1537532497.jpg)
ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಧರ್ಮರಾಜು ಮೃತದೇಹ ರವಾನೆ ಮಾಡಲಾಗಿದ್ದು, ಈ ಸಂಬಂಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಖ ಸಂಸಾರ.. ಮಕ್ಕಳಿಲ್ಲದ ಕೊರಗು ..
ಧರ್ಮರಾಜು ಹಾಗೂ ಪತ್ನಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಇಬ್ಬರು ಕಳೆದ 5 ವರ್ಷದಿಂದ ಸುಖ ಸಂಸಾರ ನಡೆಸುತ್ತಿದ್ದರು. ಆದರೆ, ಮಕ್ಕಳಿಲ್ಲ ಎಂಬ ಕೊರಗು ಇಬ್ಬರನ್ನೂ ಬಾಧಿಸಿತ್ತು. ಇದೇ ವಿಚಾರಕ್ಕೆ 6 ತಿಂಗಳಿಂದ ಜಗಳವಾಗುತ್ತಿತ್ತು. ಹೀಗಾಗಿ ಇಬ್ಬರೂ ಪರಸ್ಪರ ಮುನಿಸಿಕೊಂಡಿದ್ದರು. ಧರ್ಮರಾಜ್ ಈ ಬಗ್ಗೆ ತುಂಬಾ ಯೋಚಿಸಿದ್ದ . ಪತ್ನಿ ಜೊತೆಗಿನ ವಿರಸ ಹೆಚ್ಚಾಗಿ ತೀವ್ರವಾಗಿ ಮನನೊಂದು ಧರ್ಮರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ.