ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA) ಬೃಹತ್ ಹಗರಣವೊಂದು ಬೆಳಕಿಗೆ ಬಂದಿದೆ. ಎಸ್ ಸಿ, ಎಸ್ಟಿ ನಿಗಮದ ಹಗರಣಕ್ಕಿಂತಲೂ ದೊಡ್ಡ ಹಗರಣವಾಗಿರೋದು ಬಹಿರಂಗಗೊಂಡಿದೆ. 60 ವರ್ಷದ ಹಿಂದಿನ ಭೂಮಿಗೆ ಮಾಲಿಕರನ್ನ ಹುಡುಕಿ ಇದೀಗ ಪರಭಾರೆ ಕೊಟ್ಟಿರೊದು ಬೆಳಕಿಗೆ ಬಂಂದಿದೆ.
![](https://pratidhvani.com/wp-content/uploads/2024/06/IMG_8477.jpeg)
ಮುಡಾ ಆಯುಕ್ತ ಜಿ.ಟಿ.ದಿನೇಶ್ (GT dines) ಕುಮಾರ್ ಹಗರಣದ ಪ್ರಮುಖ ರೂವಾರಿ ಎನ್ನಲಾಗ್ತಿದೆ. ಇದು ಅತಿ ದೊಡ್ಡ ಹಗರಣವಾಗಿದ್ದು, ಅಂದಾಜು 3 ಸಾವಿರ ಕೋಟಿ ರುಪಾಯಿಯ ಸ್ಕ್ಯಾಮ್ ಎಂದು ಹೇಳಲಾಗಿದ್ದು, ಸರ್ಕಾರಕ್ಕೆ ಉರುಳಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆಗಳಿದೆ.
![](https://pratidhvani.com/wp-content/uploads/2024/06/IMG_8479.jpeg)
ಇನ್ನು ಈ ಬಗ್ಗೆ ಕೃಷ್ಣರಾಜ ಕ್ಷೇತ್ರದ ಬಿಜೆಪಿ (8jp) ಶಾಸಕ ಟಿ.ಎಸ್.ಶ್ರೀವತ್ಸ (TS srivatsa) ಮಾತನಾಡಿದ್ದು, ಸಿಎಂ (Cm) ತವರಲ್ಲೇ ಅಕ್ರಮ ನಡೆದಿರುವ ಕಾರಣ ಸಿಎಂ ಮುಖ್ಯ ಜವಬ್ದಾರರು. ಅಕ್ರಮದಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳನ್ನು ವಜಾ ಮಾಡೋಕು. ಜೊತೆಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ (Bhairathi suresh) ರಾಜೀನಾಮೆ ನೀಡೋಕು ಅಂತ ಆಗ್ರಹಿಸಿದ್ದಾರೆ.