ಚಿಕ್ಕಮಗಳೂರು/ ಬೆಂಗಳೂರು : ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತರಾದವರ ಬಂಡಾಯದ ಅಲೆ ಜೋರಾಗಿದೆ. ಮೂಡಿಗೆರೆಯಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಈ ಬಾರಿ ದೀಪಕ್ ದೊಡ್ಡಯ್ಯ ಪಾಲಾಗಿದೆ. ಇದರಿಂದ ಆಕ್ರೋಶಗೊಂಡ ಎಂಪಿ ಕುಮಾರಸ್ವಾಮಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಇನ್ನು ಇದೇ ವೇಳೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಇಲ್ಲದೇ ಈ ಬಾರಿ ಬಿಜೆಪಿ 50 ಸೀಟು ಗೆಲ್ಲೋದಿಲ್ಲ. ನಾನು ಸನ್ಯಾಸಿಯಲ್ಲ. ನನ್ನ ರಾಜಕೀಯ ಎಂತದ್ದು ಅಂತಾ ಸದ್ಯದಲ್ಲೇ ತೋರಿಸುತ್ತೇನೆಂದು ಸವಾಲ್ ಎಸೆದಿದ್ದಾರೆ.