• Home
  • About Us
  • ಕರ್ನಾಟಕ
Thursday, December 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಹಿಗ್ಗಿದ ಲಾಭ, ಮೂರೇ ತಿಂಗಳಲ್ಲಿ ದುಪ್ಪಟ್ಟು ಲಾಭ ತಂದ MRPL & CPCL ಷೇರುಗಳು

Any Mind by Any Mind
June 8, 2022
in ದೇಶ
0
ಹಿಗ್ಗಿದ ಲಾಭ, ಮೂರೇ ತಿಂಗಳಲ್ಲಿ ದುಪ್ಪಟ್ಟು ಲಾಭ ತಂದ MRPL & CPCL ಷೇರುಗಳು
Share on WhatsAppShare on FacebookShare on Telegram

ಷೇರುಪೇಟೆ ಸತತ ಕುಸಿತ ನಡುವೆಯೂ ಪೆಟ್ರೋಲಿಯಂ ಸಂಸ್ಕರಣ ಕಂಪನಿಗಳಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ (MRPL) ಮತ್ತು ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ (CPCL) ಷೇರುಗಳು ಜಿಗಿಯುತ್ತಿವೆ. ಜೂನ್ 7ರಂದು ದಿನದ ವಹಿವಾಟಿನಲ್ಲಿ ಉಭಯ ಷೇರುಗಳೂ ಶೇ. 19ರಷ್ಟು ಏರಿಕೆ ದಾಖಲಿಸಿವೆ. ಅಷ್ಟೇ ಅಲ್ಲದೇ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿವೆ.

ADVERTISEMENT

ಈ ಷೇರುಗಳ ಜಿಗಿಯುತ್ತಿರುವುದಕ್ಕೆ ಮುಖ್ಯ ಕಾರಣ ಸಂಸ್ಕರಣೆಯಲ್ಲಿನ ಲಾಭ ಗಣನೀಯ ಪ್ರಮಾಣದಲ್ಲಿ ಹಿಗ್ಗಿರುವುದು. ಸಂಸ್ಕರಣೆಗೆ ಮಾನದಂಡವಾಗಿರುವ ಸಿಂಗಾಪುರ ಸಂಸ್ಕರಣ ಲಾಭಾಂಶವು ಪ್ರತಿ ಬ್ಯಾರೆಲ್ ಗೆ 25.2 ಡಾಲರ್ ಗಳಷ್ಟು ಏರಿಕೆಯಾಗಿದೆ. ಅಂದರೆ, 100 ಡಾಲರ್ ಗಳನ್ನು ಪಾವತಿಸಿ ಒಂದು ಬ್ಯಾರೆಲ್ ಕಚ್ಚಾ ತೈಲ ಖರೀದಿಸಿ ಸಂಸ್ಕರಿಸಿದರೆ, ಈ ಕಂಪನಿಗಳಿಗೆ 25 ಡಾಲರ್ ಲಾಭವಾಗುತ್ತದೆ. ಅಂದರೆ ಶೇ.25ರಷ್ಟು ಲಾಭವಾಗುತ್ತಿದೆ. ಲಾಭದ ಪ್ರಮಾಣವು ಈ ಮಟ್ಟಕ್ಕೆ ಏರಿರುವುದು ಇದೇ ಮೊದಲು. ಹೀಗಾಗಿ ಈ ಷೇರುಗಳಿಗೆ ಭಾರಿ ಬೇಡಿಕೆ ಬಂದಿದೆ.

ಮೂರು ತಿಂಗಳ ಹಿಂದೆ ಕೇವಲ 40 ರೂಪಾಯಿ ಆಜುಬಾಜಿನಲ್ಲಿ ವಹಿವಾಟಾಗುತ್ತಿದ್ದ ಎಂಆರ್ಪಿಎಲ್ ಈಗ 108 ರೂಪಾಯಿಗೆ ಜಿಗಿದಿದೆ. ಮೂರು ತಿಂಗಳಲ್ಲಿ ಹೂಡಿಕೆದಾರರಿಗೆ ಶೇ.150ರಷ್ಟು ಲಾಭ ತಂದುಕೊಟ್ಟಿದೆ. ಸಿಪಿಸಿಎಲ್ ಮೂರು ತಿಂಗಳ ಹಿಂದೆ 100 ರೂಪಾಯಿ ಆಜುಬಾಜಿನಲ್ಲಿ ವಹಿವಾಟಾಗುತ್ತಿದ್ದು ಈಗ 370 ರೂಪಾಯಿಗೆ ಜಿಗಿದಿದೆ. ಹೂಡಿಕೆದಾರರಿಗೆ ಶೇ.240ರಷ್ಟು ಲಾಭ ತಂದುಕೊಟ್ಟಿದೆ. ವಿಶೇಷ ಎಂದರೆ ಇದೇ ಅವಧಿಯಲ್ಲಿ ವಿಸ್ತೃತ ಮಾರುಕಟ್ಟೆಯ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಕೇವಲ ಶೇ.4ರಷ್ಟು ಮಾತ್ರ ಏರಿಕೆ ದಾಖಲಿಸಿವೆ.

ಈ ಎರಡೂ ಷೇರುಗಳ ಕಳೆದ ಕೆಲವು ದಿನಗಳಿಂದ ಅಪ್ಪರ್ ಸರ್ಕ್ಯೂಟ್ ಮುಟ್ಟುತ್ತಿವೆ. ದಿನದಲ್ಲಿ ಇಂತಿಷ್ಟೇ ಪ್ರಮಾಣದಲ್ಲಿ ಷೇರು ಏರಿಕೆಯಾಗಬೇಕು. ಆ ಮಟ್ಟ ದಾಟಿದರೆ ಆ ದಿನದ ವಹಿವಾಟು ಸ್ಥಗಿತಗೊಳ್ಳುತ್ತದೆ. ಇದಕ್ಕೆ ಅಪ್ಪರ್ ಸರ್ಕ್ಯೂಟ್ ಎನ್ನಲಾಗುತ್ತದೆ.

ಉಭಯ ಷೇರುಗಳ ಓಟ ಎಲ್ಲಿಯವರೆಗೆ? ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಇನ್ನೂ ಅಸ್ಥಿರತೆ ಇದೆ. ಈ ಅಸ್ಥಿರತೆ ಮುಂದುವರೆಯುವವರೆಗೂ ದರ ಏರುತ್ತಲೇ ಇರುತ್ತದೆ. ಸಂಸ್ಕರಣೆಯ ಲಾಭದ ಪ್ರಮಾಣ ಶೇ.25ರಷ್ಟು ಇರುವುದರಿಂದ ಕಚ್ಚಾ ತೈಲ ದರ ಏರಿದರೂ ಇವುಗಳ ಲಾಭದ ಪ್ರಮಾಣವೂ ಏರುತ್ತದೆ.

ತೈಲ ದರ ಇಳಿದಾಗ ಸಹಜವಾಗಿಯೇ ಸಂಸ್ಕರಣದ ಲಾಭ ಪ್ರಮಾಣ ತಗ್ಗುತ್ತದೆ. ಸದ್ಯಕ್ಕೆ ತೈಲ ದರ ಇಳಿಯುವ ಸಾಧ್ಯತೆ ಇಲ್ಲ. ರಷ್ಯಾ- ಉಕ್ರೇನ್ ಯುದ್ಧ ಎಲ್ಲಿಯವರೆಗೆ ಸಾಗುತ್ತದೋ ಅಲ್ಲಿಯವರೆಗೂ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರೆಯಲಿದ್ದು, ತೈರ ದರ ಏರು ಹಾದಿಯಲ್ಲೇ ಸಾಗಲಿದೆ.

ಈ ನಡುವೆ ಒಪೆಕ್ ದೇಶಗಳು ತೈಲ ಉತ್ಪಾದನೆ ಪ್ರಮಾಣ ಹೆಚ್ಚಿಸುವುದಾಗಿ ಘೋಷಿಸಿದ್ದರೂ, ಅವುಗಳ ಹೆಚ್ಚಿಸಿರುವ ಪ್ರಮಾಣವು ಬೇಡಿಕೆಗೆ ಹೋಲಿಸಿದರೆ ತೀರಾ ಅತ್ಯಲ್ಪ. ಹೀಗಾಗಿ ತೈಲ ದರದಲ್ಲಿ ಸದ್ಯಕ್ಕೆ ಸ್ಥಿರತೆ ಬರುವ ಸಾಧ್ಯತೆ ಕ್ಷೀಣಿಸಿದೆ. ಹೀಗಾಗಿ ಮತ್ತಷ್ಟು ದಿನಗಳ ಕಾಲ ಈ ಷೇರುಗಳ ಜಿಗಿತ ಆಬಾದಿತವಾಗಿರಲಿದೆ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ದೇಶದಲ್ಲಿ ಮತ್ತೆ ಜಿಗಿದ ಕೊರೊನಾ: 5233 ಸೋಂಕು ದೃಢ

Next Post

ರಜನಿಕಾಂತ್‌ ಚಿತ್ರದಲ್ಲಿ ಶಿವರಾಜ್‌ ಕುಮಾರ್ ನಟಿಸುವುದು ಖಚಿತ!

Related Posts

Top Story

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

by ಪ್ರತಿಧ್ವನಿ
December 3, 2025
0

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣದೇವಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಚರ್ಚೆ. ನೌಕರರ ಪ್ರಮುಖರ ಜತೆ ಅನ್ನಪೂರ್ಣದೇವಿ ಅವರನ್ನು ಭೇಟಿಯಾಗಿ ಚರ್ಚಿಸಿದ ಹೆಚ್ಡಿಕೆ...

Read moreDetails

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

December 3, 2025
ಕುಡುಕರಿಗೊಬ್ಬ, ಬ್ಯಾಚುಲರ್‌ಗೆ ಮತ್ತೊಬ್ಬ: ಹಿಂದೂ ದೇವತೆಗಳ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ

ಕುಡುಕರಿಗೊಬ್ಬ, ಬ್ಯಾಚುಲರ್‌ಗೆ ಮತ್ತೊಬ್ಬ: ಹಿಂದೂ ದೇವತೆಗಳ ಬಗ್ಗೆ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ

December 3, 2025
ಭಾರತಕ್ಕೆ ರಷ್ಯಾಧ್ಯಕ್ಷ: ದೆಹಲಿಯಲ್ಲಿ ಹೈ ಅಲರ್ಟ್

ಭಾರತಕ್ಕೆ ರಷ್ಯಾಧ್ಯಕ್ಷ: ದೆಹಲಿಯಲ್ಲಿ ಹೈ ಅಲರ್ಟ್

December 2, 2025
ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರದ್ದು ಮಲತಾಯಿ ಧೋರಣೆ: ಡಿಸಿಎಂ ಡಿಕೆಶಿ ಬೇಸರ

ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರದ್ದು ಮಲತಾಯಿ ಧೋರಣೆ: ಡಿಸಿಎಂ ಡಿಕೆಶಿ ಬೇಸರ

December 1, 2025
Next Post
ರಜನಿಕಾಂತ್‌ ಚಿತ್ರದಲ್ಲಿ ಶಿವರಾಜ್‌ ಕುಮಾರ್ ನಟಿಸುವುದು ಖಚಿತ!

ರಜನಿಕಾಂತ್‌ ಚಿತ್ರದಲ್ಲಿ ಶಿವರಾಜ್‌ ಕುಮಾರ್ ನಟಿಸುವುದು ಖಚಿತ!

Please login to join discussion

Recent News

Top Story

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

by ಪ್ರತಿಧ್ವನಿ
December 3, 2025
Top Story

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

by ಪ್ರತಿಧ್ವನಿ
December 3, 2025
Top Story

ಅದ್ದೂರಿಯಾಗಿ ನಡೆಯಲಿದೆ “JAM JUNXION” ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್..!!

by ಪ್ರತಿಧ್ವನಿ
December 3, 2025
Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!
Top Story

Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!

by ಪ್ರತಿಧ್ವನಿ
December 3, 2025
ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
Top Story

ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

by ಪ್ರತಿಧ್ವನಿ
December 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

December 3, 2025

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

December 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada