ಲೋಕಸಭಾ(Loka Saba) ಚುನಾವಣೆ(Election) ಟಿಕೆಟ್(Ticket) ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ(Prathap Simha), ರಾಜವಂಶಸ್ಥ ಯದುವೀರ್ ಒಡೆಯರ್(Yaduveer) ಅವರ ಕಾಲೆಳೆದಿದ್ದಾರೆ.

ಟಿಕೆಟ್(Ticket) ವಿಚಾರವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡುವ ಸಂದರ್ಭದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಹವಾನಿಯಂತ್ರಿತ ಕೊಠಡಿಯಲ್ಲಿರುವ ಮಹಾರಾಜರು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವುದನ್ನು ಸ್ವಾಗತಿಸುತ್ತೇನೆ. ಮಹಾರಾಜರು ರಾಜಕಾರಣಕ್ಕೆ ಬಂದು ಜನಸಾಮಾನ್ಯರ ಬಳಿಗೆ ಬರಲಿದ್ದಾರೆ. ಅವರು ರಾಜಕಾರಣಕ್ಕೆ ಬಂದರೆ ಜನರಿಗೆ ಹಲವಾರು ರೀತಿಯ ಅನುಕೂಲ ಆಗಲಿದೆ. ಮಹಾರಾಜರು ಜನ ಸಾಮಾನ್ಯರಿಗೆ, ಪಕ್ಷದ ನಾಯಕರಿಗೆ ಕೈ ಮುಗಿಯಬೇಕು. ಪಕ್ಷದ ಸಿದ್ದಾಂತದಂತೆ ನಾಯಕರು ವೇದಿಕೆಯ ಮೇಲೆ ಆಸೀನರಾದರೆ ಜನಸಾಮಾನ್ಯರ ಸಾಲಿನಲ್ಲಿ ಕೂರಬೇಕು ಎನ್ನುವ ಮೂಲಕ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾಲೆಳೆದು, ವ್ಯಂಗ್ಯ ಮಾಡಿದ್ದಾರೆ.
#BJPKarnataka #MysoreKodagu #PrathapSimha #Yaduveer #MPelection






