ತಾಯಿ ಆನೆಯೊಂದು ಆಕಸ್ಮಿಕವಾಗಿ ಸಾವನಪ್ಪಿದ ತನ್ನ ಕರುಳ ಬಳ್ಳಿಯನ್ನ ಹೊತ್ತು 7 ಕಿ.ಮೀ ಸಾಗಿದ ಮನಕಲಕುವ ಘಟನೆ ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ನಡೆದಿದೆ.
ಮೂಕ ಜೀವಿಗಳಿಗು ರಕ್ತ ಸಂಬಂಧ, ಪ್ರೀತಿ, ಮಮತೆ, ಭಾವನೆಗಳಿರುತ್ತವೆ ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ನಿರೂಪಿಸಿದೆ.

ಛುನಾಭಟಿ ಟೀ ತೋಟದ ಬನಾರತ್ ಬ್ಲಾಕ್ನಲ್ಲಿ ವಿದ್ಯುತ್ ತಂತಿ ತಗುಲಿ ಆನೆ ಮರಿ ಸಾವನಪ್ಪಿದೆ. ಇದನ್ನು ನೋಡಿದ ತಾಯಿ ಆನೆ ಮರಿಯಾನ್ನು ಆನೆಗಳ ಹಿಂಡಿನೊಂದಿಗೆ 3 ಚಹಾ ತೋಟಗಳನ್ನು ದಾಟಿಕೊಂಡು ಸುಮಾರು 7 ಕಿ.ಮೀ ದೂರದಲ್ಲಿರುವ ಪೊದೆಯೊಂದರಲ್ಲಿ ಹಾಕಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆನೆಗಳ ಹಿಂಡಿನಲ್ಲಿ ಸುಮಾರು 35ಕ್ಕು ಹೆಚ್ಚು ಆನೆಗಳಿದ್ದವು ಎಂದು ತಿಳಿದು ಬಂದಿದೆ. ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದು ಅರಣ್ಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತಿಳಿಸಿದ್ದಾರೆ.