ತುಮಕೂರು : ಕೆಎಸ್ಆರ್ ಟಿಸಿ (KSRTC) ಅಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ (Srinivas) ಮೊದಲ ಪ್ರತಿಕ್ರಿಯೆ ನೀಡಿದ್ದು, ನನಗೆ ಏನೂ ಅನ್ನಿಸ್ತಿಲ್ಲ, ಖುಷಿನೂ ಅನ್ನಿಸ್ತಿಲ್ಲ, ಬೇಜಾರು ಅನ್ನಿಸ್ತಿಲ್ಲ, ಎನ್ನುವ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
![](https://pratidhvani.com/wp-content/uploads/2024/01/srinivas_vb_14.gif)
ನಾನೇನು ಕೇಳಿರಲಿಲ್ಲ, ಪಕ್ಷದ ವರಿಷ್ಠರು ತೀರ್ಮಾನ ಮಾಡಿ ಕೊಟ್ಟಿದ್ದಾರೆ. ನಾನು ಅವರ ನಂಬಿಕೆಗೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ. ನಾನು ಯಾವುದೇ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಯಾವುದೋ ಆಸೆಗೆ ಬಿದ್ದು ರಾಜಕಾರಣ ಮಾಡಿದವನು ನಾನಲ್ಲ. ನಾನು ರಾಜಕಾರಣಕ್ಕೆ ಬಂದಿದ್ದೇ ಅನಿರೀಕ್ಷಿತವಾಗಿ. ಜನರು ನನಗೆ ಅವಕಾಶ ಕೊಟ್ಟಿದ್ದಾರೆ, ಅವರ ಸೇವೆ ಮಾಡಬೇಕು ಅನ್ನೋದು ನನ್ನ ಆಸೆ. ಯಾವುದೇ ಸ್ಥಾನ ಸಿಕ್ಕರೂ ತೃಪ್ತಿ ಇರಬೇಕು. ಮನುಷ್ಯನ ಆಸೆಗಳು ಅಪರಿಮಿತ, ಮನುಷ್ಯನ ಆಸೆಗಳೆಲ್ಲವನ್ನ ಈಡೇರಿಸೋಕೆ ಆಗಲ್ಲ. ಸಮಯ ಸಂದರ್ಭದಲ್ಲಿ ಸಿಕ್ಕ ಅವಕಾಶವನ್ನ ಬಳಸಿಕೊಂಡು ಕೆಲಸ ಮಾಡಬೇಕು ಎಂದರು.
![](https://pratidhvani.com/wp-content/uploads/2024/01/99035000-1-1024x576.webp)
ನಿಗಮ / ಮಂಡಳಿಗೆ ಆಯ್ಕೆಯಾದ ಕೆಲವು ಶಾಸಕರು ಅಸಮಾಧಾನ ಹೊರಹಾಕುತ್ತಿರೋ ವಿಚಾರ. ಅದು ಅವರವರ ವೈಯಕ್ತಿಕ ವಿಚಾರ, ನನಗೆ ಪಕ್ಷ ಏನು ಹೇಳುತ್ತೋ ಅದನ್ನ ಮಾಡ್ತೀನಿ ಅಷ್ಟೇ. ರಾಜ್ಯದ ಮತ್ತು ಕೇಂದ್ರದ ವರಿಷ್ಠರು ತೀರ್ಮಾನ ಮಾಡಿರ್ತಾರೆ. ಅದಕ್ಕೆ ವ್ಯತಿರಿಕ್ತವಾಗಿ ಹೋಗೋದು ಸರಿಯಲ್ಲ ಅನ್ನೋದು ನನ್ನ ಭಾವನೆ. ಲಿಂಗಾಯತರಿಗೆ ಹೆಚ್ಚು ಸ್ಥಾನ ಸಿಕ್ಕಿರೋ ವಿಚಾರ. ನಮ್ಮ ಪಕ್ಷದಿಂದ ಲಿಂಗಾಯತ ಸಮುದಾಯದ 39 ಶಾಸಕರು ಆಯ್ಕೆಯಾಗಿದ್ದಾರೆ. ಹಾಗಿದ್ಮೇಲೆ ಅವರಿಗೆ ಪ್ರಾಮುಖ್ಯತೆ ಕೊಡಬಾರದಾ? ಸಂಖ್ಯಾಬಲದ ಮೇಲೆ ಆಧ್ಯತೆ ಕೊಡೋದು ಒಂದು ಕಡೆಯಾದ್ರೆ, ಎಲ್ಲಾ ವರ್ಗಗಳಿಗೆ ನ್ಯಾಯ ಕೊಡುವಂತಾಗಬೇಕು ಅಂತಾ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಪರಮೇಶ್ವರ್ ಅಸಮಾಧಾನ ಹೊರಹಾಕಿರೋ ವಿಚಾರ. ಅದೆಲ್ಲಾ ದೊಡ್ಡ ದೊಡ್ಡೋರ ವಿಚಾರ. ಅದರ ಬಗ್ಗೆ ಎಲ್ಲಾ ಮಾತನಾಡುವಷ್ಟು ದೊಡ್ಡೋನು ನಾನಲ್ಲ. ನಾನು ಯಾವ ಪಕ್ಷದಲ್ಲಿ ಇರ್ತೀನಿ ಆ ಪಕ್ಷಕ್ಕೆ ನಿಷ್ಠೆಯಾಗಿರ್ತೀನಿ. ಅಲ್ಲಿ ಭಿನ್ನಾಭಿಪ್ರಾಯ, ಮತ್ತೊಂದಕ್ಕೆ ಹೆಚ್ಚು ಒತ್ತು ಕೊಡೋದಿಲ್ಲ. ನನಗೆ ಸಿಕ್ಕ ಅವಕಾಶದಲ್ಲಿ ಏನು ನ್ಯಾಯ ಒದಗಿಸಬೇಕು ಅದನ್ನ ಪ್ರಾಮಾಣಿಕವಾಗಿ ಮಾಡ್ತೀನಿ. ಕೆಲವು ಕಡೆ ಬಸ್ ಗಳ ಸಮಸ್ಯೆಯಿದೆ. ನಮ್ಮ ಸಚಿವರು ಹೊಸದಾಗಿ ಕೆಲವು ನೇಮಕಾತಿಗಳನ್ನ ಮಾಡಿಕೊಳ್ತೀದ್ದಾರೆ. ಹೊಸ ಬಸ್ ಗಳ ಖರೀದಿಗೂ ಮುಂದಾಗಿದ್ದಾರೆ. ಅವೆಲ್ಲಾ ಆದಾಗ ಸಮಸ್ಯೆ ಬಗೆಹರಿಯುತ್ತೆ ಎಂದರು.