ಉಡುಪಿ : ಉಡುಪಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತರಾಗಿರುವ ಶಾಸಕ ಕೆ. ರಘುಪತಿ ಭಟ್ ಮಾಧ್ಯಮಗಳ ಎದುರು ಭಾವುಕರಾಗಿದ್ದಾರೆ.
ನಿನ್ನೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ವೇಳೆ ರಘುಪತಿ ಭಟ್ಗೆ ಟಿಕೆಟ್ ಸಿಗದೇ ಇರುವುದು ಕನ್ಫರ್ಮ್ ಆದ ಹಿನ್ನೆಲೆಯಲ್ಲಿ ಅಭಿಮಾನಿಗಳು ಇಂದು ಅವರ ನಿವಾಸಕ್ಕೆ ಆಗಮಿಸಿದ್ದರು.
ಈ ವೇಳೆ ಮಾತನಾಡಿದ ರಘುಪತಿ ಭಟ್, ಜಾತಿ ಕಾರಣಕ್ಕೆ ನನಗೆ ಟಿಕೆಟ್ ಮಿಸ್ ಆಗಿದೆ. ಟಿವಿ ನೋಡಿ ನನಗೆ ಟಿಕೆಟ್ ಸಿಕ್ಕಿಲ್ಲ ಎಂದು ತಿಳಿಯಬೇಕಾ..? ನಾನು ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಾರೆ.