ಕೆರಗೋಡು ಹನುಮಧ್ವಜ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಶಾಸಕ ಗಣಿಗ ರವಿಕುಮಾರ್, (Ganiga Ravikumar) ಮಂಡ್ಯದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಒಂದು ಊರಿಗೆ ಬೆಂಕಿ ಹಚ್ಚಲೇಬೇಕು ಅಂತ ಡಿಸೈಡ್ ಮಾಡಿದಾಗ ಏನೇನು ಆಗಬೇಕೋ ಅದು ಆಗಿದೆ. ಭಾರತದಲ್ಲಿ ರಾಷ್ಟ್ರಧ್ವಜ (National Flag) ಹಾರಿಸಿದ್ರೂ ಈ ರೀತಿಯ ವಿರೋಧ ಆಗುತ್ತೆ ಅಂದ್ರೆ ಏನು.?ನಾನು ಕೆರಗೋಡು ಗ್ರಾಮದ ಬಸ್ ಸ್ಯ್ಟಾಂಡ್ ಜಾಗ ನೋಡಲು ಹೋದಾಗ ಆ ಸ್ಥಳ ನೋಡಿದ್ದೆ.

ಹನುಮ ದೇವಾಲಯದ ಎದುರು ಆ ಧ್ವಜಸ್ಥಂಬ ಇದೆ.
ಇಲ್ಲಿ ಬಸ್ ನಿಲ್ದಾಣ ಆಗುತ್ತೆ ನಾನು ಅ ಜಾಗದಲ್ಲಿ ಸ್ತಂಭ ಬೇಡ ಅಂತ ಹೇಳಿದ್ದೆ.ಇದಾದ ಬಳಿಕವೂ ಗೌರಿಶಂಕರ ಟ್ರಸ್ಟ್ ನವರು ಧ್ವಜಸ್ಥಂಬ ನಿರ್ಮಾಣಕ್ಕೆ ಅರ್ಜಿ ಕೊಟ್ರು.16ನೇ ತಾರೀಖು ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜಕ್ಕೆ ಅನುಮತಿ ತಕೊಂಡಿದ್ದಾರೆ.
20ನೇ ತಾರೀಖು ಇವರು ಮತ್ತೊಂದು ಕಾರ್ಡ್ ಪ್ಲೇ ಮಾಡಿದ್ರು ಎಂದು ಆರೋಪಿಸಿದ್ದಾರೆ.

ಹನುಮಧ್ವಜ ಹಾಕಿಕೊಳ್ತೇವೆ ಅಂತ ಕೇಳಿ 23ನೇ ತಾರೀಖು ಇಳಿಸೋದಾಗಿ ಅನುಮತಿ ಪಡೆದ್ರು.
ಆದರೆ ಅದನ್ನ ಇಳಿಸದೇ ಉದ್ದಟತನ ಮಾಡಿದ್ದಾರೆ.
ಆ ಜಾಗದಲ್ಲಿ ಡಿಎಸ್ಎಸ್ ನವರು ಬಂದು ಅಲ್ಲಿ ಅಂಬೇಡ್ಕರ್ ಬಾವುಟ ಹಾಕ್ತೀವಿ ಅಂದ್ರು,
ಅದಾದ ಬಳಿಕ ಒಕ್ಕಲಿಗರು ಬಂದು ಕೆಂಪೇಗೌಡರ ಬಾವುಟ ಹಾಕ್ತೀವಿ ಅಂದ್ರು. ಕುರುಬ ಸಂಘಟನೆ ಅವ್ರು ಬಂದು ರಾಯಣ್ಣನ ಬಾವುಟ ಹಾಕ್ತೀವಿ ಅಂದ್ರು.
ಹಾಗಾಗಿ ಎಲ್ಲರಿಗೂ ಅವಕಾಶ ಕೊಡಲು ಆಗುತ್ತಾ.?
ಇದಕ್ಕೆ ಸ್ಥಳೀಯ ಆಡಳಿತ ತಡೆಯೊಡ್ಡಿ ಹನುಮಾನ್ ಧ್ವಜ ತೆರವು ಮಾಡಿದ್ದಾರೆ. ಆದ್ರೆ ಕೆಲವರು ಕ್ರಿಮಿನಲ್ ಮೈಂಡ್ ನವರು ಇದನ್ನ ರಾಜಕೀಯಕ್ಕೆ ಬಳಸಿಕೊಂಡ್ರು. ಇದಕ್ಕೆ ಬೆಂಕಿ ಹಚ್ಚಿ ವ್ಯವಸ್ಥಿತ ಷಡ್ಯಂತ್ರ ಮಾಡಿದ್ದಾರೆ ಎಂದರು.
ಹನುಮ ಧ್ಚಜ ಹಾಕಿದ್ದನ್ನ ಪ್ರಶ್ನಿಸಿ ಕೆಲ ದಲಿತ ಮುಖಂಡರು ಡಿಸಿ ಹತ್ರ ದೂರು ನೀಡಿದ್ರು.
ಹಾಗಾಗಿ ಇದನ್ನ ಜಿಲ್ಲಾಧಿಕಾರಿ ತೆರವಿಗೆ ಅದೇಶ ಮಾಡಿದ್ದಾರೆ.ಅದಕ್ಕಾಗಿ ಪೊಲೀಸರ ಸಮ್ಮುಖದಲ್ಲಿ ಹನುಮಧ್ವಜ ಇಳಿಸಿ ತ್ರಿವರ್ಣ ಧ್ಚಜ ಹಾರಿಸಲಾಗಿದೆ.
ಹೊರಗಿನಿಂದ ಗಲಭೆಕೋರರನ್ನ ಕರೆಸಿ ಗಲಾಟೆ ಮಾಡಲಾಗಿದೆ. ನಮ್ಮ ಕೆರಗೋಡು ಜನಕ್ಕೆ ಆ ಘೋಷಣೆ ಕೂಗೋದಕ್ಕೆ ಬರಲ್ಲ. ಆದರೆ ಹೊರಗಿನವರನ್ನ ಕರೆತಂದು ಗಲಾಟೆ ಮಾಡಿ, ಕಲ್ಲು ಹೊಡೆಸಿದ್ದಾರೆ. ನಮ್ಮ ಫ್ಲೆಕ್ಸ್ ಗಳನ್ನ ಕಿತ್ತುಹಾಕಿಸಿ ಗಲಾಟೆ ಮಾಡಿಸಿದ್ದಾರೆ. ತ್ರಿವರ್ಣ ಧ್ವಜ ಹಾರಿಸಿದ್ದಕ್ಕೆ ನಮ್ಮ ವಿರುದ್ಧ ಪ್ರತಿಭಟನೆ ಮಾಡ್ತಾರೆ ಅಂದ್ರೆ ಏನು.?
ಜೆಡಿಎಸ್ ನ ರಾಮಚಂದ್ರು, ಬಿಜೆಪಿ ಮುಖಂಡ ಅಶೋಕ್ ಜಯರಾಮ್ ಹಾಗೂ ಸ್ಥಳೀಯ ಪುಡಾರಿಗಳು ಇಲ್ಲಿ ಗಲಭೆ ಸೃಷ್ಠಿಸಿದ್ದಾರೆ ಎಂದು ಶಾಸಕ ಗಣಿಗ ರವಿಕುಮಾರ್ ಆರೋಪ ಮಾಡಿದ್ದಾರೆ.