ಮಂಡ್ಯ: ಕರ್ನಾಟಕ(Karnataka)ದಲ್ಲಿ ಅವರ ಸ್ಟ್ರ್ಯಾಟರ್ಜಿ ಏನೂ ವರ್ಕ್ ಔಟ್(Workout) ಆಗಲ್ಲ, ರಾಷ್ಟ್ರದಲ್ಲಿ ಏನಾಗುತ್ತೆ ಕಾದು ನೋಡೋಣ ಎಂದು ಸಚಿವ(Minister) ಚಲುವರಾಯಸ್ವಾಮಿ(Cheluvarayaswamy) ಹೇಳಿಕೆ ನೀಡಿದ್ದಾರೆ.
ಅಮಿತ್ ಶಾ ಮೈಸೂರು(Mysore) ಪ್ರವಾಸದ ವಿಚಾರವಾಗಿ ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ(AmitShah) ಅವರದ್ದು ಸ್ಟ್ರ್ಯಾಟರ್ಜಿ ಮಾಡೋದು ಅಷ್ಟೇ. ಆದರೆ ಈ ರಾಷ್ಟ್ರದ ಜನ ಏನ್ಮಾಡ್ತಿದ್ದಾರೆ, ಏನ್ ಪರಿಸ್ಥಿತಿ ಇದೆ. ರಾಜ್ಯದ ಜನ ಏನು ಕೇಳ್ತಿದ್ದಾರೆ, ಏನು ಕೊಡಬೇಕು ಅದೆಲ್ಲ ಮುಖ್ಯವಲ್ಲ. ಪ್ರಧಾನಮಂತ್ರಿಗಳು ಪ್ರಪಂಚ ಸುತ್ತೋದು, ಇವರು ಸ್ಟ್ರ್ಯಾಟರ್ಜಿ ಮಾಡೋದು ಅಷ್ಟೇ ಅವರಿಗೆ ಗೊತ್ತಿರೋದು. ಪಾಪ ಅವರಿಗೆ ಒಳ್ಳೆಯದಾಗಲಿ, ಹಣೆಬರಹ ಚೆನ್ನಾಗಿದ್ದಾಗ ನಡೆದುಕೊಂಡು ಹೋಗುತ್ತೆ. ಯಾವಾಗಾದ್ರೂ ಒಂದು ದಿನ ಎಂಡ್ ಆಗಬೇಕಲ್ವ? ನೋಡೋಣ ಎಷ್ಟು ದಿನ ಮಾಡ್ತಾರೆ ಸ್ಟ್ರ್ಯಾಟರ್ಜಿ ಮಾಡ್ಕೊಂಡ್ ಹೋಗ್ಲಿ ಎಂದರು.

ಇಂದಿನಿಂದ ಬಜೆಟ್(Budget) ಅಧಿವೇಶನ ವಿಚಾರವಾಗಿ ಮಾತನಾಡಿದ ಅವರು, ನಮ್ಮದು ಕೇಂದ್ರ ಸರ್ಕಾರದ ತರ ಬಜೆಟ್ ಅಲ್ಲ. ನಮ್ಮ ರಾಜ್ಯ ಸರ್ಕಾರದ ಬಜೆಟ್ 7 ಕೋಟಿ ಜನರಿಗೂ ಉತ್ತಮ ಬಜೆಟ್ ಆಗಿರಲಿದೆ. ಸಿದ್ದರಾಮಯ್ಯರ(Siddaramaiah) ಬಜೆಟ್ ಜನರ ನಿರೀಕ್ಷೆಯ ಬಜೆಟ್ ಆಗಲಿದೆ. ಖಂಡಿತ ಜನರ ನಿರೀಕ್ಷೆ ಸಾಕಷ್ಟಿದೆ. ಎಲ್ಲ ನಿರೀಕ್ಷೆಯನ್ನ ಒಂದೇ ಸಲ ಫುಲ್ ಫಿಲ್ ಮಾಡೋಕೆ ಆಗಲ್ಲ, ಇನ್ನೂ 4 ವರ್ಷದಲ್ಲಿ ಎಲ್ಲವನ್ನೂ ಹಂತ ಹಂತವಾಗಿ ಈಡೇರಿಸ್ತೇವೆ. ಮಂಡ್ಯ(Mandya) ಜನರೂ ಮೆಚ್ಚುವ, ಉತ್ತಮ ಬಜೆಟ್ ಕೊಡ್ತೀವಿ ಎಂದು ಹೇಳಿದರು.
#Cheluvarayaswamy #AmitShah #Congress #LokaSaba #Minister