• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

MGNREGA: ನೋಂದಾಯಿಸಿದ 7.6 ಕೋಟಿ ಕಾರ್ಮಿಕರಲ್ಲಿ 30 ಲಕ್ಷ ಕಾರ್ಮಿಕರಿಗಷ್ಟೇ ಉದ್ಯೋಗ

by
April 30, 2020
in ದೇಶ
0
MGNREGA: ನೋಂದಾಯಿಸಿದ 7.6 ಕೋಟಿ ಕಾರ್ಮಿಕರಲ್ಲಿ 30 ಲಕ್ಷ ಕಾರ್ಮಿಕರಿಗಷ್ಟೇ ಉದ್ಯೋಗ
Share on WhatsAppShare on FacebookShare on Telegram

ಕೇಂದ್ರ ಸರ್ಕಾರದ ಪ್ರಮುಖ ಗ್ರಾಮೀಣ ಉದ್ಯೋಗ ಯೋಜನೆಯನ್ನು ಎಪ್ರಿಲ್‌ 20ರ ಬಳಿಕ ಪುನರಾರಂಭಿಸಲು ಸ್ಪಷ್ಟ ನಿರ್ದೇಶನ ನೀಡಿದ್ದರೂ ಈ ಎಪ್ರಿಲ್‌ನಲ್ಲಿ ಕೇವಲ 30 ಲಕ್ಷ ಜನರಿಗಷ್ಟೇ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತ್ರಿ ಕಾಯ್ದೆ(MGNRGA)ಯಡಿಯಲ್ಲಿ ಉದ್ಯೋಗ ಒದಗಿಸಲಾಗಿದೆ. ಈವರೆಗೆ ಒಟ್ಟು ಉದ್ಯೋಗ ಪಡೆಯುತ್ತಿದ್ದ ಸರಾಸರಿ ಜನರ 17% ದಷ್ಟು ಮಾತ್ರ ಜನರಿಗೆ ಈ ಬಾರಿ ಉದ್ಯೋಗ ಲಭಿಸಿರುವುದನ್ನು ಅಂಕಿಅಂಶಗಳು ಬಹಿರಂಗಪಡಿಸಿವೆ. ಮಧ್ಯ ಎಪ್ರಿಲ್‌ನಲ್ಲಿ ಕೇವಲ ಒಂದು ಶೇಕಡಾ ಜನರಷ್ಟೇ ಉದ್ಯೋಗ ಪಡೆದಿದ್ದರು. ಈ ಎಪ್ರಿಲ್‌ನ ಅಂಕಿಅಂಶದ ಪ್ರಕಾರ ಇದು ಕಳೆದ ಐದು ವರ್ಷಗಳಲ್ಲೇ ಅತ್ಯಂತ ಕಡಿಮೆ.

ADVERTISEMENT

ಕಳೆದ ವರ್ಷ 1.7 ಕೋಟಿ ಜನರು ಈ ಕಾಯ್ದೆಯ ಮುಖಾಂತರ ಉದ್ಯೋಗ ಪಡೆದುಕೊಂಡಿದ್ದರು. ಈ ಬಾರಿ ಅದರ 82% ಕುಸಿತ ಕಂಡಿದೆ. ಕೆಲವು ರಾಜ್ಯಗಳಲ್ಲಿ ಕಾರ್ಯಸ್ಥಳಗಳನ್ನು ಮರುಪ್ರಾರಂಭಿಸದ ಕಾರಣ ಎಪ್ರಿಲ್‌ 29ರವರೆಗೆ ಯಾವುದೇ ಉದ್ಯೋಗ ಒದಗಿಸಲಿರಲಿಲ್ಲ. ಹರಿಯಾಣದಲ್ಲಿ 1,005, ಕೇರಳದಲ್ಲಿ 2,014 ಹಾಗೂ ಗುಜರಾತಲ್ಲಿ 6,376 ಉದ್ಯೋಗಗಳನ್ನು ಮಾತ್ರ ನೀಡಲಾಗಿದ್ದು ಈ ರಾಜ್ಯಗಳು ಅತೀ ಕಡಿಮೆ ಉದ್ಯೋಗ ದರ ಹೊಂದಿವೆ. ಆಂಧ್ರಪ್ರದೇಶದಲ್ಲಿ ಕಳೆದ ವರ್ಷ 25 ಲಕ್ಷ ಉದ್ಯೋಗಗಳನ್ನು ಒದಗಿಸಲಾಗಿದ್ದು, ಆದರೆ, ಈ ಬಾರಿ 10 ಲಕ್ಷ ಉದ್ಯೋಗಗಳನ್ನಷ್ತೇ ಒದಗಿಸಲಾಗಿದೆ.

ಲಾಕ್‌ಡೌನ್‌ನಿಂದ ಜೀವನೋಪಾಯ ಕಳೆದುಕೊಂಡಿರುವ ಹಾಗೂ ತಂಡೋಪತಂಡವಾಗಿ ಹಿಂತಿರುಗುತ್ತಿರುವ ವಲಸೆ ಕಾರ್ಮಿಕರಿಗೆ ತಮ್ಮ ಹಳ್ಳಿಗಳಲ್ಲಿ ಉದ್ಯೋಗ ಒದಗಿಸಲಾಗದಿರುವುದು ಭಾರತ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ. ಅಲ್ಲದೆ ಕನಿಷ್ಟ ಪರಿಹಾರ ವೇತನವನ್ನು ಕಾರ್ಮಿಕರಿಗೆ ಪಾವತಿಸಬೇಕೆಂಬ ಕೂಗು ಬಲವಾಗಿ ಕೇಳತೊಡಗಿವೆ.

ಎಪ್ರಿಲ್‌ ತಿಂಗಳ ನಷ್ಟವನ್ನು ಸರಿದೂಗಿಸಲು MGNREGA ಕು

ಟುಂಬಗಳಿಗೆ ಕನಿಷ್ಟ ಹತ್ತು ದಿನಗಳ ವೇತನವನ್ನಾದರೂ ಸರಕಾರ ನೀಡಬೇಕು ಎಂದು IIM ಅಹ್ಮದಾಬಾದ್‌ನಲ್ಲಿ ಪ್ರಭೋದಕಿಯಾಗಿರುವ ಆರ್ಥಿಕ ತಜ್ಞೆ ರೀತಿಕ ಖೇರ್ ಹೇಳಿದ್ದಾರೆ.‌

MGNREGA ಕಾರ್ಡ್‌ ಹೊಂದಿರುವ 7.6 ಕೋಟಿ ಕಾರ್ಮಿಕರಿಗೆ ಲಾಕ್‌ಡೌನ್‌ ಇರುವವರೆಗೆ ಸಂಪೂರ್ಣ ಭತ್ಯೆಯನ್ನು ನೀಡಬೇಕೆಂದು ಮಝ್ದೂರ್‌ ಕಿಸಾನ್‌ ಶಕ್ತಿ ಸಂಘಟನೆ ಎಪ್ರಿಲ್‌ 4ರಂದು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಹಾಕಿತ್ತು. ಎಪ್ರಿಲ್‌ 20ರಂದು ಮಧ್ಯಂತರ ಅರ್ಜಿ ಸಲ್ಲಿಸಿ ಮಾರ್ಚ್‌ 24ರಂದು ಲಾಕ್‌ಡೌನ್‌ ಘೋಷಿಸುವಾಗ ಕೆಲಸದಲ್ಲಿದ್ದ ಕಾರ್ಮಿಕರಿಗೆ ನಿರುದ್ಯೋಗ ಭತ್ಯೆಯನ್ನು ನೀಡಬೇಕೆಂದು ಕೋರಿತ್ತು. ಲಾಕ್‌ಡೌನ್ ಘೋಷಿಸುವಾಗ ಈ ಯೋಜನೆಯಡಿಯಲ್ಲಿ ಸುಮಾರು 1.6 ಕೋಟಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕನಿಷ್ಟ ನಿರುದ್ಯೋಗ ಭತ್ಯೆಯನ್ನಾದರೂ ಈ ಕಾರ್ಮಿಕರಿಗೆ ಪಾವತಿಸಬೇಕೆಂದು ಅರ್ಜಿ ಸಲ್ಲಿಸಿರುವ ಕಾರ್ಯಕರ್ತರಲ್ಲಿ ಒಬ್ಬರಾದ ನಿಖಿಲ್‌ ಡೇ ಅಭಿಪ್ರಾಯಿಸಿದ್ದಾರೆ.

ಈ ಯೋಜನೆಯಡಿಯಲ್ಲಿ ನೋಂದಾಯಿಸಿದ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗದಿದ್ದರೆ ಮೊದಲ ತಿಂಗಳಲ್ಲಿ ಸಂಬಳದ ಕಾಲು ಭಾಗವನ್ನು, ಎರಡನೆ ತಿಂಗಳಲ್ಲಿ ಸಂಬಳದ ಅರ್ಧ ಭಾಗವನ್ನು, ನಂತರದ ತಿಂಗಳಲ್ಲಿ ಸಂಪೂರ್ಣ ವೇತನವನ್ನು ನೀಡಬೇಕೆಂದು ಯೋಜನೆ ಷರತ್ತು ವಿಧಿಸುತ್ತದೆ.

Tags: MGNREGAಕಾರ್ಮಿಕಕೇಂದ್ರಲಾಕ್ ಡೌನ್
Previous Post

ರಿಷಿ ಕಪೂರ್; ‌ಕರುನಾಡಿನ ಬಾಂಧವ್ಯದ ನೆನಪುಗಳು

Next Post

ಬಡವರನ್ನು ಸಾಯಲು ಬಿಡಬೇಡಿ, ಬಿಡಿಗಾಸು ನೀಡಿ; ಬಡವರಿಂದಲೇ ಭಾರತದ ಬೆಳವಣಿಗೆ: ರಘುರಾಮ್ ರಾಜನ್

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
Next Post
ಬಡವರನ್ನು ಸಾಯಲು ಬಿಡಬೇಡಿ

ಬಡವರನ್ನು ಸಾಯಲು ಬಿಡಬೇಡಿ, ಬಿಡಿಗಾಸು ನೀಡಿ; ಬಡವರಿಂದಲೇ ಭಾರತದ ಬೆಳವಣಿಗೆ: ರಘುರಾಮ್ ರಾಜನ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada