ಕರೋನಾ ಹೆಚ್ಚಳದ ಕಾರಣದಿಂದಾಗಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿತ್ತು. ಈಗ ಮತ್ತೆ ಫೆಬ್ರವರಿ 20ರ ನಂತರ 2ನೇ ಹಂತದಲ್ಲಿ ರಾಮನಗರದಿಂದ ಮತ್ತೆ ಪುನರಾರಂಭಿಸೋದಾಗಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಈ ಕುರಿತಂತೆ ಇಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಸುರೇಸ್, ಫೆಬ್ರವರಿ 20ರ ನಂತರ ಮೇಕೆದಾಟು 2ನೇ ಹಂತದ ಪಾದಯಾತ್ರೆಯನ್ನು ಪುನರಾರಂಭಿಸಲಾಗುತ್ತದೆ. ಎಲ್ಲಿ ಮೊಟಕುಗೊಳಿಸಿದ್ದೆವೊ ಅಲ್ಲಿಂದಲೇ ಪಾದಯಾತ್ರೆ ಪುನರಾರಂಬಿಸುವುದಾಗಿ ತಿಳಿಸಿದರು.

ಒಂದು ವರ್ಷದಿಂದ ಮಾತ್ರ ರಾಮನಗರ ಜಿಲ್ಲೆ ಅಭಿವೃದ್ಧಿ ಕಾಣುತ್ತಿದೆ. ಮುಂಚೆ ಕಾಣುತ್ತಿರಲಿಲ್ಲ ಹಾಗೇ, ಹೀಗೆ ಅಂತ ಹೇಳುತ್ತಿದ್ದಾರೆ. ಕೆಲವರು ಸುಳ್ಳೇ ಮನೆ ದೇವರನ್ನು ಮಾಡಿಕೊಂಡಿದ್ದಾರೆ. ನಾನು ಅವರ ಹೆಸರು ಹೇಳೋದಿಲ್ಲ ಎನ್ನುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.