ಕಿಡ್ನ್ಯಾಪ್ ಹಾಗು ಲೈಂಗಿಕ ದೌರ್ಜ್ಯನ್ಯ, ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವ ಶಾಸಕ ರೇವಣ್ಣ ಕುಟುಂಬ ಕಾನೂನು ಸಂಕಷ್ಟದಲ್ಲಿ ಸಿಲುಕಿದೆ. ಇದೀಗ ಜಾಮೀನು(Bail) ಪಡೆದುಕೊಂಡಿರುವ ಶಾಸಕ ರೇವಣ್ಣ(Revanna), ತನ್ನ ಮೇಲಿನ FIR ರದ್ದು ಮಾಡುವಂತೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೈಕೋರ್ಟ್ನಲ್ಲಿ(High Court) ಮೇ 31ರಂದು ಎಫ್ಐಆರ್ ರದ್ದು ಕೋರಿದ ಅರ್ಜಿ ವಿಚಾರಣೆಗೆ ಬರಲಿದೆ. ಇದೇ ವೇಳೆ ರೇವಣ್ಣ ಕುಟುಂಬಕ್ಕೆ ಸಂಕಷ್ಟ ತಂದಿಟ್ಟ ಪ್ರಜ್ವಲ್ ರೇವಣ್ಣ ಮೇ 31ರಂದು ಭಾರತಕ್ಕೆ ಬಂದು SIT ಎದುರು ವಿಚಾರಣೆಗೆ ಹಾಜರಾಗ್ತೇನೆ(Attending) ಎಂದು ಈಗಾಗಲೇ ಘೋಷಣೆ ಮಾಡಿದ್ದು, ಮೇ 31ರಂದು ವಿಶೇಷತೆ ಏನು ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ.
ಕಿಡ್ನ್ಯಾಪ್ ಕೇಸ್ನಲ್ಲಿ ಸಹ ಆರೋಪಿ ಆಗಿರುವ Bhavani Revanna ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪರ ವಿರೋಧ ವಾದ ಆಲಿಸಿದ ನ್ಯಾಯಾಧೀಶರು ಮೇ 31ಕ್ಕೆ ಆದೇಶ ಕಾಯ್ದಿರಿಸಿದ್ದಾರೆ. ಒಂದು ವೇಳೆ ಅಂದು ಜಾಮೀನು ಸಿಗದೆ ಹೋದರೆ ಭವಾನಿ ರೇವಣ್ಣ ಕೂಡ ಜೈಲು ದರ್ಶನ ಮಾಡೋದು ಕಾಯಂ ಆಗಲಿದೆ.
ಇನ್ನು ಭಾರತಕ್ಕೆ(India) ವಾಪಸ್ ಬರ್ತಿರೋ ಪ್ರಜ್ವಲ್ ರೇವಣ್ಣ ಕೂಡ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದು, ಇಂದು ಅರ್ಜಿ ವಿಚಾರಣೆ ಮಾಡಿದ ಜನಪ್ರತಿನಿಧಿಗಳ ಕೋರ್ಟ್ ಶುಕ್ರವಾರ, ಮೇ 31ಕ್ಕೆ ಅರ್ಜಿ(Application) ಮುಂದೂಡಿಕೆ ಮಾಡಿದೆ. ವಿದೇಶದಿಂದ ಪ್ರಜ್ವಲ್ ರೇವಣ್ಣ ಭಾರತಕ್ಕೆ ವಾಪಸ್ ಬರ್ತಿರೋದು ಮೇ 31, ರೇವಣ್ಣ ಅರ್ಜಿ ವಿಚಾರಣೆ ಮೇ 31, ಪ್ರಜ್ವಲ್ ಜಾಮೀನು ಅರ್ಜಿ ವಿಚಾರಣೆ ಮೇ 31, ಭವಾನಿ ನಿರೀಕ್ಷಣಾ ಜಾಮೀನು ಅರ್ಜಿ ಆದೇಶ ಮೇ 31. ಒಟ್ಟಾರೆ ಮೇ 31 ರೇವಣ್ಣ ಕುಟುಂಬದ ಭವಿಷ್ಯ ನಿರ್ಧಾರ ಮಾಡಲಿದೆ.
ದೇವರು, ದೈವಗಳ ಮೇಲೆ ಅಪಾರ ಪ್ರಮಾಣದ ನಂಬಿಕೆ ಇಟ್ಟುಕೊಂಡಿರುವ ಮಾಜಿ ಸಚಿವ H.D ರೇವಣ್ಣ ಮನೆಯಿಂದ ಆಚೆ ಬರುವುದಕ್ಕೂ ಶಾಸ್ತ್ರ, ಗಳಿಗೆ ನೋಡಿಕೊಂಡೇ ಹೆಜ್ಜೆ ಹಿಡುತ್ತಾರೆ. ಇದೀಗ ಮೇ 31ಕ್ಕೆ ಭಾರತಕ್ಕೆ ಪ್ರಜ್ವಲ್ ಬರುವುದಕ್ಕೆ ಮುಹೂರ್ತ ನಿಗದಿ ಕೂಡ ರೇವಣ್ಣ ಅವರಿಂದಲೇ ಆಗಿದೆ ಎನ್ನುವ ಚರ್ಚೆ ನಡೆಯುತ್ತಿದೆ. ಈ ನಡುವೆ ಮೇ 31 ರಂದು ಎಲ್ಲಾ ಅರ್ಜಿಗಳ ವಿಚಾರಣೆ ಹಾಗು ಆದೇಶ ಕಾಯ್ದಿರಿಸಿರುವುದು ರೇವಣ್ಣ ಕುಟುಂಬಕ್ಕೆ ಶುಭವೋ..? ಅಶುಭವೋ..? ಅನ್ನೋ ಮಾತುಗಳು ಚರ್ಚೆಯಲ್ಲಿವೆ. ಏನಾದರೂ ಆಗಲಿ ತಪ್ಪಿತಸ್ಥರಿಗೆ ಕಾನೂನು ರೀತ್ಯ ಕ್ರ,ಮ ಆಗಲಿ ಎನ್ನುವುದು ಎಲ್ಲರ ವಾದ
ಕೃಷ್ಣಮಣಿ