• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಮಾಸ್ಕ್ ಧರಿಸಿ ಪತ್ರಿಕೆ ವರದಿಗಳು ಹಿಡಿದು ಮೌನ ಪ್ರತಿಭಟನೆ..

ಪ್ರತಿಧ್ವನಿ by ಪ್ರತಿಧ್ವನಿ
July 6, 2024
in Top Story, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ
0
ಮಾಸ್ಕ್ ಧರಿಸಿ ಪತ್ರಿಕೆ ವರದಿಗಳು ಹಿಡಿದು ಮೌನ ಪ್ರತಿಭಟನೆ..
Share on WhatsAppShare on FacebookShare on Telegram

ವಡಗೇರಿ ತಾಲ್ಲೂಕಿನಲ್ಲಿ ಅಕ್ರಮ ಮರಳು, ಮದ್ಯ, ಮಟ್ಕಾ, ಇಸ್ಪೀಟ್ ತಡೆಯುವಲ್ಲಿ ಆಡಳಿತ ವಿಫಲ:
ಯಾದಗಿರಿ: ಜಿಲ್ಲೆಯ ವಡಗೇರಿ ತಾಲ್ಲೂಕಿನ ವ್ಯಾಪ್ತಿಗೆ ಬರುವ ಅಕ್ರಮ ಮರಳು, ಮದ್ಯ, ಮಟ್ಕಾ ಇಸ್ಪೀಟ್‌ಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಮುಖಕ್ಕೆ ಮಾಸ್ಕ್ ಧರಿಸಿ, ಮರಳು ಕಮೀಟಿ ಸಭೆಯ ವರದಿ ಪ್ರಕಟವಾದ ವಿವಿಧ ಪತ್ರಿಕೆಗಳ ವರದಿಗಳ ಜೆರಾಕ್ಸ್ ಪ್ರತಿಗಳನ್ನು ಹಿಡಿದು ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಮೌನ ಪ್ರತಿಭಟನೆ ನಡೆಸಲಾಯಿತು.

ADVERTISEMENT


ಕರ್ನಾಟಕ ಪ್ರದೇಶ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನಂತರ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಳೆದ ಮೇ. ೨೯ ರಂದು ಜಿಲ್ಲಾ ಮಟ್ಟದ ಮರಳು ಮಾನಿಟರಿಂಗ್ ಕಮೀಟಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಅಕ್ರಮ ಮರಳು ಧಂದೆ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.
ಆದರೆ ಇಲ್ಲಿಯವರೆಗೆ ಅವರ ಆದೇಶ ಬರಿ ಪತ್ರಿಕೆಗಳಲ್ಲಿ ಬಂದ ವರದಿಗೆ ಮಾತ್ರ ಸೀಮಿತವಾಗಿದ್ದು ಎಂದಿನAತೆ ರಾಜಾರೋಷವಾಗಿ ಅಕ್ರಮ ಮರಳು, ಮದ್ಯ, ಮಟ್ಕಾ, ಇಸ್ಪೀಟ್ ಧಂದೆಗಳು ವಡಗೇರಿ ತಾಲ್ಲೂಕಿನಲ್ಲಿ ಯಾರ ಮುಲಾಜಿಲ್ಲದೇ ನಡೆಯುತ್ತಿವೆ.
ತಾಲ್ಲೂಕಿನ ಗೊಂದೆನೂರು, ಕುಮನೂರ, ಕೊಂಕಲ್, ಚೆನ್ನೂರ, ಹಯ್ಯಾ¼, ಐಕೂರುÀ ಸೇರಿದಂತೆ ವಿವಿಧೆಡೆ ಈ ಅಕ್ರಮಗಳು ನಡೆಯುತ್ತಲೇ ಇವೆ.
ಇದರಿಂದಾಗಿ ನಗರ, ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ. ಗ್ರಾಮಗಳಲ್ಲಿ ಜನತೆ ಅಕ್ರಮ ಮದ್ಯ, ಇಸ್ಪೀಟ್ ಮಟ್ಕಾದಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಣ್ಣ ಸಣ್ಣ ವಯಸ್ಸಿನ ಹುಡುಗರು ಸಾವಪ್ಪುತ್ತಿದ್ದಾರೆ.


ಇದಕ್ಕೆ ಕಾರಣ ಪೊಲೀಸ್ ವರಿಷ್ಠಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ವಡಗೇರಿ ಪಿಎಸ್.ಐ. ಅವರ ನಿರ್ಲಕ್ಷö್ಯ ಹಾಗೂ ಕುಮ್ಮಕ್ಕು ಗಳಿಂದಾಗಿ ಇವೆಲ್ಲ ರಾಜಾರೋಷವಾಗಿ ನಡೆಯುತ್ತಿವೆ.
ಈ ಹಿಂದೆ ಹೊಳೆ ದಂಡೆಗೆ ಅಕ್ರಮ ತಡೆಯಲು ಡಿಎಆರ್ ವ್ಯಾನ್ ಗಸ್ತು ತಿರುಗುತ್ತಿತ್ತು ಮತ್ತು ಅಲ್ಲೇ ಬೀಡು ಬಿಟ್ಟಿತ್ತು. ಇತ್ತಿಚೆಗೆ ಡಿಎಆರ್ ವ್ಯಾನ್ ಅನ್ನು ರದ್ದು ಮಾಡಲಾಗಿದೆ. ಭೀಮಾ ಮತ್ತು ಕೃಷ್ಣಾ ನದಿಯೊಳಗೆ ಉಸುಕು ಸಾಗಣೆ ಮಾಡಲು ರಸ್ತೆ ಮಾಡಿಕೊಂಡಿದ್ದಾರೆ. ಇದು ಭಾರಿ ಅಕ್ರಮವಾಗಿದ್ದು ಇಂತಹ ಹಗಲು ದರೋಡೆಗೆ ಪೊಲೀಸರೇ ಸ್ಕೇಚ್ ಹಾಕಿ ಸಹಕಾರ ನೀಡುತ್ತಿರುವಂತಹ ಸಂಗತಿ ಯಾದಗಿರಿಯ ವಡಗೇರಿಯಲ್ಲಿ ಮಾತ್ರ ನಡೆಯುತ್ತಿದೆ ಇಂತಹ ಭಂಡ ವ್ಯವಸ್ಥೆ ಸೃಷ್ಟಿಯಾಗಿದೆ.


ಇಂತಹ ನದಿಯೊಳಗೆ ಸುಮಾರು ಅರ್ಧ ಕಿ.ಮೀ. ಯಷ್ಟು ರಸ್ತೆಯೊಳಗೆ ಭಾರಿ ಗಾತ್ರದ ವಾಹನಗಳು, ಜೆಸಿಬಿ ಹಿಟಾಚಿ ಯಂತ್ರಗಳು ಸಂಚರಿಸುತ್ತಿವೆ. ಅಲ್ಲಿ ಮದಿಯ ಒಡಲು ಬಗೆದು ಮರಳು ತಂದು ದಂಡೆಗೆ ಹಾಕುತ್ತಿದ್ದಾರೆ. ನಂತರ ಅಲ್ಲಿಂದ ಮತ್ತೆ ಲಾರಿಗಳಿಗೆ ಏರಿಸಿ ಸಾಗಿಸುತ್ತಿದ್ದಾರೆ. ರಾತ್ರಿ ಶಬ್ದ ಮಾಲಿನ್ಯದಿಂದ ರಾತ್ರಿ ನೆಮ್ಮದಿಯಿಂದ ಮಲಗಲು ಆಗುತ್ತಿಲ್ಲ, ಹಗಲು ರಾತ್ರಿ ಧೂಳಿನಿಂದಾಗಿ ಪರಿಸರ ಕಲುಷಿತವಾಗುತ್ತಿದೆ, ರಸ್ತೆಗಳು ಹಾಳಾಗುತ್ತಿವೆ. ನಾಯಿ ಮುಂತಾದ ಪ್ರಾಣಿಗಳು ಸಾವಿಗೀಡಾಗುತ್ತಿವೆ.
ಜಿಲ್ಲೆಯ ಎಸ್.ಪಿ. ಎಂದರೆ ಅವರಿಗೆ ಇಂತಹುದ್ದೆಲ್ಲ ಮಾಹಿತಿ ಇರಬೇಕು ಮತ್ತು ಇಂತಹ ಸ್ಥಳಗಳಿಗೆ ಭೆಟಿ ಕೊಟ್ಟು ಮಾಹಿತಿ ಏಕೆ ಪಡೆಯುತ್ತಿಲ್ಲ ಎಂಬುದು ಜನತೆಯ ಪ್ರಶ್ನೆಯಾಗಿದೆ.
ಅಕ್ರಮ ಮರಳು ಸಾಗಣೆ ಮಾಡುವವರು ಧೈರ್ಯವಾಗಿ ಹೇಳುತ್ತಾ ನಾವು ಎಲ್ಲರಿಗೂ ಮಾಮೂಲು ಕೊಟಿದ್ದೇವೆ ಮೇಲಿನವರೆಗೆ ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ.


ಹೀಗೆ ಸಾಗಿದರೆ ಜಿಲ್ಲೆಯಲ್ಲಿ ಅಕ್ರಮಗಳ ದರ್ಬಾರ್ ನಡೆದು ಹಿಂದೆ ಯುಪಿ ಬಿಹಾರ ಆದಂತೆ ಆಗುವಲ್ಲಿ ಸಂಶಯವಿಲ್ಲ ಎಂದು ನಿಮಗೆ ಎಚ್ಚರಿಸುತ್ತಿದ್ದೇವೆ.
ಕೂಡಲೇ ನದಿಯಲ್ಲಿ ಹಾಕಿರುವಂತಹ ಅಕ್ರಮ ರಸ್ತೆಯನ್ನು ತೆರವು ಮಾಡಬೇಕು, ಸ್ಥಳದಲ್ಲಿ ಡಿಎಆರ್ ವಾಹನ ನೇಮಿಸಬೇಕು ಅಕ್ರಮಗಳಿಗೆ ಕಡಿವಾಣ ಹಾಕಬೇಕು
ಇತ್ತಿಚೆಗೆ ಶಿಕ್ಷಣದಲ್ಲಿ ಕೊನೆಯ ಸ್ಥಾನಕ್ಕೆ ಬಂದು ಮರ್ಯಾದೆ ಹೋಯಿತು. ಈಗ ಈ ಅಕ್ರಮಗಳಿಂದ ಜಿಲ್ಲೆ ಮರ್ಯಾದೆಯೂ ಹಾಳಾಗುತ್ತಿದೆ.
ಅಕ್ರಮಗಳಿಗೆ ಸಾಥ್ ಕೊಡುತ್ತಿರುವವರೇ ಅಕ್ರಮ ಮಾಡಿದಂತಾಗಿದ್ದು ಇವುಗಳಿಗೆ ತಕ್ಷಣ ಬ್ರೇಕ್ ಹಾಕಬೇಕು ಆದ್ದರಿಂದ ಕ್ರಮ ವಹಿಸಿ ಈ ಎಲ್ಲ ಅಕ್ರಮಗಳನ್ನು ತಡೆಯಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮೊಹ್ಮದ್ ರಫಿ ವೀರಣ್ಣಗೌಡ, ರಂಗಪ್ಪ, ತಿಪ್ಪಣ್ಣ, ಶರಣು, ಅಯ್ಯಣ್ಣ, ಸಿದ್ದಪ್ಪ, ಶರಣಪ್ಪ, ಹುಲಿಗೆಪ್ಪ, ಹಣಮಂತ, ಸಾಬಣ್ಣ, ಶರಣಬಸವ, ಭೀಮರಡ್ಡಿ, ದೇವಪ್ಪ, ಗೋವಿಂ<ದ, ನಾಗಪ್ಪ, ಭೀಮಾಶಂಕರ, ರವಿ, ಪರಶುರಾಮ, ಅಯ್ಯಣ್ಣ, ನಿಂಗಪ್ಪ ಬಾಗ್ಲಿ ವೆಂಕಟೇಶ, ತಿಮ್ಮನ್ಣ ದೇವಪ್ಪ ಅಯ್ಯಮ್ಮ , ಮರೆಮ್ಮ ಸೇರಿ ಅನೇಕರು ಇದ್ದರು.

Tags: BJPCongress PartyMatkaSand MafiavadageriYadagiri Districtಎಚ್ ಡಿ ಕುಮಾರಸ್ವಾಮಿಬಿಜೆಪಿಸಿದ್ದರಾಮಯ್ಯ
Previous Post

“ಅರ್ಜುನ ಆನೆಯ ಸ್ಮಾರಕದ” ಶಂಕು ಸ್ಥಾಪನೆ..!!

Next Post

ಆರೆಸ್ಸೆಸ್ ಅವರೆಲ್ಲ ಬ್ರಿಟಿಷರ ಜೊತೆ ನಿಂತಿದ್ದರು..!

Related Posts

ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್.. ಅರೆಸ್ಟ್
ಇತರೆ / Others

ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್.. ಅರೆಸ್ಟ್

by ಪ್ರತಿಧ್ವನಿ
January 13, 2026
0

ಬೆಂಗಳೂರು: ಪತ್ನಿ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಲ್ಲದೇ ಆಕೆಗೆ ವಂಚಿಸಿ ಪ್ರೇಯಸಿಯೊಂದಿಗೆ ಚೆಲ್ಲಾಟ ಆಡುತ್ತಿದ್ದ ಟೆಕ್ಕಿ ಪತಿಯನ್ನ DCRE ಪೊಲೀಸರು ಬಂಧಿಸಿದ್ದಾರೆ. ಟೆಕ್ಕಿ ಜೆಡ್ರೆಲಾ...

Read moreDetails
ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

January 13, 2026
Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

January 13, 2026
ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

January 12, 2026
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ

January 12, 2026
Next Post

ಆರೆಸ್ಸೆಸ್ ಅವರೆಲ್ಲ ಬ್ರಿಟಿಷರ ಜೊತೆ ನಿಂತಿದ್ದರು..!

Recent News

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ
Top Story

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

by ಪ್ರತಿಧ್ವನಿ
January 13, 2026
Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!
Top Story

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

by ಪ್ರತಿಧ್ವನಿ
January 13, 2026
ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ
Top Story

ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 12, 2026
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ
Top Story

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ

by ಪ್ರತಿಧ್ವನಿ
January 12, 2026
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್
Top Story

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
January 12, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್.. ಅರೆಸ್ಟ್

ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್.. ಅರೆಸ್ಟ್

January 13, 2026
ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada