ಮರಕುಂಬಿ ಪ್ರಕರಣದ (Marakumbi case) 99 ಅಪರಾಧಿಗಳಿಗೆ ಧಾರವಾಡ ಹೈಕೋರ್ಟ್ (Highcourt) ಸದ್ಯ ಜಾಮೀನು ಮಂಜೂರು ಮಾಡಿದೆ. ಆದರೆ ವಿಪರಿಯಾಸ ಅಂದ್ರೆ ಜಾಮೀನಿಗೆ ವಿಧಿಸಿರುವ ಷರತ್ತುಗಳನ್ನು ಪೂರೈಸಲು ಸಾಧ್ಯವಾಗದೇ ಅಪರಾಧಿಗಳಿಗೆ ಇನ್ನು ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ.

ದಲಿತರ ಮೇಲಿನ ಹಲ್ಲೆ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ನೀಡಿದ್ದು, ಪ್ರತಿಯೊಬ್ಬರು ₹50 ಸಾವಿರ ಬಾಂಡ್ ನೀಡಬೇಕು, ಓರ್ವ ವ್ಯಕ್ತಿಯ ಶೂರಿಟಿ ನೀಡಲು ಕೋರ್ಟ್ ಆದೇಶ ಹೊರಡಿಸಿ ಬೇಲ್ ನೀಡಿದೆ.
ಆದರೆ ಈ 99 ಅಪರಾಧಿಗಳ ಪೈಕಿ ಅನೇಕರಿಗೆ ತಲಾ ₹50 ಸಾವಿರ ಹಣ ಹೊಂದಿಸುವುದು ಕೂಡ ಬಹಳ ಕಷ್ಟವಾಗಿದೆ. ಮರಕುಂಬಿಯಲ್ಲಿ 2014ರ ಆ.28 ರಂದು ದಲಿತರ ಮೇಲೆ ದೌರ್ಜನ್ಯ ನಡೆದಿತ್ತು. ಈ ಸುದ್ದಿ ದೇಶಾದ್ಯಂತ ಸದ್ದು ಮಾಡಿತ್ತು.