ಒಲಿಂಪಿಕ್ಸ್ ಪದಕ ವಿಜೇತ ಭಾರತೀಯ ಬಾಕ್ಸರ್ ವಿಜೇಂದರ್ ಸಿಂಗ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ವಿಜೇಂದರ್ ಸಿಂಗ್ ಅವರು ಒಲಿಂಪಿಕ್ಸ್ ನಲ್ಲಿ ನಾನು ಪದಕ ಪಡೆದಾಗ ಡಾ.ಮನಮೋಹನ್ ಸಿಂಗ್ ಕೂಡ ಅಭಿನಂದಿಸಿದ್ದರು ಆದರೆ ಅವರು ಪಿಎಂ ಮೋದಿಯಂತೆ ನಾಟಕಿಯವಾಗಿ ವರ್ತಿಸಲಿಲ್ಲ ಎಂದು ಹೇಳಿದ್ದಾರೆ.
ಟಿವಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಾಕ್ಸರ್ ವಿಜೇಂದರ್ ಸಿಂಗ್ ಅವರು, ಒಲಂಪಿಕ್ಸ್ ನಲ್ಲಿ ನಾನು ಗೆದ್ದಾಗ ಮನಮೋಹನ್ ಸಿಂಗ್ ಕೂಡ ನನ್ನೊಂದಿಗೆ ಫೋನಿನಲ್ಲಿ ಮಾತನಾಡಿದ್ದರು. ಆದರೆ ಆತ ಯಾವತ್ತೂ ಫೋಟೊ ಅಥವಾ ವಿಡಿಯೋ ತೆಗೆದುಕೊಂಡಿಲ್ಲ. ಅವರು ಕೇವಲ ಫೋನ್ ಮಾಡಿ ಸ್ವಾಗತಿಸಿದರು ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದಾರೆ.,
ಈಗ ಅದನ್ನು ಹೇಗೆ ಪೋಟ್ರೇಟ್ ಮಾಡಲಾಗುತ್ತಿದೆ ನೋಡಿ. ಫೋಟೋಗಳನ್ನು ತೆಗೆಯಲಾಗಿದೆ, ವೀಡಿಯೊಗಳನ್ನು ರೆಕಾರ್ಡ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯಗಳನ್ನು ನೋಡಿದಾಗ ನನಗೆ ತುಂಬಾ ನಗು ಬರುತ್ತದೆ. ಇದು ಮೋದಿ ಸರ್ಕಾರದ ನಾಟಕ ಎಂದು ವಿಜೇಂದರ್ ಸಿಂಗ್ ಟೀಕಿಸಿದ್ದರು. ವಿಜೇಂದರ್ ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ಅಭಿಜಿತ್ ಸಿಂಗ್ ಕೂಡ ಒಪ್ಪಿಕೊಂಡಿದ್ದಾರೆ.

“ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ಅವರು ಕೂಡ ಕರೆ ಮಾಡುತ್ತಿದ್ದರು ಆದರೆ ಅದು ಫೋಟೋ ಅಥವಾ ರೆಕಾರ್ಡಿಂಗ್ ನಾಟಕವಾಗಿರಲಿಲ್ಲ” ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಹೇಳಿಕೆ ಮೂಲಕ ದೇಶದ ಅನೇಕ ಜನರ ಹೃದಯ ಗೆದಿದ್ದಾರೆ. ಈ ಹಿಂದೆ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮರುನಾಮಕರಣ ಮಾಡಿದ್ದಕ್ಕಾಗಿ ವಿಜೇಂದರ್ ಸಿಂಗ್ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
“ಭಾಯ್, ಅವರು ಹೆಸರನ್ನು ಮಾತ್ರ ಬದಲಾಯಿಸಬಹುದು. ಕೆಲವೇ ದಿನಗಳಲ್ಲಿ, ಭಾರತವನ್ನು ಯುಎಸ್ಎ ಎಂದು ಮರುನಾಮಕರಣ ಮಾಡಲಾಗುತ್ತದೆ” ಎಂದು ವಿಜೇಂದರ್ ಸಿಂಗ್ ಟ್ವೀಟ್ ಮಾಡುವ ಮೂಲಕ ಟೀಕಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂಬುದು ಗಮನಾರ್ಹ. ಇದರ ನಂತರ, ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಆಟಗಾರರನ್ನು ಅಭಿನಂದಿಸುತ್ತಿದ್ದಾರೆ. ಪ್ರಧಾನಿ ಮೋದಿ ಅಭಿನಂದಿಸಿರುವ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಈ ಹಿಂದೆ, ರೈತರ ಬೇಡಿಕೆಯಾದ ಮೂರು ವಿಧೇಯಕಗಳನ್ನು ರದ್ದುಪಡಿಸದಿದ್ದರೆ ‘ಖೇಲ್ ರತ್ನ’ವಾಪಸ್ ಮಾಡುವುದಾಗಿ ವಿಜೇಂದರ್ ಸಿಂಗ್ ಹೇಳಿದ್ದರು.
ನಾನು ಪಂಜಾಬ್ ನೊಂದಿಗೆ ಸಾಕಷ್ಟು ನಂಟು ಹೊಂದಿದ್ದೇನೆ. ನನ್ನ ಬಾಕ್ಸಿಂಗ್ ವೃತ್ತಿಜೀವನದಲ್ಲಿ ಪಾಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ಹೆಚ್ಚಿನ ಸಮಯ ಕಳೆದಿದ್ದೇನೆ. ಇದೀಗ ರಾಜ್ಯದ ಋಣ ತೀರಿಸುವುದು ನನ್ನ ಕರ್ತವ್ಯ. ನಾನು ರೈತರ ಬೇಡಿಕೆಗಳಿಗೆ ಸಂಪೂರ್ಣ ಬೆಂಬಲ ನೀಡುವೆ. ಇಡೀ ದೇಶ ಅವರಿಗೆ ಬೆಂಬಲ ನೀಡಬೇಕು. ರೈತರು ದೇಶದ ಜೀವನಾಡಿ. ಅವರಿಲ್ಲದೇ ಇದ್ದರೆ ನಾವು ಒಂದು ದಿನವೂ ಬದುಕಲು ಸಾಧ್ಯವಿಲ್ಲ ಎಂದು ಸೋನೆಪತ್ ನ ಸಿಂಘು ಗಡಿಯಲ್ಲಿ ವಿಜೇಂದರ್ ಹೇಳಿದ್ದರು.