ಹಲವು ತಿಂಗಳುಗಳಿಂದ ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ (Manipur) ಕೇಂದ್ರ ಸರ್ಕಾರದ ನಿರ್ದೇಶನದಂತೆ ಅಸ್ಸಾಂ ರೈಫಲ್ಸ್ (Assam rifise) ಘಟಕಗಳ ಬದಲಿಗೆ ತಲಾ ಒಂದು ಸಾವಿರ ಸಿಬ್ಬಂದಿ ಒಳಗೊಂಡ ಸಿಆರ್ಪಿಎಫ್ನ (CRPF) ಎರಡು ಹೊಸ ಬೆಟಾಲಿಯನ್ಗಳನ್ನು ನಿಯೋಜಿಸಲಾಗಿದೆ.
ತೆಲಂಗಾಣದ (Telangana) ವಾರಂಗಲ್ನಿಂದ ಬೆಟಾಲಿಯನ್ ಸಂಖ್ಯೆ 58 ಹಾಗೂ ಜಾರ್ಖಂಡ್ನ ಲತೇಹರ್ನಿಂದ ಬೆಟಾಲಿಯನ್ ಸಂಖ್ಯೆ 112 ಅನ್ನು ಸ್ಥಳಾಂತರಿಸಲಾಗ್ತಿದೆ. ಜಮ್ಮು ಮತ್ತು ಕಾಶ್ಮೀರ (Jammu & Kashmir) ಮತ್ತು ಈಶಾನ್ಯದ ಇತರ ಕೆಲವು ಭಾಗಗಳಲ್ಲಿ ಕಾರ್ಯಾಚರಣೆಯ ಕರ್ತವ್ಯಕ್ಕಾಗಿ ಮಣಿಪುರದಿಂದ ಎರಡು ಅಸ್ಸಾಂ ರೈಫಲ್ಸ್ ಬೆಟಾಲಿಯನ್ಗಳನ್ನು ಹಿಂತೆಗೆದುಕೊಂಡ ನಂತರ ಸಿಆರ್ಪಿಎಫ್ ಬೆಟಾಲಿಯನ್ಗಳನ್ನು ಸ್ಥಳಾಂತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ಇದರ ಜೊತೆಗೆ ಈ ಭಾಗದಲ್ಲಿ ಗಲಭೆಕೋರರ ಡೋನ್ ದಾಳಿ ತಡೆಯಲು ಆ್ಯಂಟಿ ಡೋನ್ (Anti- drone) ರಕ್ಷಣಾ ವ್ಯವಸ್ಥೆ ಕೂಡ ನಿಯೋಜನೆ ಮಾಡಲಾಗಿದ್ದು, ಯಾವುದಾದ್ರೂ ಅನುಮಾನಾಸ್ಪದ ಡೋನ್ ಕಂಡುಬಂದಲ್ಲಿ ಅಟೋಮ್ಯಾಟಿಕ್ ತಂತ್ರಜ್ಞಾನದಿಂದ ಆ ಡೋನ್ ನ ಹೊಡೆದುರುಳಿಸಲಾಗುತ್ತದೆ.