ಮಂಗಳೂರು: ಇಸ್ರೇಲ್ ಮೇಲೆ ಪ್ಯಾಲೆಸ್ಟೈನ್ ನ ಹಮಾಸ್ ಉಗ್ರರ ದಾಳಿ ಹಿನ್ನೆಲೆ ಇದೀಗ ಆತಂಕ ಎದುರಾಗಿದೆ. ಪ್ಯಾಲೆಸ್ಟೈನ್ ನ ಹಮಾಸ್ ಉಗ್ರರ ಮೇಲೆ ಯುದ್ದ ಸಾರಿದ ಇಸ್ರೇಲ್ನಿಂದಾಗಿ ಅನಿವಾಸಿ ಭಾರತೀಯರು ಆತಂಕಿತರಾಗಿದ್ದಾರೆ. ಇಸ್ರೇಲ್ ಭದ್ರತಾ ಪಡೆಗಳು ಮತ್ತು ಹಮಾಸ್ ಉಗ್ರರ ನಡುವೆ ಭಾರೀ ಕಾಳಗ ನಡೆಯುತ್ತಿದೆ. ಇಸ್ರೇಲ್ ನಾಗರಿಕರ ಗುರಿಯಾಗಿಸಿ ರಾಕೇಟ್ ಗಳನ್ನು ಉಗ್ರರು ಉಡಾಯಿಸುತ್ತಿದ್ದಾರೆ.
![](https://pratidhvani.com/wp-content/uploads/2023/10/WhatsApp-Image-2023-10-10-at-1.38.27-PM.jpeg)
ಇಸ್ರೇಲ್ ಒಳಗೆ ನುಗ್ಗಿರುವ ಸಾವೀರಾರು ಹಮಾಸ್ ಉಗ್ರರು, ಪಶ್ಚಿಮ ಇಸ್ರೇಲ್ ಪ್ರದೇಶಗಳ ರಸ್ತೆಗಳಲ್ಲಿ ಭಾರೀ ಗನ್ ಬ್ಯಾಟಲ್ ನಡೆಯುತ್ತಿದೆ. ಇಸ್ರೇಲ್ನಲ್ಲಿ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿರುವ ಪರಿಸ್ಥಿತಿಯಿಂದಾಗಿ ಇಸ್ರೇಲ್ ನಲ್ಲಿ ಸಿಲುಕಿಕೊಂಡಿರುವ ಸಾವಿರಾರು ಭಾರತೀಯರು ಆತಂಕಿತರಾಗಿದ್ದಾರೆ.
![](https://pratidhvani.com/wp-content/uploads/2023/10/WhatsApp-Image-2023-10-10-at-1.38.28-PM.jpeg)
ಕಳೆದ 16 ವರ್ಷಗಳಿಂದ ಇಸ್ರೇಲ್ನ ಟಲ್ ಅವೀವ್ನಲ್ಲಿ ನೆಲೆಸಿರುವ ಪ್ರವೀಣ್ ಅವರ ಕುಟುಂಬಿಕರು ಮಂಗಳೂರಿನಲ್ಲಿ ನೆಲೆಸಿದ್ದಾರೆ.ನಗರ ಹೊರವಲಯದ ದಾಬಸ್ ಕಟ್ಟೆಯಲ್ಲಿರುವ ಪ್ರವೀಣ್ ಕುಟುಂಬವೂ ಆತಂಕಿತರಾಗಿದ್ದಾರೆ. ಆದರೆ ಸದ್ಯ ಅವರು ಸುರಕ್ಷಿತರಾಗಿದ್ದಾರೆ. ದೂರವಾಣಿ ಮೂಲಕ ಪ್ರವೀಣ್ ಸುರಕ್ಷತೆಯನ್ನು ಮನೆ ಮಂದಿ ಖಾತರಿ ಪಡಿಸಿದ್ದಾರೆ.
ಬಂಕರ್ನಲ್ಲಿ ಪ್ರವೀಣ್ ಪಿಂಟೋ ಸುರಕ್ಷಿತರಾಗಿದ್ದಾರೆ. ಅಲ್ಲಿ ಮನೆಯಿಂದ ಹೊರ ಬರದಂತೆ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ ಎಂದು ಮನೆ ಮಂದಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.