ಸಕ್ಕರೆನಾಡಲ್ಲಿ (mandya) ಈ ಬಾರಿಯೂ ತ್ರಿಕೋನ ಕದನ ಏರ್ಪಡೋದು ನಿಶ್ಚಿತ. 2019ರಲ್ಲಿ ಜಿದ್ದಿಗೆ ಬಿದ್ದು ಮಂಡ್ಯ ಗೆದ್ದ ಗಟ್ಟಿಗಿತ್ತಿ ಸುಮಲತಾ (sumalatha) ಈ ಬಾರಿಯೂ ಅಂಥದ್ದೇ ಸನ್ನಿವೇಶದಲ್ಲಿ ಇದ್ದಹಾಗಿದೆ, ಬದಲಾದ ರಾಜಕೀಯ ಪರಿಸ್ಥಿತಿ ಮಂಡ್ಯದಲ್ಲಿ ಮತ್ತೆ ಬೆಂಕಿ ಹೊತ್ತಿಸಿದೆ. ಬಿಜೆಪಿಯ (bjp) ಬೆಂಬಲ ಹೊಂದಿದ್ದ ಸುಮಲತಾಗೆ ಈ ಬಾರಿಯ ಆಯ್ಕೆ ಕಗ್ಗಂಟಾಗಿತ್ತು.ಆದ್ರೆ, ಚಕ್ರವ್ಯೂಹದಿಂದ ಹೊರಬಂದ ಸುಮಲತಾ, ಮಂಡ್ಯದಲ್ಲಿ ಪಕ್ಷೇತರ ಸಮರ ಸಾರಲು ಸಜ್ಜಾದಂತೆ ಕಾಣಿಸ್ತಿದೆ. ಲೇಟ್ ಆ್ಯಂಡ್ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟ ರೆಬೆಲ್ ಲೇಡಿ, ಯಾರಿಗೆ ಕಂಟಕ ತರ್ತಾರೆ ಅನ್ನೋದೇ 2 ಪಕ್ಷಗಳಿಗೂ ಚಿಂತೆ ಶುರುವಾಗಿದೆ..
2019ರಲ್ಲಿ ಜೆಡಿಎಸ್ನ (Jds)ವಿರೋಧಿ ಮತಗಳು ಒಂದಾಗಿತ್ತು.. ಕಾಂಗ್ರೆಸ್ನ (Congress) ಒಳ ಏಟು, ಬಿಜೆಪಿಯ ಬಹಿರಂಗ ಬೆಂಬಲದಿಂದ ನಿಖಿಲ್ (Nikhil Kumarswamy) ವಿರುದ್ಧ ಸ್ವಾಭಿಮಾನಿ ಹೆಸರಲ್ಲಿ ಸುಮಲತಾ ಗೆದ್ದು ಬೀಗಿದ್ದರು.ಆದ್ರೆ ಈ ಬಾರಿ ವಿಭಿನ್ನ ಮತ ಸಮೀಕರಣ ಆಗಲಿದೆ.. ಜೆಡಿಎಸ್-ಕಾಂಗ್ರೆಸ್ ನೇರ ಕದನ ಏರ್ಪಟ್ಟಿದ್ದು. ಇಲ್ಲಿ ಸುಮಲತಾ ಎಂಟ್ರಿ ಆಗ್ತಿದ್ದಾರೆ.. ಹೀಗಾಗಿ ಸುಮಲತಾ ವಿಭಜಿಸುವ ಮತಗಳ ಬಗ್ಗೆ ಕ್ಷೇತ್ರದಲ್ಲಿ ಚರ್ಚೆ ಶುರುವಾಗಿದೆ..

ಇಲ್ಲಿ ಎರಡು ರೀತಿಯ ವಿಶ್ಲೇಷಣೆ ಕೇಳಿಬರ್ತಿದೆ. ಒಂದು ಅಂಬರೀಶ್ (Ambareesh) ಬೆಂಬಲಿಗರು ಮೂಲತಃ ಕಾಂಗ್ರೆಸ್ ಬೆಂಬಲಿಗರು.. ಈ ಮತಗಳನ್ನ ಸಂಸದೆ ಸುಮಲತಾ ಪಡೆದ್ರೆ, ಜೆಡಿಎಸ್ಗೆ ಲಾಭ ಆಗಲಿದೆ ಅನ್ನೋ ಲೆಕ್ಕಾಚಾರ..ಎರಡು, ಸದ್ಯ ಬಿಜೆಪಿಯಲ್ಲಿ ಹಲವರು ಸುಮಲತಾ ಬೆಂಬಲಿಗರಿದ್ದಾರೆ.. ಇವರು ಯಾರಿಗೆ ಬೆಂಬಲಿಸ್ತಾರೆ ಅನ್ನೋದು ಕುತೂಹಲ.. ಒಂದ್ವೇಳೆ, ಮೈತ್ರಿಧರ್ಮ ಪಾಲನೆ ಆಗದೇ ಸುಮಲತಾ ಬೆಂಬಲಿಸಿದ್ರೆ, ಕಾಂಗ್ರೆಸ್-ಜೆಡಿಎಸ್ ಮಧ್ಯೆ ಸಮಬಲದ ಪೈಪೋಟಿ ಏರ್ಪಡಲಿದೆ.. ಮೈತ್ರಿ ಧರ್ಮ ಪಾಲಿಸಿದ್ರೆ ಚಿತ್ರಣ ರೋಚಕವಾಗಲಿದೆ.. ಒಟ್ಟಾರೆ, ಸುಮಲತಾ ಸ್ಪರ್ಧೆ ಯಾರಿಗೆ ಲಾಭ? ಯಾರಿಗೆ ನಷ್ಟ ಅನ್ನೋ ಲೆಕ್ಕಾಚಾರ ಯಾರಿಗೂ ಊಹೆಗೂ ನಿಲುಕುತ್ತಿಲ್ಲ.