ಕೊನೆಗೂ ಮಂಡ್ಯ(Mandya) ಹಗ್ಗಜಗ್ಗಾಟ ಒಂದು ಹಂತಕ್ಕೆ ತಲುಪಿದೆ. ಬಿಜೆಪಿ ಹೈಕಮಾಂಡ್ (BJP high command)ನಾಯಕರ ಸಮ್ಮುಖದಲ್ಲಿ ನಡೆದ ಹೈ ಸಭೆಯಲ್ಲಿ ಮೈತ್ರಿಯ ಭಾಗವಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ (jds) ಗೆ ಬಿಟ್ಟುಕೊಡಲು ಬಿಜೆಪಿ ಹೈಕಮಾಂಡ್ ಅಸ್ತು ಎಂದಿದೆ. ಮಂಡ್ಯ (mandya) ಈ ಹಿಂದೆ ಜೆಡಿಎಸ್ ಭದ್ರ ಕೋಟೆ ಎಂದು ಗುರುತಿಸಿಕೊಂಡಿದ್ದ ಕ್ಷೇತ್ರ. ಹೀಗಾಗಿ ಬಿಜೆಪಿ (bjp) ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ. ಆದ್ರೆ ಬಿಜೆಪಿಯ ಈ ನಡೆಯಿಂದ ಮಂಡ್ಯ ಸಂಸದೆ ಸುಮಲತಾ (mp sumalatha) ಇಕ್ಕಟ್ಟಿಗೆ ಸಿಲುಕಿದ್ದಾರೆ.
![](https://pratidhvani.com/wp-content/uploads/2024/03/IMG_5830.jpeg)
ಮಂಡ್ಯದಲ್ಲಿ ಸುಮಲತಾ (sumalatha) ಪಾಲಿಗೆ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಎರಡೂ ಬಾಗಿಲುಗಳು ಮುಚ್ಚಿದಂತಾಗಿದೆ. ಬಿಜೆಪಿಯಿಂದಲೇ ಸ್ಪರ್ಧೆಗೆ ಅವಕಾಶ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದ ಸುಮಲತಾರಿಗೆ ಶಾಕ್(shock) ಎದುರಾಗಿದೆ. ಬಿಜೆಪಿ (BJP) ತೀರ್ಮಾನಕ್ಕಾಗಿ ಸಂಸದೆ ಸುಮಲತಾ ಇದುವರೆಗೂ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ರು. ಇದೀಗ ತಮ್ಮ ಮುಂದಿನ ನಡೆಯ ಬಗ್ಗೆ ಅವ್ರು ನಿರ್ಧಾರ ಕೈಗೊಳ್ಳಬೇಕಿಗೆ.
![](https://pratidhvani.com/wp-content/uploads/2024/03/IMG_5827.jpeg)
2019 ರ ಲೋಕಸಭಾ ಚುನಾವಣೆಯಲ್ಲಿ (Parliment election) ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕಿಳಿದು ನಿಖಿಲ್ ಕುಮಾರಸ್ವಾಮಿ (nikhil kumaraswamy) ವಿರುದ್ಧ ಅಮೋಘ ಜಯ ಸಾಧಿಸಿದ್ರು. ಆದ್ರೆ ಈ ಬಾರಿ ಬಿಜೆಪಿ-ಜೆಡಿಎಸ್ (BJP-jds alliance) ಮೈತ್ರಿಯಾಗಿರೋದ್ರಿಂದ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗಿದ್ದು , ಸೇಡು ತೀರಿಸಿಕೊಳ್ಳಲು ದಳಪತಿಗಳು ಸಿದ್ದರಾಗಿದ್ದಾರೆ. ಇತ್ತ ಮಂಡ್ಯ ಬಿಟ್ಟು ಬೇರೆ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸಲ್ಲ ಎಂದಿರುವ ಸುಮಲತಾ ಬಹುತೇಕ ಪಕ್ಷೇತರ ಅಭ್ಯರ್ಥಿಯಾಗಿ (Independent candidate) ಕಣಕ್ಕಿಳಿಯೋದು ಕನ್ಫರ್ಮ್ ಎನ್ನಲಾಗ್ತಿದೆ.
![](https://pratidhvani.com/wp-content/uploads/2024/03/IMG_5829.jpeg)
ಹೀಗಾಗಿ ಮಂಡ್ಯದಲ್ಲಿ ಈ ಬಾರಿ ಕಾಂಗ್ರೆಸ್ ನ ಸ್ಟಾರ್ ಚಂದ್ರು , ಸುಮಲತಾ ಮತ್ತು ಮೈತ್ರಿ ಅಭ್ಯರ್ಥಿಯ ನಡುವೆ ತ್ರಿಕೋನ ಸ್ಪರ್ಧೆ(triangular fight) ಏರ್ಪಡೋದ್ರಿಂದ ಕ್ಷೇತ್ರದ ಕಾವು ಹೆಚ್ಚಾಗತೊಡಗಿದೆ.