![](https://pratidhvani.com/wp-content/uploads/2024/07/WhatsApp-Image-2024-07-01-at-10.52.05-PM-1-576x1024.jpeg)
![](https://pratidhvani.com/wp-content/uploads/2024/07/WhatsApp-Image-2024-07-01-at-10.52.07-PM-1-1024x710.jpeg)
ಈತನ ಹೆಸರು ಪುನೀತ್, ವಿವಿ ಪುರಂ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿರೋ ವಿದ್ಯಾರ್ಥಿ. ಅದೇ ಕ್ಲಾಸ್ನಲ್ಲಿ ಓದುತ್ತಿದ್ದ ಯುವತಿ ಜೊತೆ ಪರಿಚಯವಾಗಿತ್ತು.. ಪರಿಚಯ ಪ್ರೀತಿಯಾಗಿ ಬದಲಾಯ್ತು. ಫೋನ್, ಮೆಸೆಜ್, ಚಾಟಿಂಗ್ ನಡೆದಿತ್ತು. ಪ್ರೀತಿ ಹೆಸರಿನಲ್ಲಿ ಪುನೀತ್ ದೇವಸ್ಥಾನಕ್ಕೆಂದು ಕರೆದುಕೊಂಡು ಹೋಗಿ ಮದ್ವೆ ಆಗ್ತೇನೆ ಎಂದು ಹೇಳಿ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ಗಂಭೀರ ಆರೋಪ ಮಾಡಿದ್ದಾಳೆ.. ಈ ವಿಷಯ ಹೊರಗಡೆ ಹೇಳಿದ್ರೆ ನಮ್ಮಿಬ್ಬರ ವೀಡಿಯೋ ರಿಲೀಸ್ ಮಾಡೋದಾಗಿಯೂ ಬೆದರಿಕೆ ಹಾಕಿದ್ದಾನಂತೆ.. ಈ ಬಗ್ಗೆ ಬೆಂಗಳೂರು ಮಹಿಳಾ ಆಯೋಗ, ಕಲಾಸಿಪಾಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ
![](https://pratidhvani.com/wp-content/uploads/2024/07/WhatsApp-Image-2024-07-01-at-10.52.06-PM-1-512x1024.jpeg)
![](https://pratidhvani.com/wp-content/uploads/2024/07/WhatsApp-Image-2024-07-01-at-10.52.07-PM-2-1024x654.jpeg)
ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗಡಿಹಳ್ಳಿ ಗ್ರಾಮದ ಪುನೀತ್, ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದ.. ಕಾಲೇಜಿನಲ್ಲಿ ಈ ಯುವತಿ ಜೊತೆ ಪ್ರೀತಿ ಪ್ರೇಮ ಮದುವೆ ನಾಟಕವಾಡಿ, ನಂಬಿಸಿ ಹಲವು ಬಾರಿ ಹೋಟೆಲ್ನಲ್ಲಿ ಅತ್ಯಾಚಾರ ಎಸಗಿದ್ದಾನಂತೆ. ಪ್ರೀತಿ ವಿಷಯ ಪುನೀತ್ ತಂದೆ ಶಂಕರಪ್ಪಗೆ ತಿಳಿಸಿದ್ದು, ಅವರೇ ಮದುವೆಗೆ ವಿರೋಧ ಮಾಡಿದ್ರಂತೆ.. ಅದೇ ಕಾರಣಕ್ಕೆ ಇದೀಗ ನೀನು ಕೆಳಜಾತಿಯವಳು ಅಂತಾ ಮದ್ವೆ ನಿರಾಕರಿಸಿದ್ದಾನೆ.. ಅವರ ಮನೆಗೆ ಯುವತಿ ಹಾಗು ಆಕೆಯ ತಂದೆ-ತಾಯಿ ಹೋಗಿ ಮನವಿ ಮಾಡಿಕೊಂಡ್ರೂ ಗಲಾಟೆ ಮಾಡಿದ್ದಾರೆ..
![](https://pratidhvani.com/wp-content/uploads/2024/07/WhatsApp-Image-2024-07-01-at-10.52.06-PM-512x1024.jpeg)