ರಾಜ್ಯದಲ್ಲಿ ಪರಿಷತ್ ಚುನಾವಣೆ ಹಿನ್ನೆಲೆ, ಬಿಜೆಪಿ (Bjp) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಫುಲ್ ಅಲರ್ಟ್ ಆಗಿದ್ದಾರೆ. ಸದ್ಯ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮೈತ್ರಿ ದೋಸ್ತಿಗೆ ಕಡಿಮೆ ಸ್ಥಾನಗಳು ಬರುವ ಸೂಚನೆಗಳು ಸಿಕ್ಕಿರುವುದರಿಂದ ಇದೀಗ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚೆತ್ತುಕೊಂಡಿದ್ದಾರೆ ಎನ್ನಲಾಗಿದೆ.
![](https://pratidhvani.com/wp-content/uploads/2024/05/bjp-flag-.jpg)
ಹೀಗಾಗಿ ಪರಿಷತ್ನ ಚುನಾವಣೆಯಲ್ಲಿ 6ಕ್ಕೆ 6 ಕ್ಷೇತ್ರ ಗೆಲ್ಲಲು ಬಿ.ವೈ.ವಿಜಯೇಂದ್ರ ಸರ್ವ ಪ್ರಯತ್ನಕ್ಕೂ ಮುಂದಾಗಿದ್ದಾರೆ. ಹೀಗಾಗಿ ದಿನವಿಡೀ ಪರಿಷತ್ ಕ್ಷೇತ್ರಗಳಲ್ಲಿ ಬಿವೈವಿ ಸಂಚಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಹೆಚ್ಚು ಲೋಕ ಕ್ಷೇತ್ರ ಗೆದ್ದು ಕೊಡುತ್ತೇವೆಂದು ಭರವಸೆ ನೀಡಿದ್ದ ಬಿವೈವಿಗೆ ಈಗ ಕೊಂಚ ಟೆನ್ಸನ್ ಹೆಚ್ಚಾದಂತಿದೆ.
![](https://pratidhvani.com/wp-content/uploads/2024/05/karnataka-election-2023-bjp-congress-jds-logo-1-1024x768.jpg)
ರಾಜ್ಯದಲ್ಲಿ ಮೈತ್ರಿಗೆ ಕಡಿಮೆ ಸ್ಥಾನ ಬರೋ ಸಾಧ್ಯತೆಗಳಿದೆ ಎಂಬ ಆಂತರಿಕ ವರದಿ ಬಿಜೆಪಿ ಕೈ ಸೇರಿರುವ ಹಿನ್ನೆಲೆ, ಈ ಚುನಾವಣೆ ಫಲಿತಾಂಶದ ಆಂತರಿಕ ವರದಿಯಿಂದ ವಿಜಯೇಂದ್ರ ಎಚ್ಚೆತ್ತುಕೊಂಡಿದ್ದಾರಂತೆ. ಹೀಗಾಗಿ ಪರಿಷತ್ ಚುನಾವಣೆಗೆ ಪುಲ್ ಅಲರ್ಟ್ ಆಗಿರುವ ಬಿ.ವೈ ವಿಜಯೇಂದ್ರ ತುಮಕೂರು, ದಾವಣಗೆರೆ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಸಂಚಾರ ನಡೆಸುತ್ತಿದ್ದಾರೆ.
ಮೈತ್ರಿ ಮುಂದುವರೆದಿದ್ದರೂ ಕೂಡ ಜೆಡಿಎಸ್ ಹಿರಿಯ ನಾಯಕರ ಅನುಪಸ್ಥಿತಿಯಲ್ಲಿ ಬಿವೈವಿ ಬಿರುಸಿನ ಪ್ರಚಾರ ಆರಂಭ ಮಾಡಿದ್ದಾರೆ. ಆ ಮೂಲಕ ಲೋಕಸಭೆ ಚುನಾವಣೆ ಡ್ಯಾಮೇಜ್ ಕಂಟ್ರೋಲ್ಗೆ ವಿಜಯೇಂದ್ರ ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗ್ತಿದೆ.