• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಲಾಕ್‌ಡೌನ್‌ ಭಾರತವನ್ನು ಫ್ಯಾಸಿಸ್ಟ್‌ ದೇಶವನ್ನಾಗಿ ಪರಿವರ್ತಿಸುತ್ತದೆ: ಅಂಬಾನಿ ಪುತ್ರ ಆತಂಕ

by
April 8, 2021
in Uncategorized
0
ಲಾಕ್‌ಡೌನ್‌ ಭಾರತವನ್ನು ಫ್ಯಾಸಿಸ್ಟ್‌ ದೇಶವನ್ನಾಗಿ ಪರಿವರ್ತಿಸುತ್ತದೆ: ಅಂಬಾನಿ ಪುತ್ರ ಆತಂಕ
Share on WhatsAppShare on FacebookShare on Telegram

ನಿರಂತರವಾಗಿ ಏರಿಕೆಯಾಗುತ್ತಿರುವ ಕೋವಿಡ್‌ ಸೋಂಕಿನ ಕಾರಣಕ್ಕೆ ದೇಶದ ವಿವಿದೆಡೆಗಳಲ್ಲಿ ʼಅರೆ-ಲಾಕ್‌ಡೌನ್‌ʼ ನಿಯಮಗಳನ್ನು ವಿಧಿಸುತ್ತಿರುವುದು ಈಗ ಟೀಕೆಗೆ ಗುರಿಯಾಗುತ್ತಿದೆ. ಈ ಲಾಕ್‌ಡೌನ್‌ ನಿಯಮಗಳ ವಿರುದ್ದವಾಗಿ ದನಿ ಎತ್ತಿರುವ ಉದ್ಯಮಿ ಅನಿಲ್‌ ಅಂಬಾನಿ ಮಗ ಅನ್ಮೋಲ್‌ ಅಂಬಾನಿ ಅವರು, ಲಾಕ್‌ಡೌನ್‌ ನಿಯಮಗಳನ್ನು ರೂಪಿಸುತ್ತಿರುವ ಸರ್ಕಾರಗಳ ವಿರುದ್ದ ಕಿಡಿಕಾರಿದ್ದಾರೆ. ಈ ನಿಯಮಗಳು ಸಮಾಜ ಮತ್ತು ಆರ್ಥಿಕತೆಯ ಬೆನ್ನೆಲುಬನ್ನು ಮುರಿಯುತ್ತವೆಯೇ ಹೊರತು, ಆರೋಗ್ಯವನ್ನು ವೃದ್ದಿಸುವುದಿಲ್ಲ ಎಂದು ಹೇಳಿದ್ದಾರೆ.

ADVERTISEMENT

pic.twitter.com/xb8cx6t4Vy

— Anmol A Ambani (@anmol_ambani) April 6, 2021

ಲಾಕ್‌ಡೌನ್‌ ಹಿಂದೆ ಇರುವುದು ಮಧ್ಯಮವರ್ಗದ ಬೆನ್ನು ಮುರಿಯುವ ಹುನ್ನಾರ, ಆ ಮೂಲಕ ಇ-ಕಾಮರ್ಸ್‌ ಅನ್ನು ಉತ್ತೇಜಿಸುವುದು ಇದರ ಹಿಂದಿರುವ ಷಡ್ಯಂತ್ರ. ಸಾಂಕ್ರಾಮಿಕ ರೋಗಕ್ಕೂ ಲಾಕ್‌ಡೌನ್‌ಗೂ ಒಂದಕ್ಕೊಂದು ಸಂಬಂಧವಿಲ್ಲ. ವಾಸ್ತವಿಕವಾಗಿ, ಚೀನಾದಂತಹ ಸರ್ವಾಧಿಕಾರಿ ಫ್ಯಾಸಿಸ್ಟ್‌ ದೇಶದ ನಿರ್ಮಾಣವೇ ಲಾಕ್‌ಡೌನ್‌ನ ಮೂಲ ಉದ್ದೇಶ ಎಂದು ಅನ್ಮೋಲ್‌ ಅಂಬಾನಿ ಗಂಭೀರ ಆರೋಪ ಹೊರಿಸಿದ್ದಾರೆ.

ಈ ಲಾಕ್‌ಡೌನ್‌ ನಿಯಮಗಳಿಂದಾಗಿ ಮಧ್ಯಮ ವರ್ಗದ ಉದ್ಯಮಗಳು ಹಾಗೂ ದಿನಗೂಲಿ ಮೇಲೆ ಬದುಕು ನಡೆಸುವವರು ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಅನ್ಮೋಲ್‌ ಹೇಳಿದ್ದಾರೆ.

“ವೃತ್ತಿಪರ ʼನಟರುʼ ಶೂಟಿಂಗ್‌ ನಡೆಸಬಹುದು. ವೃತ್ತಿಪರ ʼಕ್ರಿಕೆಟಿಗರುʼ ತಡರಾತ್ರಿಯವರೆಗೆ ಆಟವಾಡಬಹುದು. ವೃತ್ತಿಪರ ʼರಾಜಕಾರಣಿಗಳುʼ ಬೃಹತ್‌ ಸಮಾವೇಶ ನಡೆಸಬಹುದು. ಆದರೆ ನೀವು ಮತ್ತು ನಿಮ್ಮ ಉದ್ಯಮ ಅವಶ್ಯಕವಲ್ಲ. ಇನ್ನೂ ನಿಮಗೆ ತಿಳಿದಿಲ್ಲವೇ?” ಎಂದು ಅವರು ಹೇಳಿದ್ದಾರೆ. ಈ ಹಿಂದೆಯೂ ಲಾಕ್‌ಡೌನ್‌ ನಿಯಮಗಳ ಕುರಿತಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

Professional ‘actors’ can continue shooting their films. Professional ‘cricketers’ can play their sport late into the night. Professional ‘politicians’ can continue their rallies with masses of people. But YOUR business or work is not ESSENTIAL. Still don’t get it?

— Anmol A Ambani (@anmol_ambani) April 5, 2021

#Scandemic ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ʼಅವಶ್ಯಕʼ ಎಂದರೆ ಅರ್ಥವೇನು? ಪ್ರತಿಯೊಬ್ಬ ವ್ಯಕ್ತಿಯ ಕೆಲಸ ಅವರಿಗೆ ಅವಶ್ಯಕವಾದದ್ದು. ಲಾಕ್‌ಡೌನ್‌ ಎನ್ನುವುದು ಆದಾಯ ವರ್ಗಾವಣೆಯ ಪ್ರಮುಖ ಅಸ್ತ್ರ. ಇದು ಸರ್ಕಾರದ ವೈಫಲ್ಯತೆ ಎಂದು ಜನರು ಅಂದುಕೊಂಡಿದ್ದಾರೆ. ಅಲ್ಲ, ಇದು ಹೊಸ ಜಾಗತಿಕ ವ್ಯವಸ್ಥೆಯನ್ನು ರೂಪಿಸುವ ವ್ಯವಸ್ಥಿತ ನೀತಿ, ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ʼಅವಶ್ಯಕವಲ್ಲದʼ ಸೇವೆಗಳಿಗೆ ನಿರ್ಬಂಧ ಹೇರಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದರಿಂದಾಗಿ ಸ್ಥಳೀಯ ಉದ್ಯಮಿಗಳು ನಷ್ಟ ಅನುಭವಿಸುವಂತಾಗಿದೆ. ಈ ಕುರಿತಾಗಿ ಮಾತನಾಡಿರುವ ಅನ್ಮೋಲ್‌, ಲಾಕ್‌ಡೌನ್‌ಗಳು ಯಾವತ್ತೂ ಆರೋಗ್ಯ ಸುಧಾರಣೆಗೆ ಬಳಕೆಯಾಗಲಿಲ್ಲ. ಇದು ನಮ್ಮ ಸಮಾಜ ಹಾಗೂ ಆರ್ಥಿಕತೆಯ ಬೆನ್ನೆಲುಬನ್ನು ಮುರಿಯುತ್ತದೆ. ದಿನಗೂಲಿ ನೌಕರರಿಂದ ಹಿಡಿದು, ಸ್ವ-ಉದ್ಯಮಿಗಳು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳು, ರೆಸ್ಟೋರೆಂಟ್‌ಗಳು, ಢಾಬಾ ಮತ್ತು ಫ್ಯಾಷನ್‌ ಜಗತ್ತಿನವರೆಗೆ ಎಲ್ಲರಿಗೂ ತೊಂದರೆ ನೀಡುತ್ತದೆ, ಎಂದು ಅಭಿಪ್ರಾಯಪಟ್ಟಿದ್ದಾರೆ.

“ಲಾಕ್‌ಡೌನ್‌ ಎಂಬುದೇ ಸಾಮಾನ್ಯ ಪರಿಸ್ಥಿತಿ ಎಂದು ಬೆಳೆಯುವ ಮಕ್ಕಳ ಮೇಲೆ ಇದು ಮಾನಸಿಕವಾಗಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜಿಮ್‌, ಆಟದ ಮೈದಾನಗಳು, ವ್ಯಾಯಾಮ ಸ್ಥಳಗಳು, ತಾಜಾ ಗಾಳಿ ಮತ್ತು ಸೂರ್ಯನ ಕಿರಣ ನಿಜಕ್ಕೂ ಆರೋಗ್ಯದ ಆಧಾರ ಸ್ಥಂಬಗಳು,” ಎಂದಿದ್ದಾರೆ.

Previous Post

ಗುಜರಾತ್ ಕಣ್ಣಿಗೆ ಬೆಣ್ಣೆ-ಮಹಾರಾಷ್ಟ್ರ ಕಣ್ಣಿಗೆ ಸುಣ್ಣ: ಕೋವಿಡ್ ಲಸಿಕೆ ವಿತರಣೆಯಲ್ಲಿ ತಾರತಮ್ಯ!

Next Post

ಯತ್ನಾಳ್,ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳಲಾಗದ ನಳೀನ್‌ ಕುಮಾರ್‌ ಕಟೀಲ್ ಅಸಮರ್ಥ ನಾಯಕ –ಸಿದ್ದರಾಮಯ್ಯ

Related Posts

ಇಂದಿನಿಂದ ಆರಂಭ ಅಮರನಾಥ ಯಾತ್ರೆ – ಉಗ್ರರ ದಾಳಿಯ ಆತಂಕ..ಭದ್ರತೆ ಹೆಚ್ಚಿಸಿದ ಕೇಂದ್ರ !! 
Uncategorized

ಇಂದಿನಿಂದ ಆರಂಭ ಅಮರನಾಥ ಯಾತ್ರೆ – ಉಗ್ರರ ದಾಳಿಯ ಆತಂಕ..ಭದ್ರತೆ ಹೆಚ್ಚಿಸಿದ ಕೇಂದ್ರ !! 

by Chetan
July 3, 2025
0

ಇಂದಿನಿಂದ ಜಮ್ಮು ಕಾಶ್ಮೀರದಲ್ಲಿ (Jammu Kashmir) ಅಮರನಾಥ ಯಾತ್ರೆ (Amaranatha yatra) ಆರಂಭವಾಗಲಿದೆ. ಈ ಯಾತ್ರೆಯ ಯಾತ್ರಾರ್ಥಿಗಳು ಕಾಶ್ಮೀರದ ಪಹಲ್ಗಾಮ್ (Pahalgam) ಮೂಲಕವೇ ಸಾಗಿ ಹೋಗಬೇಕಿದೆ. ಹೀಗಾಗಿ...

Read moreDetails
ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

June 20, 2025
ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025

ಮೈಷುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ನೇರಪ್ರಸಾರ

June 7, 2025
ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

June 4, 2025
Next Post
ಯತ್ನಾಳ್,ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳಲಾಗದ ನಳೀನ್‌ ಕುಮಾರ್‌ ಕಟೀಲ್ ಅಸಮರ್ಥ ನಾಯಕ –ಸಿದ್ದರಾಮಯ್ಯ

ಯತ್ನಾಳ್,ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳಲಾಗದ ನಳೀನ್‌ ಕುಮಾರ್‌ ಕಟೀಲ್ ಅಸಮರ್ಥ ನಾಯಕ –ಸಿದ್ದರಾಮಯ್ಯ

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada