• Home
  • About Us
  • ಕರ್ನಾಟಕ
Thursday, October 30, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ವಿಧಾನ ಪರಿಷತ್ ನಾಮಕರಣ “ಗೇಂ ವಿದೌಟ್ ರೂಲ್ಸ್” ಆಗದಿರಲಿ

ಪ್ರತಿಧ್ವನಿ by ಪ್ರತಿಧ್ವನಿ
June 9, 2025
in Top Story, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ
0
ವಿಧಾನ ಪರಿಷತ್ ನಾಮಕರಣ “ಗೇಂ ವಿದೌಟ್ ರೂಲ್ಸ್” ಆಗದಿರಲಿ
Share on WhatsAppShare on FacebookShare on Telegram
ADVERTISEMENT

BENGALURU: 09-06-2025

ಶನಿವಾರ, ವಿಧಾನಪರಿಷತ್ತಿಗೆ ನಾಮಕರಣ ಸದಸ್ಯರ ನೇಮಕದ ಬಗ್ಗೆ ಪೋಸ್ಟ್ ಹಾಕಿದ್ದೆ. ಇಂದು ಬೆಳಗಾಗುವ ಹೊತ್ತಿಗೆ, ಪರಿಸ್ಥಿತಿ ಬದಲಾಯಿಸಿರುವಂತಿದೆ. ರಾಜ್ಯಪಾಲರ ಅಂಕಿತಕ್ಕಾಗಿ ಮುಖ್ಯಮಂತ್ರಿಗಳ ಕಚೇರಿಯಿಂದ ಹೊರಟ ನಾಲ್ವರು ಸದಸ್ಯರ “ಶಿಫಾರಸು ಪತ್ರ”ಕ್ಕೆ ತಡೆ ಬಿದ್ದಿದೆ ಎಂಬ ಸುದ್ದಿ ಕೇಳಿದೆ.

ಅದು ಸರ್ಕಾರ ನಡೆಸುವವರ ತೀರ್ಮಾನ. ಆದರೆ, ಈ ತಡೆಗೆ ಕಾರಣ ಏನು ಎಂದು ಗಮನಿಸಿದಾಗ “ಪಕ್ಷದ ಕಾರ್ಯಕರ್ತರಿಗೆ ಮಣೆ ಹಾಕದೇ ಬೇರೆಯವರಿಗೆ ಅವಕಾಶ ನೀಡಲಾಗುತ್ತಿದೆ” ಎಂಬ ದೂರು ತಳಮಟ್ಟದಿಂದೆಲ್ಲೋ ಎದ್ದು ನಿಂತಿರುವುದು ಕಾಣಿಸಿತು. ಯಾರಿಗೂ ಮೇಲು ನೋಟಕ್ಕೆ ಅರೆರೆ ಹೌದಲ್ಲ… ಅನ್ನಿಸಲೇಬೇಕು. ತಮಾಷೆ ಎಂದರೆ, ಇದು “ಆಟದ ನಿಯಮಗಳ ಅರಿವು ಇಲ್ಲದವರ ಪರದಾಟ” ಅಷ್ಟೇ.

ಹಾಗಿದ್ದರೆ ವಾಸ್ತವ ಏನು?

ವಿಧಾನ ಪರಿಷತ್ತು ಹೇಗಿರಬೇಕೆಂಬುದನ್ನು ಸಂವಿಧಾನದ 171ನೇ ವಿಧಿ ಹೀಗೆ ವಿವರಿಸುತ್ತದೆ:

೧. ರಾಜ್ಯ ವಿಧಾನ ಸಭೆಯಲ್ಲಿರುವ ಒಟ್ಟು ಸದಸ್ಯರ ಸಂಖ್ಯೆಯ ನಾಲ್ಕನೇ ಒಂದು ಭಾಗವನ್ನು ಈ ಸದನ ಮೀರಬಾರದು.

೨. ಸದನದ ಸದಸ್ಯರಲ್ಲಿ ಮೂರನೇ ಒಂದು ಭಾಗ ಸ್ಥಳೀಯಾಡಳಿತ ಸಂಸ್ಥೆಗಳಿಂದ (ನಗರ ಪಾಲಿಕೆ,ನಗರ ಸಭೆ, ಗ್ರಾಮ ಪಂಚಾಯತ್ ಇತ್ಯಾದಿ) ನೇಮಕ ಆಗಬೇಕು – (ಇದು ಸಾಮಾನ್ಯವಾಗಿ ರಾಜಕೀಯ ಕಾರ್ಯಕರ್ತರ ಕೋಟಾ.)

೨. 12 ರಲ್ಲಿ ಒಂದು ಭಾಗ ಪದವೀಧರ-ಶಿಕ್ಷಣ ಕ್ಷೇತ್ರಗಳಿಂದ ನೇಮಕ ಆಗಬೇಕು. (ಇದನ್ನು ಪಕ್ಷಗಳು ತಮ್ಮ ಕಾರ್ಯಕರ್ತರಲ್ಲಿ ಅಕಾಡೆಮಿಕ್ ಸಾಮರ್ಥ್ಯ ಇರುವವರಿಂದ ಆರಿಸಿಕೊಳ್ಳುತ್ತವೆ)

Siddaramaiah:  ನೋವಾಗಿದೆ ನಾನು ನೀನು ಒಬ್ಬನಿಗೆ ಅಲ್ಲ ಎಲ್ಲರಿಗೂ ನೋವಾಗಿದೆ ಇಡೀ ಸರ್ಕಾರಕ್ಕೆ ನೋವಾಗಿದೆ..!

೩. ಮೂರನೇ ಒಂದು ಭಾಗವನ್ನು ವಿಧಾನ ಸಭೆಯ ಸದಸ್ಯರು ಆಯಾಪಕ್ಷಗಳ ಸೀಟು ಸಾಮರ್ಥ್ಯಕ್ಕೆಅನುಗುಣವಾಗಿ ಆಯ್ಕೆ ಮಾಡುತ್ತಾರೆ. (ಇದು ಕೂಡ ರಾಜಕೀಯ ಕಾರ್ಯಕರ್ತರ ಕೋಟಾ.)

೪. ರಾಜ್ಯಪಾಲರಿಗೆ ರಾಜ್ಯದಲ್ಲಿ ವಿಶೇಷ ಜ್ಞಾನ ಇರುವ, ಪ್ರಾಯೋಗಿಕ ಅನುಭವ ಇರುವ “ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ, ಸಮಾಜ ಸೇವಾ” ಕ್ಷೇತ್ರಗಳಿಂದ ಉಳಿದ ಸದಸ್ಯರನ್ನು ನಾಮಕರಣ ಮಾಡುವ ಅಧಿಕಾರ ಇರುತ್ತದೆ.

ಕರ್ನಾಟಕ ವಿಧಾನ ಪರಿಷತ್ತಿನಲ್ಲಿ 75 ಸದಸ್ಯ ಬಲ ಇದೆ. ಇವರಲ್ಲಿ 25 ಮಂದಿಯನ್ನು ವಿಧಾನ ಸಭಾ ಸದಸ್ಯರು ಆಯ್ಕೆ ಮಾಡುತ್ತಾರೆ, 25 ಮಂದಿಯನ್ನು ಸ್ಥಳೀಯಾಡಳಿತ ಸಂಸ್ಥೆಗಳು ಆಯ್ಕೆ ಮಾಡುತ್ತವೆ, ತಲಾ ಏಳು ಮಂದಿಯನ್ನು (ಒಟ್ಟು 14) ಪದವೀಧರ, ಶಿಕ್ಷಣ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗುತ್ತದೆ. 11 ಮಂದಿ ನಾಮಕರಣ ಸದಸ್ಯರು.

ಈಗ ಕರ್ನಾಟಕದಲ್ಲಿ ಸನ್ನಿವೇಶ ಏನಿದೆ?

Siddaramaiah: ಬಿಜೆಪಿ ಮಾಡಿದ ಟ್ವೀಟ್‌ಗೆ ಸಿಎಂ ಸಿದ್ದರಾಮಯ್ಯ ಟಾಂಗ್‌..! #media #bjpprotest #bjp #jds

ರಾಜ್ಯ ವಿಧಾನಪರಿಷತ್ತಿನಲ್ಲೀಗ ಗವರ್ನರ್ ಕೋಟಾದ ನಾಲ್ವರು ಸದಸ್ಯರನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆದಿದೆ. ಇವರು ನಾಲ್ವರೂ ಮೇಲೆ ಹೇಳಿದ “ಸಾಹಿತ್ಯ, ವಿಜ್ಞಾನ, ಕಲೆ, ಸಹಕಾರ, ಸಮಾಜ ಸೇವಾ” ಕ್ಷೇತ್ರಗಳಿಂದ ಸದನಕ್ಕೆ ನಾಮಕರಣ ಆಗಬೇಕೇ ಹೊರತು, ಪಕ್ಷದ ಕಾರ್ಯಕರ್ತರೆಂಬ/ಸದಸ್ಯರೆಂಬ ಕಾರಣಕ್ಕೆ ಅಲ್ಲ. ಈ ನಿಟ್ಟಿನಲ್ಲಿ ಯಾರು ಎಷ್ಟೇ ತಲೆಹೊಡೆದುಕೊಂಡರೂ, ಅಂತಿಮ ತೀರ್ಮಾನ ಗವರ್ನರ್ ಅವರದು. ಶಿಫಾರಸು ಆಗಿರುವ ಯಾರೇ ವ್ಯಕ್ತಿ ಮೇಲೆ ಹೇಳಲಾಗಿರುವ ವಿಶೇಷ ಕೆಟಗರಿಯ ಭಾಗ ಎಂದು ಗವರ್ನರ್ ಅವರಿಗೆ ಕನ್ವಿನ್ಸ್ ಮಾಡುವ ಹೊಣೆ ಕರ್ನಾಟಕ ಸರ್ಕಾರದ್ದು.

R Ashoka: ಸಿದ್ದರಾಮಯ್ಯ,ಡಿಕೆಶಿ ವಿರುದ್ದ ಆರ್‌ ಅಶೋಕ್‌ ಆಕ್ರೋಶ..! #siddaramaiah #dkshivakumar #rcbfans

ಹಾಗಂತ ಈ ನಿಯಮಗಲನ್ನೆಲ್ಲ ಯಾವತ್ತೂ ಪಾಲಿಸಲಾಗಿದೆಯೇ? ಎಂದು ಕೇಳಿದರೆ, “ದುಡ್ಡಿನ ಥೈಲಿ” ಮಾತನಾಡಿದಾಗಲೆಲ್ಲ, ಈ ನಿಯಮಗಳು ಏರುಪೇರಾದದ್ದಿದೆ. ಅದರ ಫಲವಾಗಿಯೇ ಮೇಲ್ಮನೆ “ನಿರುಪಯುಕ್ತ” ಎಂದೆಲ್ಲ ಚರ್ಚೆ ಹುಟ್ಟಿದ್ದಿದೆ. ಈ ಅಪರಾಧಕ್ಕೆ ಯಾವ ಪಕ್ಷವೂ ಹೊರತಲ್ಲ.

ಸರ್ಕಾರ ತನ್ನ ಲಭ್ಯ ಕೆಟಗರಿಗಳಲ್ಲಿ ತನ್ನ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಲಿ. ಆದರೆ, “ಪರಿಣತ” ನಾಮಕರಣ ಸೀಟುಗಳಿಗೂ ಕಾರ್ಯಕರ್ತರೇ ಬೇಕು ಎಂದು ಹೊರಡುವುದಕ್ಕೆ ಅರ್ಥ ಇಲ್ಲ. ಹೀಗೆ, ಅನಗತ್ಯವಾಗಿ ಏಳುವ ತಕರಾರುಗಳು ಮೇಲ್ಮನೆಯ “ಹಿರಿಯರ ಸದನ” ಎಂಬ ಗೌರವವನ್ನು ಕೆಡಿಸುವುದಷ್ಟೇ ಮಾಡುತ್ತದೆ ಹೊರತು ಬೇರೆ ಏನೂ ಮಾಡದು. ನಮ್ಮ ಮಾಧ್ಯಮಗಳೂ ಕೂಡ ನಿಯಮ ಗೊತ್ತಿಲ್ಲದವರಂತೆ, ಪಕ್ಷದ ಕಾರ್ಯಕರ್ತರನ್ನು ಪರಿಗಣಿಸಬಹುದಿತ್ತು ಎಂಬಿತ್ಯಾದಿ ನೆರೇಟಿವ್‌ಗಳಲ್ಲಿ ತೊಡಗಿಕೊಂಡಿರುವುದು ಅವರ ಅಜ್ಞಾನವನ್ನಷ್ಟೇ ತೋರಿಸುತ್ತದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು.

Chetan Ahimsa Podcast: ಸ್ಟೇಡಿಯಂ ದುರಂತಕ್ಕೆ ಸಿದ್ದರಾಮಯ್ಯ, ಡಿಕೆಶಿ ನೇರ ಹೊಣೆ.? #siddaramaiah #dkshivakumar
Tags: ChinnaswamyStadiumStampedecongressmlakarnatakagovernorrcbfansRCBVictoryParadeStampedesiddaramaiahthawarchandgehlot
Previous Post

ನಾನು ಖಾತೆ ಬದಲಾವಣೆಗೆ ಕೇಳಿರುವುದು ಸುಳ್ಳು..ಸುಳ್ಳು..ಸುಳ್ಳು : ಗೃಹಸಚಿವ ಪರಮೇಶ್ವರ್ 

Next Post

BREAKING NEWS : ಚಿನ್ನಸ್ವಾಮಿ ಸ್ಟೇಡಿಯಂ ಬೇರೆ ಕಡೆಗೆ ಶಿಫ್ಟ್ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ 

Related Posts

Top Story

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 30, 2025
0

"ಟನಲ್ ರಸ್ತೆ, ಮೇಲ್ಸೇತುವೆ ಯೋಜನೆ, 'ಬಿ' ಖಾತೆಯಿಂದ 'ಎ' ಖಾತೆ ನೀಡುವ ಯೋಜನೆ ಕುರಿತು ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹಲ್ ಲಾಲ್ ಖಟ್ಟರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು....

Read moreDetails

ಕನ್ನಡ ಚಿತ್ರರಂಗದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿರುವುದು ವಿಶೇಷ .

October 30, 2025

Sharana Prakash Patil: ಕೌಶ್ಯಲ ತರಬೇತಿ ಕೇಂದ್ರ ಆರಂಭಿಸುವವರಿಗೆ ಅಗತ್ಯ ಭೂಮಿ ಮಂಜೂರು..!

October 30, 2025

KJ George: ಹೊಸಕೋಟೆಯ ಸೌರ ಘಟಕಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಚಾಲನೆ

October 30, 2025

KJ George: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರಾಜ್ಯದ ಇಂಧನ ಭವಿಷ್ಯ: ಸಚಿವ ಕೆ.ಜೆ.ಜಾರ್ಜ್

October 30, 2025
Next Post
BREAKING NEWS : ಚಿನ್ನಸ್ವಾಮಿ ಸ್ಟೇಡಿಯಂ ಬೇರೆ ಕಡೆಗೆ ಶಿಫ್ಟ್ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ 

BREAKING NEWS : ಚಿನ್ನಸ್ವಾಮಿ ಸ್ಟೇಡಿಯಂ ಬೇರೆ ಕಡೆಗೆ ಶಿಫ್ಟ್ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ 

Recent News

Top Story

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 30, 2025
Top Story

ಕನ್ನಡ ಚಿತ್ರರಂಗದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿರುವುದು ವಿಶೇಷ .

by ಪ್ರತಿಧ್ವನಿ
October 30, 2025
Top Story

Sharana Prakash Patil: ಕೌಶ್ಯಲ ತರಬೇತಿ ಕೇಂದ್ರ ಆರಂಭಿಸುವವರಿಗೆ ಅಗತ್ಯ ಭೂಮಿ ಮಂಜೂರು..!

by ಪ್ರತಿಧ್ವನಿ
October 30, 2025
Top Story

KJ George: ಹೊಸಕೋಟೆಯ ಸೌರ ಘಟಕಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಚಾಲನೆ

by ಪ್ರತಿಧ್ವನಿ
October 30, 2025
Top Story

KJ George: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರಾಜ್ಯದ ಇಂಧನ ಭವಿಷ್ಯ: ಸಚಿವ ಕೆ.ಜೆ.ಜಾರ್ಜ್

by ಪ್ರತಿಧ್ವನಿ
October 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

October 30, 2025

ಕನ್ನಡ ಚಿತ್ರರಂಗದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿರುವುದು ವಿಶೇಷ .

October 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada