ಪಾಕಿಸ್ತಾನದ ಗಡಿ ಸೇರಿದಂತೆ ಭಾರತ ಕೆಲವು ರಾಜ್ಯಗಳಿಗೆ ಭೇಟಿ ನೀಡಬೇಡಿ ಎಂದು ಕೆನಡಾ ಸರಕಾರ ತನ್ನ ದೇಶದ ಪ್ರವಾಸಿಗರಿಗೆ ಸೂಚನೆ ನೀಡಿದೆ.
ರಾಜಸ್ಥಾನ್, ಗುಜರಾತ್, ಪಂಜಾಬ್ ಅಲ್ಲದೇ ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಮಿಜೊರಾಂ ರಾಜ್ಯಗಳಿಗೆ ಪ್ರವಾಸ ಹೋಗಬೇಡಿ. ಇಲ್ಲಿನ ಪ್ರದೇಶಗಳು ಒಂದು ರೀತಿಯ ನೆಲಬಾಂಬ್ ಇದ್ದಂತೆ. ಭದ್ರತಾ ಸಮಸ್ಯೆ, ಉಗ್ರರ ಚಟುವಟಿಕೆ ಹಲವು ಸಮಸ್ಯೆಗಳಿವೆ ಎಂದು ಕೆನಡಾ ತನ್ನ ಪ್ರವಾಸಿಗರಿಗೆ ಎಚ್ಚರಿಸಿದೆ.
![](https://pratidhvani.com/wp-content/uploads/2022/09/canada.jpg)
ಸೆಪ್ಟೆಂಬರ್ 27ರಂದು ಕೆನಡಾ ಸರಕಾರ ತನ್ನ ವೆಬ್ ಸೈಟ್ ನಲ್ಲಿ ಪ್ರವಾಸಿ ಮಾರ್ಗಸೂಚಿ ಪ್ರಕಟಿಸಿದ್ದು, ಇದರಲ್ಲಿ ಭಾರತದ ಈ ರಾಜ್ಯಗಳಿಗೆ ಭೇಟಿ ನೀಡುವುದು ಅಪಾಯಕಾರಿ ಎಂದು ಹೇಳಿದೆ.
ಭಾರತದ ಯಾವುದೇ ಮೂಲೆಯಲ್ಲಿ ಬೇಕಾದರೂ ಉಗ್ರರ ದಾಳಿ ನಡೆಯಬಹುದು ಎಂದು ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದ್ದು, ವಿಶೇಷ ಅಂದರೆ ಈ ಪಟ್ಟಿಯಲ್ಲಿ ಲಡಾಖ್ ಸೇರ್ಪಡೆ ಮಾಡಿಲ್ಲ.