ಬೆಳಗಾವಿ : ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೊಗಳು ವೈರಲ್ ಆಗಿರುವ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ರನ್ನು ವಿಚಾರಣೆಗೊಳಪಡಿಸಿದ ಬೆಳಗಾವಿ ಅರಣ್ಯ ಇಲಾಖೆ ಅಧಿಕಾರಿಗಳು.
![](https://pratidhvani.com/wp-content/uploads/2023/10/tiger-claw-locket-1024x576.webp)
ಅರಣ್ಯಾಧಿಕಾರಿಗಳು ಮನೆಗೆ ಬಂದಾಗ ನಿವಾಸದಲ್ಲಿರದಿದ್ದ ಮೃಣಾಲ್. ಮೃಣಾಲ್ ಬರುವಿಕೆಗಾಗಿ ಮನೆಯಲ್ಲೇ ಕಾದುಕುಳಿತಿದ್ದ ಅರಣ್ಯಾಧಿಕಾರಿಗಳು. ಇದೀಗ ಮನೆಗೆ ಬಂದ ಮೃಣಾಲ್ ಪುತ್ರಿಯ ಜೊತೆಗೆ ಸಮಯ ಕಳೆಯಲು ಬಿಡದೇ ಅರಣ್ಯಾಧಿಕಾರಿಗಳಿಂದ ತೀವ್ರ ವಿಚಾರಣೆ. ನಿನ್ನೆಯಷ್ಟೇ ಭದ್ರಾವತಿಯಿಂದ ಬೆಳಗಾವಿಯ ಮನೆಗೆ ಬಂದಿರುವ ಮೃಣಾಲ್ ಪುತ್ರ ಐರಾ. ನಿನ್ನೆಯಷ್ಟೇ ಪುತ್ರಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದ ಹೆಬ್ಬಾಳ್ಕರ್ ಕುಟುಂಬ. ಇಂದು ಪುತ್ರಿ ಜೊತೆಗೆ ಸಮಯ ಕಳೆಯಲಾಗದೇ ಮೃಣಾಲ್ಗೆ ವಿಚಾರಣೆ ಎದುರಿಸುವ ಪರಿಸ್ಥಿತಿ ಬಂದೊದಗಿದೆ. ಬೆಳಗಾವಿಯ ಕುವೆಂಪು ನಗರದ ಮನೆಯಲ್ಲಿ ಮೃಣಾಲ್ ಬಳಿ ಇರುವ ಹುಲಿ ಉಗುರಿನ ಮಾಹಿತಿ ಕೇಳುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು.