• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

L. R ಶಿವರಾಮೇಗೌಡ ರಾಜಕಾರಣ ಜೀವನದಲ್ಲಿ ಸೋಲುಂಡಿದ್ದು ಯಾಕೆ..?

ಪ್ರತಿಧ್ವನಿ by ಪ್ರತಿಧ್ವನಿ
May 8, 2024
in ಅಂಕಣ, ರಾಜಕೀಯ
0
Share on WhatsAppShare on FacebookShare on Telegram

ADVERTISEMENT

ಲಾಳನಕೆರೆ ರಾಮೇಗೌಡ ಶಿವರಾಮೇಗೌಡ, ಇದೀಗ ಭಾರೀ ಚರ್ಚೆ ಆಗುತ್ತಿರುವ ನಾಯಕನ ಹೆಸರು. ಪ್ರಜ್ವಲ್​ ರೇವಣ್ಣನ ವಿಡಿಯೋ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುವುದಲ್ಲದೆ, ವಕೀಲ ದೇವರಾಜೇಗೌಡ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್​ ನಡುವೆ ಮಧ್ಯಸ್ಥಿತಿಕೆ ಮಾಡಿಸಲು ಹೋಗಿ ಆಡಿಯೋ, ವಿಡಿಯೋ ಸಮೇತ ಸಿಕ್ಕಿಬಿದ್ದಿರುವ ರಾಜಕಾರಣಿ. ಬಿಜೆಪಿ ಪಕ್ಷದಲ್ಲಿ ಇದ್ದರೂ ಕಾಂಗ್ರೆಸ್​ ಜೊತೆ ಸೇರಿಕೊಂಡು ಏನನ್ನೋ ಸಾಧಿಸಲು ಹೋಗಿ ಕಾಂಗ್ರೆಸ್​ ಮಾನವನ್ನೇ ಬೀದಿಯಲ್ಲಿ ಹರಾಜು ಹಾಕಿರುವ ನಾಯಕ. ಶಿವರಾಮೇಗೌಡರ ರಾಜಕಾರಣದ ಹಿನ್ನೆಲೆಯನ್ನು ನೋಡುವುದಾದರೆ, ಅತ್ಯಂತ ಯಶಸ್ವಿ ರಾಜಕಾರಣಿ ಎಂದು ಹೇಳಲು ಸಾಧ್ಯವಿಲ್ಲ. ಕುಟಿಲತನದಿಂದ ರಾಜಕಾರಣ ಮಾಡಿಕೊಂಡು ಬಂದಿರುವ ಶಿವರಾಮೇಗೌಡ ಎಲ್ಲಿಯೂ ಸಲ್ಲದವರು ಎನ್ನುವ ಸಾಲಿಗೆ ಬಂದು ನಿಂತಿದ್ದಾರೆ.

ಪುನರ್ಜನ್ಮ ನೀಡಿದ ಜೆಡಿಎಸ್​ ಬೆನ್ನಿಗೆ ಇರಿದ ನಾಯಕ..!

ಕಾಂಗ್ರೆಸ್​ನಿಂದ ರಾಜಕಾರಣ ಆರಂಭ ಮಾಡಿ ಯೂತ್​ ವಿಂಗ್​ನಲ್ಲಿ ಕೆಲಸ ಮಾಡಿದ್ದ ಎಲ್​.ಆರ್​ ಶಿವರಾಮೇಗೌಡ ಇಲ್ಲೀವರೆಗೂ ಕಾಂಗ್ರೆಸ್​ನಿಂದ ಶಾಸಕನಾಗಲು ಸಾಧ್ಯವಾಗಿಲ್ಲ. ಎರಡು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಶಾಸಕನಾಗಿ ಕೆಲಸ ಮಾಡಿದ ಶಿವರಾಮೇಗೌಡ, ಮತ್ತೆ ಕಾಂಗ್ರೆಸ್​ ಸೇರ್ಪಡೆ ಆದರು. ಶಾಸಕರಾಗಲು ಸಾಧ್ಯವಾಗದೆ ಪದೇ ಪದೇ ಸೋಲುಂಡು ಕ್ಷೇತ್ರವನ್ನೇ ತ್ಯಜಿಸಿ ರಾಜಕೀಯ ಅಜ್ಞಾತವಾಸ ಅನುಭವಿಸಿದ್ರು. ಆ ಬಳಿಕ ರಾಜಕೀಯ ಅಜ್ಞಾತವಾಸದಲ್ಲಿ ಇದ್ದವರನ್ನು ಕರೆದುಕೊಂಡು ಬಂದು ಜೆಡಿಎಸ್​ ಪಕ್ಷ ಸಂಸದರನ್ನಾಗಿ ಮಾಡಿತ್ತು. ಆದ ಇಂದ್ರ ಚಂದ್ರ ರಾಜಕೀಯ ಪುನರ್ಜನ್ಮ ನೀಡಿದ ಜೆಡಿಎಸ್​ನಲ್ಲಿ ಮುಂದುವರಿಯುತ್ತೇನೆ ಎಂದು ಬೊಬ್ಬೆ ಹೊಡೆದರು. ಆ ಬಳಿಕ ಕಳೆದ ಚುನಾವಣೆ ವೇಳೆ ಜೆಡಿಎಸ್​ ಬಿಟ್ಟು ಬಿಜೆಪಿ ಸೇರ್ಪಡೆಯಾಗಿ ಜೆಡಿಎಸ್​ಗೆ ಚೂರಿ ಇರಿದರು.

ಬಿಜೆಪಿ ಸೇರಿದ ಬಳಿ ಕಾಂಗ್ರೆಸ್​ ಪರ ಬ್ಯಾಟಿಂಗ್​..

ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್​ ಅಭ್ಯರ್ಥಿ ಎನ್​ ಚಲುವರಾಯಸ್ವಾಮಿ ಜಯ ಸಾಧಿಸಿದ್ದಾರೆ. ಮಂತ್ರಿ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಇವರ ಎದುರಾಳಿಯಾಗಿ ಜೆಡಿಎಸ್​ನಿಂದ ಶಿವರಾಮೇಗೌಡರಿಗೆ ಟಿಕೆಟ್​ ಕೊಡಲಿಲ್ಲ ಅನ್ನೋ ಕಾರಣಕ್ಕೆ ಬಿಜೆಪಿ ಸೇರ್ಪಡೆಯಾಗಿ ಪತ್ನಿಯನ್ನು ಅಖಾಡಕ್ಕೆ ಇಳಿಸಿದ್ರು. ಆದರೆ ಪಡೆದುಕೊಂಡ ಮತ 7,769 ಮಾತ್ರ. ಆದರೆ ಕಾಂಗ್ರೆಸ್​ನ ಚಲುವರಾಯಸ್ವಾಮಿ ಗೆದ್ದಿದ್ದು 4,414 ಮತಗಳು ಮಾತ್ರ. ಅಂದರೆ ಜೆಡಿಎಸ್​ ಸೋಲಿಸಿದ ಕೀರ್ತಿ ಶಿವರಾಮೇಗೌಡರಿಗೆ ಸಲ್ಲುತ್ತದೆ. ಇದೀಗ ಬಿಜೆಪಿಯಲ್ಲಿ ಆದರೂ ಶಿವರಾಮೇಗೌಡ ಉತ್ತಮ ನಾಯಕ ಎನಿಸಿಕೊಂಡರೇ ಅದೂ ಇಲ್ಲ, ಕಾಂಗ್ರೆಸ್​ ಜೊತೆಗೆ ಸೇರಿ ಕುತಂತ್ರ ಮಾಡಲು ಹೋಗಿ ಕಾಂಗ್ರೆಸ್​ ಪಕ್ಷದ ಮಾನವನ್ನೂ ಕಳೆದಿದ್ದಾರೆ.

ಮೋಸ, ವಂಚನೆ, ನಂಬಿಕೆ ದ್ರೋಹವೇ ರಾಜಕಾರಣ ಅಲ್ಲ..!

ರಾಜಕಾರಣದಲ್ಲಿ ಮೋಸ, ವಂಚನೆ, ದ್ರೋಹ ಇದೆಲ್ಲವೂ ಇರುತ್ತದೆ. ಇಲ್ಲ ಎಂದು ಹೇಳಿದರೆ ಸುಳ್ಳಾಗುತ್ತದೆ. ಆದರೆ ಅದನ್ನೇ ಕಾಯಕ ಮಾಡಿಕೊಳ್ಳುವುದು ಸರಿಯಲ್ಲ. ಶಿವರಾಮೇಗೌಡ ಅದನ್ನೇ ಮುಖ್ಯ ಎಂದುಕೊಂಡಂತೆ ಕಾಣಿಸುತ್ತಾರೆ. ಕಾಂಗ್ರೆಸ್​ ಪಕ್ಷದಲ್ಲಿ ದೊಡ್ಡ ನಾಯಕನಾಗಿ ಬೆಳೆಯುವ ಅವಕಾಶವಿತ್ತು, ಅಲ್ಲೂ ಉಳಿಯಲಿಲ್ಲ, ಕೊನೆಗೆ ಜೆಡಿಎಸ್​ನಿಂದ ಬಂದ ಸಂಸದರಾಗಿ ಕಳೆದು ಹೋಗಿದ್ದ ನಾಯಕತ್ವದ ಲಕ್ಷಣಗಳನ್ನು​ ಮತ್ತೆ ಪಡೆದುಕೊಂಡಿದ್ದರು. ಅಲ್ಲಿಯಾದರೂ ಎರಡನೇ ಇನ್ನಿಂಗ್ಸ್​ ಆಡ್ತಾರಾ..? ಅಂದುಕೊಂಡ್ರೆ ಅಲ್ಲೂ ಉಳಿಯಲಿಲ್ಲ. ಇನ್ನು ಬಿಜೆಪಿನ ಸೇರಿ ರಾಜಕೀಯ ಜೀವನ ಮುಗಿಸ್ತಾರಾ..? ಅಂದುಕೊಂಡ್ರೆ ಅಲ್ಲೂ ಬೆನ್ನಿಗೆ ಚೂರಿ ಹಾಕಿ ಪಕ್ಷದ ವಿರುದ್ಧವೇ ಮಾತನಾಡಿದ್ದಾರೆ. ಈ ಗುಣವೇ ಶಿವರಾಮೇಗೌಡರನ್ನು ಎಲ್ಲಿಯೂ ಸಲ್ಲದ ನಾಯಕನನ್ನಾಗಿ ಮಾಡಿದೆ ಎಂದರೆ ಸುಳ್ಳಲ್ಲ. ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಯ ಜೊತೆಗೆ ಇದ್ದಾಗ ನಂಬಿಕೆ ಎನ್ನುವುದು ಅತಿ ಮುಖ್ಯವಾಗುತ್ತದೆ ಅಲ್ಲವೇ..?

ಕೃಷ್ಣಮಣಿ

Tags: BJPCongress PartyL R SHIVARAMEGOWDAಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

Hair care: ಬೇಸಿಗೆಯಲ್ಲಿ ಕಾಡುವ ಜಿಡ್ಡಿನ ಕೂದಲಿಗೆ ಇಲ್ಲಿದೆ ಸುಲಭದ ಪರಿಹಾರ!

Next Post

ಮಾಜಿ ಸಚಿವ ರೇವಣ್ಣಗೆ ಮಹಾ ಸಂಕಷ್ಟ.. 7 ದಿನಗಳ ಕಾಲ ನ್ಯಾಯಾಂಗ ಬಂಧನ.. ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

Related Posts

ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು: ಶಾಸಕ ವಿನಯ್ ಕುಲಕರ್ಣಿ ದೋಷಿ-ನಿರ್ದೋಷಿ ?
ರಾಜಕೀಯ

ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು: ಶಾಸಕ ವಿನಯ್ ಕುಲಕರ್ಣಿ ದೋಷಿ-ನಿರ್ದೋಷಿ ?

by ಪ್ರತಿಧ್ವನಿ
April 15, 2026
0

ಧಾರವಾಡ ಜಿಲ್ಲೆಯ ರಾಜಕೀಯ ವಲಯವನ್ನು ಕದಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಕೊನೆಗೂ ತೀರ್ಪು ಹೊರಬಿದ್ದಿದೆ. ದೀರ್ಘಕಾಲದ ಕಾನೂನು ಹೋರಾಟದ ಬಳಿಕ...

Read moreDetails
ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ

ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ

April 15, 2026
ಭಾರತದ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ: ಸವಾಲುಗಳು ಮತ್ತು ಸಾಧ್ಯತೆಗಳು.

ಭಾರತದ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ: ಸವಾಲುಗಳು ಮತ್ತು ಸಾಧ್ಯತೆಗಳು.

April 15, 2026
ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

April 14, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
Next Post
ಕಣ್ಣೀರು ಸುರಿಸಿದ ಮಾಜಿ ಸಚಿವ ಎಚ್.ಡಿ. ರೇವಣ್ಣ

ಮಾಜಿ ಸಚಿವ ರೇವಣ್ಣಗೆ ಮಹಾ ಸಂಕಷ್ಟ.. 7 ದಿನಗಳ ಕಾಲ ನ್ಯಾಯಾಂಗ ಬಂಧನ.. ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada