• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಕುವೆಂಪು ಬಳಿಕ ದೇವನೂರು ಮಹಾದೇವರಿಗೆ ಅವಮಾನ: ವಿಷಾದ ವ್ಯಕ್ತಪಡಿಸಿದ ಚಿಂತಕರು, ಹೋರಾಟಗಾರರು

Any Mind by Any Mind
May 31, 2022
in ಕರ್ನಾಟಕ
0
ಕುವೆಂಪು ಬಳಿಕ ದೇವನೂರು ಮಹಾದೇವರಿಗೆ ಅವಮಾನ: ವಿಷಾದ ವ್ಯಕ್ತಪಡಿಸಿದ ಚಿಂತಕರು, ಹೋರಾಟಗಾರರು
Share on WhatsAppShare on FacebookShare on Telegram

ADVERTISEMENT

ಕನ್ನಡ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿವಾದ ತೀವ್ರ ಸ್ವರೂಪವನ್ನು ಪಡೆಯುತ್ತಿದೆ. ನೂತನ ಪಠ್ಯಪುಸ್ತಕದ ವಿವಾದವು ಕನ್ನಡದ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರನ್ನು ನಿಂದಿಸುವ ಮಟ್ಟಿಗೆ ತಲುಪಿದೆ. ಅವರ ಸಾಹಿತ್ಯವನ್ನೇ ಪ್ರಶ್ನಿಸುವ ಮಟ್ಟಿಗೆ ಬಲಪಂಥೀಯರು ತಮ್ಮ ಬೌದ್ಧಿಕ ಅಧಪತನವನ್ನು ತೋರಿಸುತ್ತಿದ್ದಾರೆ. ವಿವಾದದ ಬೆನ್ನಲ್ಲಿ, ದೇಮಾ ಅವರು ಪಠ್ಯಪುಸ್ತಕಗಳಿಂದ ತಮ್ಮ ಪಠ್ಯಗಳನ್ನು ಕೈ ಬಿಡುವಂತೆ ಕೇಳಿಕೊಂಡಿದ್ದರು. ಇದನ್ನು ಅರಗಿಸಿಕೊಳ್ಳಲಾಗದ ಬಿಜಪಿ ಹಾಗೂ ಅದರ ಬೆಂಬಲಿಗರು ದೇಮಾ ವಿರುದ್ಧ ಅಸಭ್ಯವಾಗಿ ಮುಗಿಬಿದ್ದಿದ್ದಾರೆ.


ಮೈಸೂರಿನ ಸಂಸದ ಪ್ರತಾಪ ಸಿಂಹ ಅಂತೂ ದೇಮಾ ಅವರನ್ನು ಕಾಂಗ್ರೆಸ್‌ ಏಜೆಂಟ್‌ ಎಂಬಂತೆ ಬಿಂಬಿಸಿದ್ದು, ಅವರಲ್ಲಿ ವಿಚಾರವಿಲ್ಲ, ಬರೀ ಎಂಜಲಿದೆ ಎಂದು ಹೇಳಿಕೆ ನೀಡುವಷ್ಟರ ಮಟ್ಟಿಗೆ ಇಳಿದಿದ್ದಾರೆ.

ಈ ನಡುವೆ, ಜಿ.ಬಿ ಹರೀಶ್‌ ಎಂಬ ಬರಹಗಾರರೊಬ್ಬರು ದೇವನೂರು ಮಹಾದೇವ ಅವರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ ಮಾಡಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮಹಾದೇವ ಅವರ ಬಗ್ಗೆ ಜಿಬಿ ಹರೀಶ್‌ ಎಂಬಾತ ಹಾಕಿರುವ ಪೋಸ್ಟ್‌ ಬ್ರಾಹ್ಮಣ್ಯದ ಕುರುಹು ಎಂದು ನಾಡಿನ ಹಲವು ಹೋರಾಟಗಾರರು, ಚಿಂತಕರು ಪ್ರತಿಕ್ರಿಯಿಸಿದ್ದಾರೆ.
“ದಶಕಗಳ ಹಿಂದೆ ಬರೆದ ಕುಸುಮಬಾಲೆಯ ಬಂಡವಾಳ ಮುಗಿದಿದೆ. ದೇವನೂರು ಹೊಸದೇನೂ ಬರೆಯದೇ ದೊಡ್ಡವರಾದರಲ್ಲ!?” ಎಂದು ಜಿಬಿ ಹರೀಶ್‌ ಬರೆದಿದ್ದು, ಇದು ಬ್ರಾಹ್ಮಣ್ಯದ ಶ್ರೇಷ್ಟತೆಯ ವ್ಯಸನ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ದೇವನೂರು ಮಹಾದೇವ ಹಾಗೂ ರಾಷ್ಟ್ರಕವಿ ಕುವೆಂಪುರನ್ನು ಹಿಯಾಳಿಸುತ್ತಿರುವ ಬಗ್ಗೆ ಮಾಜಿ ಸಚಿವ ಹೆಚ್‌ ಸಿ ಮಹದೇವಪ್ಪ ಪ್ರತಿಕ್ರಿಯಿಸಿದ್ದು, “ಶೂದ್ರ ಸಮುದಾಯಗಳ ವೈಚಾರಿಕ ಪ್ರಜ್ಞೆಯನ್ನು ಗಟ್ಟಿಗೊಳಿಸಿದ ಕುವೆಂಪು ಅವರನ್ನು ಹೀಯಾಳಿಸುವ ಕೆಲಸ ಮಾಡುತ್ತಿರುವ ಬಿಜೆಪಿಗರು ಇದೀಗ ಸಾಹಿತಿ ದೇವನೂರು ಮಹಾದೇವ ಅವರ ಮೇಲೆಯೂ ವಿಷ ಕಾರುತ್ತಿದ್ದಾರೆ. ಕೆಳ ವರ್ಗಗಗಳ ಪರವಾದ ಮತ್ತು ಎಲ್ಲ ಮನುಷ್ಯರೂ ಸಮಾನರೆಂಬ ತಿಳುವಳಿಕೆಯನ್ನು ನೀಡಿದ ಕುವೆಂಪು ಮತ್ತು ದೇವನೂರು ಮಹಾದೇವ ಅಂತವರನ್ನು ಅಸಹನೆಯಿಂದ ಕಾಣುವಂತಹ ನೀಚ ಪ್ರವೃತ್ತಿಯನ್ನು ಮನುವಾದಿಗಳು ಹುಟ್ಟು ಹಾಕಲು ಯತ್ನಿಸುತ್ತಿರುವುದು ಖಂಡನಾರ್ಹವಾದ ಸಂಗತಿಯಾಗಿದೆ. ಇನ್ನು ಇದೇ ಸಂದರ್ಭದಲ್ಲಿ ಮನುವಾದಿಗಳ ಈ ಪ್ರಯತ್ನಕ್ಜೆ ಸ್ವಾಮೀಜಿಗಳ ಆದಿಯಾಗಿ ಬಹಳಷ್ಟು ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸುತ್ತಿದ್ದು ಕನ್ನಡ ನಾಡಿನ ವೈಚಾರಿಕ ಪ್ರಜ್ಞೆಯಾದ ಸಾಹಿತಿಗಳ ಪರವಾಗಿ ಹೋರಾಟ ಮಾಡುವ ಎಲ್ಲಾ ಜನರ ಮತ್ತು ಕನ್ನಡ ಮನಸ್ಸುಗಳಿಗೆ ನನ್ನ ಪೂರ್ಣ ಬೆಂಬಲವಿದೆ.” ಎಂದು ಫೇಸ್‌ಬುಕ್‌ ಪೋಸ್ಟ್‌ ಮಾಡಿದ್ದಾರೆ. .

ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀಪಾದ ಹೆಗ್ಡೆ ಅವರು, “ಖಂಡಿ ಖಂಡಿ ಬರೆದು ಬಿಸಾಕಿದರೆ ಮಾತ್ರ ದೊಡ್ಡ ಸಾಹಿತಿಯಾಗುವುದಿಲ್ಲ. ದೇವನೂರು ಮಹಾದೇವ ಬರೆದದದ್ದು ಸಂಖ್ಯೆಯಲ್ಲಿ ಕಡಿಮೆ ಇದ್ದಿರಬಹುದು ಆದರೆ ಗುಣ ಮಟ್ಟದಲ್ಲಿ ಅಂತರಾಷ್ಟ್ರೀಯ ಮಟ್ಟದ ಯಾವ ಬರಹಗಾರರಿಗೂ ಅವರು ಕಡಿಮೆಯಿಲ್ಲ. ಸ್ವತಃ ಬರಹಗಾರನಾದ ಜಿ ಬಿ ಹರೀಶ್ ಎಂಬ ಬ್ರಾಹ್ಮಣ್ಯದ ಲೇಖಕ ದೇವನೂರರನ್ನು ಟೀಕಿಸುವಾಗ ಅವರ ಬರಹಗಳ ಗುಣಮಟ್ಟ ಯಾವುದು ಎನ್ನುವುದನ್ನು ಅರಿತು ನುಡಿಯ ಬೇಕಿತ್ತು. ಹೀಗೆ ಬರೆಯುವುದರಿಂದ ಇವನು ತಾನೊಬ್ಬ ಕಳಪೆ ಬರಹಗಾರ ಮಾತ್ರ ಅಲ್ಲ ಮಿದುಳಿನಲ್ಲಿ ಕೇವಲ ಕೊಳಕು ತುಂಬಿದ ಮನುಷ್ಯನೂ ಹೌದು ಎನ್ನುವುದನ್ನು ಸಾಬೀತು ಪಡಿಸಿದ್ದಾನೆ.” ಎಂದು ಬರೆದಿದ್ದಾರೆ.

ಕುವೆಂಪು, ದೇಮಾ ಸೇರಿದಂತೆ ಕನ್ನಡದ ಸಾಕ್ಷಿಪ್ರಜ್ಞೆಗಳನ್ನು ಅವಮಾನಿಸುತ್ತಿರುವ ನಡೆಗೆ ವಿಷಾದ ವ್ಯಕ್ತಪಡಿಸಿರುವ ಕನ್ನಡದ ಚಿಂತಕ, ಲೇಖಕ ಪ್ರೊ. ರಹಮತ್‌ ತರೀಕೆರೆ “ಮತೀಯವಾದವು ಕೇವಲ ಕ್ರೈಸ್ತರ ಮುಸ್ಲಿಮರ ಕಮ್ಯುನಿಸ್ಟರ ಹಗೆತನ ಸಾಧಿಸುತ್ತದೆ ಎಂದೇ ಬಹಳ ಜನರ ಮುಗ್ಧ ನಂಬೋಣ. ಮೇಲುನೋಟಕ್ಕೆ‌ ಇದು ನಿಜ. ಆದರೆ, ಆಳದಲ್ಲಿ ಮತ್ತು ಗುಪ್ತವಾಗಿ ಅದು, ಭಾರತ ದೇಶವು ಸೃಷ್ಟಿಸಿದ ಅಪೂರ್ವ ಪ್ರತಿಭೆಗಳೂ ಧೀಮಂತರೂ ಆದ ಬಸವಣ್ಣ ಅಕ್ಕ ನಾರಾಯಣಗುರು ಗಾಂಧಿ ಟಾಗೂರ್ ಅಂಬೇಡ್ಕರ್ ಕುವೆಂಪು ದೇವರಾಜರಸು, ನಂಜುಂಡಸ್ವಾಮಿ ತೇಜಸ್ವಿ ಲಂಕೇಶ್ ಅನಂತಮೂರ್ತಿ ಕಾರ್ನಾಡ ಕಲಬುರ್ಗಿ ಮೂರ್ತಿರಾವ್ ಸಾರಾ ಶಂಕರಭಟ್ ದೇವನೂರು ರಾಜಕುಮಾರ್ ಅವರಂಥವರನ್ನು ಕೂಡ ಇಷ್ಟಪಡುವುದಿಲ್ಲ. ಈ ದಿಟವನ್ನು ಈಚಿನ ವರ್ಷಗಳಲ್ಲಿ ನಡೆದ ವಿವಾದ ಮತ್ತು ವಾಗ್ವಾದಗಳು ಮನವರಿಕೆಗೊಳಿಸಿವೆ. ಪಠ್ಯಪುಸ್ತಕವಿರಲಿ, ಭಾರತೀಯ ಸಂಸ್ಕೃತಿಯ ಗ್ರಹಿಕೆಯಿರಲಿ, ತಮ್ಮ ಸಿದ್ಧಾಂತಕ್ಕೆ ಒಳಗಾಗದ ನಾಡಿನ ಶ್ರೇಷ್ಠ ಮನಸ್ಸುಗಳನ್ನೆಲ್ಲ ಬಾಹಿರಗೊಳಿಸುತ್ತ ಹೋದರೆ, ಕಡೆಗೆ ಉಳಿಯುವುದೇನು?” ಎಂದು ಪ್ರಶ್ನಿಸಿದ್ದಾರೆ.

Tags: BJPCongress PartyCovid 19ನರೇಂದ್ರ ಮೋದಿಬಿಜೆಪಿ
Previous Post

ಅಪ್ಪಟ ಕನ್ನಡ ನಟನಿಗೆ ತೆರೆದ ರಾಜ್ಯಸಭೆ ಬಾಗಿಲು!

Next Post

ಕುಪೇಂದ್ರ ರೆಡ್ಡಿ ಬದಲು ವೀರೇಂದ್ರಗೆ  ಮಣೆ ಹಾಕಿದ ಜೆಡಿಎಸ್ ಹೈಕಮಾಂಡ್!

Related Posts

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
0

ನಾವು ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದರು. ಅವರು ಇಂದು ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು...

Read moreDetails
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025
Next Post
ಕುಪೇಂದ್ರ ರೆಡ್ಡಿ ಬದಲು ವೀರೇಂದ್ರಗೆ  ಮಣೆ ಹಾಕಿದ ಜೆಡಿಎಸ್ ಹೈಕಮಾಂಡ್!

ಕುಪೇಂದ್ರ ರೆಡ್ಡಿ ಬದಲು ವೀರೇಂದ್ರಗೆ  ಮಣೆ ಹಾಕಿದ ಜೆಡಿಎಸ್ ಹೈಕಮಾಂಡ್!

Please login to join discussion

Recent News

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada