ಲೋಕಸಭಾ ಚುನಾವಣೆಯಲ್ಲಿ ಮಂಡ್ಯ (Mandya) ಕ್ಷೇತ್ರದಿಂದ ಗೆದ್ದು ಸಂಸದರಾಗಿ ಆಯ್ಕೆಯಾದ ಮಾಜಿ ಸಿಎಂ ಕುಮಾರಸ್ವಾಮಿ (Kumaraswamy) ಮೋದಿ (Modi) ಸಂಪುಟದಲ್ಲಿ ಸ್ಥಾನ ಪಡೆದಿದ್ದು ,ಯಾವ ಖಾತೆ ಸಿಗಬಹುದು ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಕುಮಾರಸ್ವಾಮಿಯವರ ನಿರೀಕ್ಷೆ ಹುಸಿಯಾಗಿದೆ.
![](https://pratidhvani.com/wp-content/uploads/2024/06/IMG_8162.jpeg)
ಕುಮಾರಸ್ವಾಮಿ ಮಂಡ್ಯದಿಂದ ಗೆದ್ದು ಸಂಸದರಾದರೆ ಅವರಿಗೆ ಕೇಂದ್ರದಲ್ಲಿ ಕೃಷಿ ಖಾತೆ ನೀಡಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು . ಸ್ವತಃ ಕುಮಾರಸ್ವಾಮಿ ಕೂಡ ಅಂತದ್ದೊಂದು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು, ಯಾವುದೇ ಖಾತೆ ಕೊಟ್ಟರು ನಿಭಾಯಿಸುತ್ತೇನೆ .ಆದರೆ ಕೃಷಿ ಖಾತೆ ಕೊಟ್ಟರೆ ಇನ್ನೂ ಖುಷಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಆದರೆ ಇದೀಗ ಎಲ್ಲಾ ಸಚಿವರುಗಳಿಗೂ ಖಾತೆ ಹಂಚಿಕೆಯಾಗಿದ್ದು, ಮಾಜಿ ಸಿಎಂ ಕುಮಾರಸ್ವಾಮಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆಯನ್ನು ನೀಡಲಾಗಿದೆ .ಒಂದು ವೇಳೆ ಕೃಷಿ ಖಾತೆ ಸಿಕ್ಕಿದ್ದಲ್ಲಿ ರಾಜ್ಯದಲ್ಲಿ ಬಹಳಷ್ಟು ಕೃಷಿ ಸಂಬಂಧಿತ ಯೋಜನೆಗಳು ಮರುಜೀವ ಪಡೆದುಕೊಳ್ಳಬಹುದು ಎಂಬ ನಿರೀಕ್ಷೆಗೆ ಬ್ರೇಕ್ ಬಿದ್ದಿದೆ.