ಕಳೆದ ಅಕ್ಟೋಬರ್ 17ರಂದು ತುಲಾಸಂಕ್ರಮಣ ಜಾತ್ರೆಯ ಎರಡು ದಿನ ಭಾಗಮಂಡಲದಿಂದ ತಲಕಾವರಿಯವರೆಗೆ ಸಾರ್ವಜನಿಕರಿಗೆ ಪುಕ್ಕಟೆ ಬಸ್ ಸೌಕರ್ಯವನ್ನು ಶಾಸಕ ಎ. ಎಸ್ ಪೊನ್ನಣ್ಣನವರ (A. By S Ponnana)ಅಣತಿಯಂತೆ ಕೆ ಎಸ್ ಆರ್ ಟಿ ಸಿ (KSRTC)ಸಜ್ಜುಗೊಳಿಸಿತ್ತು.ಈ ಕಾರ್ಯದಿಂದ ಸಾರ್ವಜನಿಕರಿಂದ ಪ್ರಶಂಸೆಗೆ ಒಳಗಾಗಿದ್ದ ಕೆ ಎಸ್ ಆರ್ ಟಿ ಸಿ ಇಲಾಖೆ, ಇದೀಗ ಭಾಗಮಂಡಲ, ವ್ಯವಸ್ಥಾಪನಾ ಸಮಿತಿಯ ಮುಖ್ಯ ಕಾರ್ಯನಿರ್ವಣ ಅಧಿಕಾರಿ ಅವರ ಕಾರ್ಯಾಲಯಕ್ಕೆ ಇದರ ಬಾಪ್ತು 1.80 ಲಕ್ಷ ಹಣ ನೀಡುವಂತೆ ಬಿಲ್ ಕಳುಹಿಸಿದೆ .
ಈ ಬಿಲ್ಲನ್ನು ನೋಡಿದ ಇಲಾಖೆಯ ಕಾರ್ಯನಿರ್ವಾಣ ಅಧಿಕಾರಿ ಏನು ಮಾಡಬೇಕೆಂಬುದು ತೋಚದಂತಾಗಿದೆ. ಕೆ ಎಸ್ ಆರ್ ಟಿ ಎಸ್ ಸಿ ಯಲ್ಲಿ ಮಹಿಳೆಯರಿಗೆ ಪುಕ್ಕಟೆ ನೀಡಿ ಸರಕಾರದಿಂದ ಹಣ ಪಡೆದುಕೊಳ್ಳುತ್ತಿರುವ ಇಲಾಖೆ ಇದೀಗ ಜಾತ್ರೆ ಸಂದರ್ಭ ಎಲ್ಲರಿಗೂ ಪುಕ್ಕಟೆ ಬಸ್ ಸೌಕರ್ಯ ನೀಡಲಾಗಿದೆ ಎಂದು ಪ್ರಚಾರಗಿಟ್ಟಿಸಿ ಸೈ ಅನ್ನಿಸಿಕೊಂಡಿದ್ದ ಇಲಾಖೆ ಇದೀಗ ನೇರವಾಗಿ ಭಕ್ತಾದಿಗಳು ಭಗವಂತನಿಗೆ ಹಾಕುವ ಕಾಣಿಕೆ ಹಣಕ್ಕೆ ಕೈಹಾಕಿದೆ.
ಇಲ್ಲಿರುವ ಅರ್ಚಕರಿಗೆ ಹಾಗೂ ಸಿಬ್ಬಂದಿಯವರಿಗೆ ಕೂಡ ಸಮರ್ಪಕವಾಗಿ ವೇತನ ನೀಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಇರುವಾಗ ಇದೀಗ ಪುಕ್ಕಟೆ ಬಸ್ಸು ತಾವೇ ಓಡಿಸಿ ದೊಡ್ಡ ಮೊತ್ತದ ಬಿಲ್ಲು ಕಳುಹಿಸಿದ ಇಲಾಖೆಯ ನಡೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.