ರಾಜ್ಯ ರಾಜಕಾರಣದಲ್ಲಿ ತೀವ್ರ ಗದ್ದಲ ಎಬ್ಬಸಿರೋ ಪಠ್ಯ ಪರಿಷ್ಕರಣಾ ವಿವಾದವನ್ನು ಸುಖಾಂತ್ಯಗೊಳಿಸಲು ನಿನ್ನೆ ತಡರಾತ್ರಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮಿತಿಯನ್ನು ವಿರ್ಸಜಿಸಿ ಆದೇಶ ಹೊರಡಿಸಿದ್ದರು.
ವಿರ್ಸಜನೆ ಏನೋ ಆಯಿತ್ತು ಆದರೆ, ರಾಜಕೀಯ ಪಕ್ಷಗಳ ನಡುವಿನ ಕಿತ್ತಾಟ ಯಾಕೋ ಅಂತ್ಯವಾಗುವಂತೆ ಕಾಣುತ್ತಿಲ್ಲ. ಅದಕ್ಕೆ ಪುರಾವೆ ಎಂಬಂತೆ ಎನ್ ಎಸ್ ಯುಐ ಅಧ್ಯಕ್ಷ ಕೀರ್ತಿ ಗಣೇಶ್ ಬಂಧನ ಖಂಡಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯನವರೇ ಚಡ್ಡಿಗೆ ಒಮ್ಮೆ ಬೆಂಕಿ ಹಚ್ಚಿ ನೋಡಿ ನಿಮ್ಮ ಬುಡವೇ ಸುಟ್ಟು ಬೂದಿಯಾಗುತ್ತದೆ. ಆರ್ ಎಸ್ ಎಸ್ ತಂಟೆಗೆ ಬರಬೇಡಿ ಎಂದು ಎಚ್ಚರಿಸಿದ್ದಾರೆ.
ಮುಂದುವರೆದು, ರಾವಣ ಹನುಮನ ಬಾಲಕ್ಕೆ ಬೆಂಕಿ ಇಟ್ಟ ಕಾರಣ ಲಂಕೆ ಸುಟ್ಟು ಬೂದಿಯಾಯಿತ್ತು. ಕಾಂಗ್ರೆಸ್ ಪಕ್ಷವನ್ನ ಈಗಾಗಲೇ ಚಟ್ಟದಲ್ಲಿ ಮಲಗಿಸಲಾಗಿದೆ ಇನ್ನೇನು ಬೆಂಕಿ ಹಚ್ಚುವುದೊಂದೇ ಬಾಕಿ. ಆ ಕೆಲಸ ನಿಮ್ಮಗಿಂತ ಚೆನ್ನಾಗಿ ಇನ್ಯಾರು ಮಾಡಬಲ್ಲರು ಎಂದು ಟಾಂಗ್ ಕೊಟ್ಟಿದ್ದಾರೆ.
ತಿಪಟೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆ ಮುಂದೆ ಆರ್ ಎಸ್ ಎಸ್ ಚಡ್ಡಿ ಸುಟ್ಟು ಪ್ರತಿಭಟನೆ ನಡೆಸಿದ ಕಾರಣ ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಮೇಲೆ ಗೂಂಡಾಗಳನ್ನು ಬಿಟ್ಟು ಹಲ್ಲೆ ಮಾಡಿಸಲಾಗಿದೆ. ಕೂಡಲೇ ಹಲ್ಲೆ ನಡೆಸಿದ ಗೂಂಡಾಗಳನ್ನು ಬಂಧಿಸದಿದ್ದರೆ ರಾಜ್ಯದ್ಯಂತ ಚಡ್ಡಿ ಸುಡುವ ಪ್ರತಿಭಟನೆ ನಡೆಸುತ್ತೇವೆ ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದರು.
ಆರ್ ಎಸ್ ಎಸ್ ನವರು ಈ ಹಿಂದೆ ಚಡ್ಡಿ ಹಾಕುತ್ತಿದ್ದರು ಈಗ ಕಾಲ ಬದಲಾದ ಕಾರಣ ಪ್ಯಾಂಟ್ ಹಾಕುತ್ತಿದ್ದಾರೆ ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ದ ಪ್ರತಿಭಟಿಸುವ ಸಮಯದಲ್ಲಿ ಸಚಿವರ ಮನೆ ಮುಂದೆ ಚಡ್ಡಿಯನ್ನ ಸುಡಲಾಗಿತ್ತು. ಆದರೆ, ಗೃಹ ಸಚಿವ ಆರಗ ಜ್ಞಾನೇಂದ್ರರ ಒತ್ತಡಕ್ಕೆ ಮಣಿದ ಪೊಲೀಸರು ಮನೆಗೆ ಬೆಂಕಿ ಹಚ್ಚಲು ಬಂದಿದ್ದರು ಎಂದು ಸುಳ್ಳು ಮೊಕದ್ದಮೆಯನ್ನ ದಾಖಲಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದರು.