ಉಗ್ರ ಕ್ರಾಂತಿಯಿಂದಲಾದರೂ ಚುನಾವಣೆಯನ್ನು ಸಾತ್ವಿಕ ಮಾರ್ಗಕ್ಕೆ ತಿರುಗಿಸುವ ಪಣ…
ಕನ್ನಡದ ಕುಲನಾಯಕರಲ್ಲಿ ಒಬ್ಬರೂ, ನನ್ನ ಆದರ್ಶವೂ ಆದ ಕುವೆಂಪುರವರು ಹೇಳಿದಂತೆ

ನಮ್ಮ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಚುನಾವಣೆಗಳನ್ನು ಸಾತ್ವಿಕ ಮಾರ್ಗಕ್ಕೆ ತಿರುಗಿಸಲು ಉಗ್ರ ಕ್ರಾಂತಿಯ ನೀತಿಗಳನ್ನು ಅಳವಡಿಸಿಕೊಳ್ಳಲು KRS ಪಕ್ಷ ಈಗಿನಿಂದಲೇ ಸಿದ್ಧವಾಗುತ್ತಿದೆ.
ಸರಿಯಾಗಿ ಅರ್ಧ ಶತಮಾನದ ಹಿಂದೆಯೇ ಅಪ್ರತಿಮ ದಾರ್ಶನಿಕ ಕವಿ ಕಂಡ ಅಪಾಯ ಇವತ್ತಿಗೆ ಇನ್ನೂ ಹೆಚ್ಚಾಗಿದೆ. ಅವರು ಕೊಟ್ಟ ಮಾರ್ಗವನ್ನು ನಾವ್ಯಾರೂ ಹಿಡಿಯಲಾಗಲಿಲ್ಲ. ಆದರೆ ಇನ್ನು ಮುಂದೆ ಅಂತಹ ಮಾರ್ಗದಲ್ಲಿ ನಾನು ಮತ್ತು KRS ಪಕ್ಷ ಮುಂದುವರೆಯುತ್ತೇವೆ.

“ನಿಜವಾದ ಪ್ರಜಾಸತ್ತೆಯೆಂದರೆ, ಪ್ರಜೆಗಳು ಅನಿರ್ಬಂಧಿತ ಇಚ್ಛಾ ಸ್ವಾತಂತ್ರ್ಯದಿಂದ ಸರ್ವರ ಅಭ್ಯುದಯಕ್ಕಾಗಿ ಪ್ರಾಮಾಣಿಕ ವ್ಯಕ್ತಿಗಳನ್ನು ಆಯ್ಕೆ ಮಾಡುವುದು. ಆದರೆ, ಇಂದಿನ ಚುನಾವಣಾ ವ್ಯವಸ್ಥೆಯಲ್ಲಿ ಯಾವುದೇ ಪ್ರಾಮಾಣಿಕ, ಸಂಭಾವಿತ ಮತ್ತು ಸುಸಂಸ್ಕೃತ ವ್ಯಕ್ತಿ ಅದರ ಹತ್ತಿರ ಸುಳಿಯಲಾರ. ಹಣದ ಹೊಳೆ ಹರಿಸಿ ಚುನಾವಣೆ ಗೆಲ್ಲುವ ಯಾವುದೇ ವ್ಯಕ್ತಿ ಅಥವಾ ಪಕ್ಷವು ಭ್ರಷ್ಟಾಚಾರಕ್ಕೆ ಬಲಿಯಾಗದೇ ಇರಲು ಸಾಧ್ಯವಿಲ್ಲ. ಹಾಗಾಗಿ, ಪ್ರಜಾಸತ್ತೆಯನ್ನು ರಕ್ಷಿಸುವ ಇಚ್ಛೆಯಿದ್ದವರು ಇಂದಿನ ಧನಾಶ್ರಿತ ಚುನಾವಣಾ ಪದ್ಧತಿಯನ್ನು ಬದಲಾಯಿಸಿ ಗುಣಾಶ್ರಿತವನ್ನಾಗಿ ಪರಿವರ್ತಿಸುವ ಹೊಣೆಗಾರಿಕೆ ವಹಿಸಬೇಕಾಗಿದೆ. ಒಂದು ಉಗ್ರ ಕ್ರಾಂತಿಯಿಂದಲಾದರೂ ಚುನಾವಣೆಯನ್ನು ಸಾತ್ವಿಕ ಮಾರ್ಗಕ್ಕೆ ತಿರುಗಿಸದಿದ್ದರೆ ಸ್ವಾರ್ಥಿಗಳು, ಸಮಯಸಾಧಕರು, ಗೂಂಡಾಗಳು, ಖದೀಮರು, ಚಾರಿತ್ರ್ಯಹೀನರು ಪ್ರಜಾಸತ್ತೆಯ ಹುಸಿಹೆಸರಿನ ಹಿಂದೆ ಪ್ರಚ್ಛನ್ನ ಸರ್ವಾಧಿಕಾರ ನಡೆಸುತ್ತಾರೆ.”
– ಕುವೆಂಪು, 1974.

ಈ ಹಿನ್ನೆಲೆಯಲ್ಲಿ ನಾನು ಇದೇ ಜನವರಿ 26ರಂದು ರಾಜ್ಯದ ಜನರಿಗೆ ಮತ್ತು KRS ಪಕ್ಷದ ಸೈನಿಕರಿಗೆ ಕೊಟ್ಟ ಸಂದೇಶವನ್ನು ಗಮನಿಸಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ. ಅಂದಿನ ಭಾಷಣದ ಲಿಂಕ್ ಅನ್ನು ಈ ಪೋಸ್ಟಿನ ಕಾಮೆಂಟ್ಸ್ ವಿಭಾಗದಲ್ಲಿ ಕೊಟ್ಟಿರುತ್ತೇನೆ.
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.