![](https://pratidhvani.com/wp-content/uploads/2024/07/koppal-sp-yashodha-1024x576.webp)
ಕರ್ನಾಟಕ ಸರ್ಕಾರ (Karnataka Government) ಗುರುವಾರ (ಜು.04) ರಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (Koppal SP) ಯಶೋಧಾ ಎಸ್. ವಂಟಗೋಡಿ ಅವರನ್ನು ಲೋಕಾಯುಕ್ತದ (Lokayukta) ಎಸ್ಪಿ ಸ್ಥಾನಕ್ಕೆ ಮಾಡಿ ಆದೇಶ ಹೊರಡಿಸಿದೆ. ಜಿಲೆಯ ನೂತನ ಎಸ್ಪಿಯಾಗಿ ರಾಮ್ ಎಲ್. ಅರಸಿದ್ದಿ ಅವರನ್ನು ನೇಮಕ ಮಾಡಿದೆ. ಆದರೆ, ಯಶೋಧಾ ಎಸ್. ವಂಟಗೋಡಿ(Yashodha S Ventagodi) ವರ್ಗಾವಣೆ ವಿಚಾರವಾಗಿ ಜಿಲ್ಲೆಯ ಕಾಂಗ್ರೆಸ್ (Congress) ಶಾಸಕರ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ.
ಯಶೋಧಾ ಎಸ್. ವಂಟಗೋಡಿ ವರ್ಗಾವಣೆಗೆ ಜಿಲ್ಲೆಯ ಕೆಲ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕೂಡಲೆ ವರ್ಗಾವಣೆಯನ್ನು ತಡೆಹಿಡಿಯಬೇಕೆಂದು, ಹಾಲಿ ಎಸ್ಪಿಯವರನ್ನೇ ಮುಂದುವರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ್(Home Minister G Parameshwar) ಅವರಿಗೆ ಮನವಿ ಮಾಡಿದ್ದಾರೆ. ಹೀಗಾಗಿ, ರಾಮ್ ಎಲ್. ಅರಸಿದ್ದಿ ಅವರು ಅಧಿಕಾರ ಸ್ವೀಕಾರ ಮಾಡದಂತೆ ಗೃಹ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.ಯಾವುದೇ ಕಾರಣಕ್ಕೂ ಹಾಲಿ ಎಸ್ಪಿ ಅವರನ್ನು ಬದಲಾವಣೆ ಮಾಡಬಾರದು. ಹಾಲಿ ಎಸ್ಪಿ ಅವರ ವರ್ಗಾವಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮಾಡಿಸಿದ್ದಾರೆ. ತಮ್ಮ ತವರು ಕ್ಷೇತ್ರ ಇಲಕಲ್ ಮೂಲದವರನ್ನು ಎಸ್ಪಿಯಾಗಿ ಕರೆತಂದಿದ್ದಾರೆ ಅಂತ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.
ಯಾವುದೇ ಕಾರಣಕ್ಕೂ ಹಾಲಿ ಎಸ್ಪಿ ಅವರನ್ನು ಬದಲಾವಣೆ ಮಾಡಬಾರದು. ಹಾಲಿ ಎಸ್ಪಿ ಅವರ ವರ್ಗಾವಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮಾಡಿಸಿದ್ದಾರೆ. ತಮ್ಮ ತವರು ಕ್ಷೇತ್ರ ಇಲಕಲ್ ಮೂಲದವರನ್ನು ಎಸ್ಪಿಯಾಗಿ ಕರೆತಂದಿದ್ದಾರೆ ಅಂತ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.