ನಗರದಲ್ಲಿ ಮೀಟರ್ ಬಡ್ಡಿ ಚಕ್ರ ಬಡ್ಡಿ ದಂಧೆ ಹೆಚ್ಚಾಗಿದ್ದು,ಈ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಕನ್ನಡ ಸಿನಿಮಾ (Sandalwood) ರಂಗದ ಖ್ಯಾತ ನಿರ್ಮಾಪಕ (Producer) ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ.
ಕನ್ನಡದಲ್ಲಿ ಹತ್ತಕ್ಕೂ ಹೆಚ್ಚು ಚಿತ್ರ ನಿರ್ಮಿಸಿ ಪ್ತಶಸ್ತಿ ಪಡೆದುಕೊಡಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ (Pushkar mallikarjun) ಅವರಿಗೆ ದಂಧೆಕೋರರ ಕಾಟ ಹೆಚ್ಚಾಗಿದ್ದು ಈ ಬಗ್ಗೆ ದೂರು ನೀಡಿದ್ದಾರೆ.
![](https://pratidhvani.com/wp-content/uploads/2024/06/5bbe9fd3-b1f9-41e8-86be-4b323a70ddcd.jpeg)
ಅವನೇ ಶ್ರೀಮನ್ನಾರಾಯಣ (ASN), ಅವತಾರ ಪುರುಷ ಹಾಗು (Avatar purusha) ಅವತಾರ ಪುರುಷ ಭಾಗ ಎರಡು ಚಿತ್ರ ನಿರ್ಮಿಸಿದ್ದ ಪುಷ್ಕರ್ ಮಲ್ಲಿಕಾರ್ಜುನ್ ಗೆ ಮೀಟರ್ ಬಡ್ಡಿ ದಂಧೆಕೋರರ ಕಾಟ ಹೆಚ್ಚಾಗಿದ್ಯಂತೆ. ಈ ಚಿತ್ರಗಳ ನಿರ್ಮಾಣಕ್ಕೆ ಆದರ್ಶ್, ಹರ್ಷ ,ಶಿವು ಹಾಗು ಹರ್ಷ ಡಿ ಎಂಬುವರಿಂದ ಐದು ಕೋಟಿ ಹಣ ಸಾಲ ಪಡೆದಿದ್ದರಂತೆ ಪುಷ್ಕರ್ ಮಲ್ಲಿಕಾರ್ಜುನ.
ಆದರೆ ಈ ಮೂರು ಚಿತ್ರಗಳು ಸೋಲು ಅನುಭವಿಸಿತ್ತು.ಈ ಹಿನ್ನಲೆ ಐದು ಕೋಟಿಗೆ ಇದುವರೆಗೆ ಬಡ್ಡಿ ಸೇರಿ 11 ಕೋಟಿ ಕಟ್ಟಿದ್ದಾರಂತೆ. ಆದರೂ ಇನ್ನೂ ಹದಿಮೂರು ಕೋಟಿ ಕಟ್ಟಿ ಎಂದು ದುಂಬಾಲು ಬಿದ್ದಿದ್ದಾರಂತೆ ಈ ಕಿರಾತಕರು. ಕಟ್ಟದಿದ್ದಾಗ ಹುಡುಗರನ್ನ ಕರೆಸಿ ಬೆದರಿಕೆ ಹಾಕಿದ್ದಾರಂತೆ .
ಹೀಗಾಗಿ ಸಹಕಾರ ಸಂಘದ ಉಪ ನಿಬಂಧಕರಿಗೆ ಈ ಬಗ್ಗೆ ಸದ್ಯ ಪುಷ್ಕರ್ ದೂರು ನೀಡಿದ್ದಾರೆ. ಸಿಸಿಬಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆ ಸಿಸಿಬಿ ಅಧಿಕಾರಿಗಳು ಎಫ್ ಐ ಆರ್ (FIR) ದಾಖಲಿಸಿದ್ದಾರೆ.ಮನಿಲ್ಯಾಂಡ್ರಿಂಗ್ ಸೆಕ್ಷನ್ ನಲ್ಲಿ ಎಫ್ ಐ ಆರ್ ದಾಖಲಾಗಿದೆ.