ಕೆ.ಆರ್.ನಗರದಲ್ಲಿ (KR nagar) ದಾಖಲಾಗಿದ್ದ ಕಿಡ್ನಾಪ್ (Kidnap) ಪ್ರಕರಣದಲ್ಲಿ, ಕಾಣೆಯಾಗಿದ್ದ ಸಂತ್ರಸ್ತ ಮಹಿಳೆಯನ್ನು ಪತ್ತೆಹಚ್ಚಿ ಎಸ್.ಐ.ಟಿ (SIT) ಅಧಿಕಾರಿಗಳು ರಕ್ಷಿಸಿದ್ದಾರೆ. ಆದ್ರೆ ಸಂತ್ರಸ್ತೆಯ ಹೇಳಿಕೆಗಳು ಅಧಿಕಾರಿಗಳಿಗೆ ತೊಡಕಾಗಿದೆ.

ಮೈಸೂರಿನ (Mysuru) ಹುಣಸೂರಿನ ಫಾರ್ಮ್ಹೌಸ್(Farmhouse) ನಲ್ಲಿದ್ದ ಸಂತ್ರಸ್ತ ಮಹಿಳೆಯನ್ನ ಅಧಿಕಾರಿಗಳು ರಕ್ಷಿಸಿದ್ದಾರೆ. ರೇವಣ್ಣ ಆಪ್ತ ರಾಜಶೇಖರ್ಗೆ (Rajashekar) ಸೇರಿದ ತೋಟದ ಮನೆಯಲ್ಲಿ ಸಂತ್ರಸ್ತ ಮಹಿಳೆಯನ್ನ ರಕ್ಷಣೆ ಮಾಡಲಾಗಿದೆ. ಆದ್ರೆ, ಅಕ್ರಮವಾಗಿ ಫಾರ್ಮ್ಹೌಸ್ನಲ್ಲಿ ಇರಿಸಿದ್ದ ಆರೋಪವನ್ನ ಸಂತ್ರಸ್ತ ಮಹಿಳೆ ತಳ್ಳಿಹಾಕಿದ್ದಾರೆ ಎನ್ನಲಾಗ್ತಿದೆ.
ಕಿಡ್ನಾಪ್ ಮಾಡಿಲ್ಲ ಎಂಬ ಹೇಳಿಕೆ ನೀಡ್ತಿದ್ದು ಗೌಪ್ಯ ಸ್ಥಳದಲ್ಲಿ ಮಹಿಳೆಯ ವಿಚಾರಣೆ ನಡೆದಿದೆ.ಇನ್ನು, ಫಾರ್ಮ್ಹೌಸ್ನಲ್ಲಿ ರಕ್ಷಣೆ ಮಾಡಲಾಗಿದ್ದ ಮಹಿಳೆಯನ್ನ ಬೆಂಗಳೂರಿಗೆ (Bangalore) ಕರೆತರಲಾಗಿದೆ.ಮೈಸೂರಿನಿಂದ (Mysore) ನೇರವಾಗಿ ಬೆಂಗಳೂರಿನ ಸಿಐಡಿ (CID) ಕಚೇರಿಗೆ ಮಹಿಳೆಯನ್ನ ಎಸ್ಐಟಿ ಅಧಿಕಾರಿಗಳು ಕರೆತಂದು ವಿಚಾರಣೆ ಮುಂದುವರೆಸಿದ್ದಾರೆ.