• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

21 ಸಾವಿರ ಕೋಟಿ ಬಜೆಟ್ ಹಣವನ್ನು ಖರ್ಚು ಮಾಡದೇ ಉಳಿಸಿಕೊಂಡಿರುವ ರಾಜ್ಯ ಸರ್ಕಾರ! – ಇಲ್ಲಿದೆ ಸಂಪೂರ್ಣ ವರದಿ

ಪ್ರತಿಧ್ವನಿ by ಪ್ರತಿಧ್ವನಿ
October 29, 2021
in ಕರ್ನಾಟಕ
0
21 ಸಾವಿರ ಕೋಟಿ ಬಜೆಟ್ ಹಣವನ್ನು ಖರ್ಚು ಮಾಡದೇ ಉಳಿಸಿಕೊಂಡಿರುವ ರಾಜ್ಯ ಸರ್ಕಾರ! – ಇಲ್ಲಿದೆ ಸಂಪೂರ್ಣ ವರದಿ
Share on WhatsAppShare on FacebookShare on Telegram

ರಾಜ್ಯದಲ್ಲಿ ಕಳೆದ ಕರೋನಾ ಸಾಂಕ್ರಾಮಿಕ ಪೀಡಿತ ವರ್ಷಕ್ಕೆ ಹೋಲಿಸಿದರೆ ಈ ವರ್ಷವು ಕರ್ನಾಟಕದಲ್ಲಿ ಹಣಕಾಸು ಆಯೋಗದ ಯೋಜನೆಗಳ ಅಂಕಿ ಅಂಶಗಳು ಸುಧಾರಿಸಿವೆ ಎಂಬುದು ಸಂತಸದ ವಿಷಯವಾಗಿದೆ. ಆದರೆ, ಸೆಪ್ಟೆಂಬರ್ ಅಂತ್ಯದ ವೇಳೆಗೆ, 15 ನೇ ಹಣಕಾಸು ಆಯೋಗವು 552 ಕೋಟಿಗಳಷ್ಟು ಬಜೆಟ್ ಹಂಚಿಕೆಮಾಡಿತ್ತು ಆದರೆ, ರಾಜ್ಯದ ಜನರ ಪ್ರಾಥಮಿಕ ಆರೋಗ್ಯ ಸೌಲಭ್ಯವನ್ನು ಇನ್ನಷ್ಟು ಬಲಪಡಿಸಲು ಆರೋಗ್ಯ ಇಲಾಖೆಯು ಯಾವುದೇ ವೆಚ್ಚವನ್ನು ಭರಿಸಿಲ್ಲ ಎಂಬುವುದು ಅಂಕಿಅಂಶಗಳಿಂದ ತಿಳಿದುಬಂದಿದೆ.

ADVERTISEMENT

ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆಯಲ್ಲಿ ಬಜೆಟ್ ಹಂಚಿಕೆಯ ಕುರಿತಾಗಿ ಅಂಕಿಅಂಶಗಳ ಬಗ್ಗೆ ಪ್ರಸ್ತುತಪಡಿಸಲಾಯಿತು. ಈ ವೇಳೆ ರಾಜ್ಯ ಸರ್ಕಾರ 552 ಕೋಟಿಗಳಷ್ಟು ಬಜೆಟ್ ಹಂಚಿಕೆ ಮಾಡಿದ್ದು, ಇನ್ನೂ ಸೆಪ್ಟೆಂಬರ್ ಅಂತ್ಯದ ವೇಳೆಗೆ 21,331.65 ಕೋಟಿ ರೂ ಗಳಷ್ಟು ಬಜೆಟ್ ಅನ್ನು ಹಂಚಿಕೆ ಮಾಡದೇ, ಆರೋಗ್ಯ ಇಲಾಖೆ ಸೇರಿದಂತೆ ಕನಿಷ್ಠ ನಾಲ್ಕು ಪ್ರಮುಖ ಇಲಾಖೆಗಳು ಈ ಹಣಕಾಸು ವರ್ಷದಲ್ಲಿ ಏಳು ಪ್ರಮುಖ ಯೋಜನೆಗಳಿಗೆ ಕಡಿಮೆ ಖರ್ಚು ಮಾಡಿವೆ ಎಂದು ಸಭೆಯಲ್ಲಿ ಚರ್ಚೆಗಳು ನಡೆದಿವೆ.

ಹಂಚಿಕೆಯಾದ ಒಟ್ಟು ಬಜೆಟ್ ನಲ್ಲಿ ಕೃಷಿ ಇಲಾಖೆಯು ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಶೂನ್ಯ ವೆಚ್ಚ ದಾಖಲಿಸಿದೆ. ರೈತರಿಗೆ ಆರ್ಥಿಕ ಪ್ರೋತ್ಸಾಹಕ್ಕಾಗಿ 2,120 ಕೋಟಿ ರೂ. ಬಜೆಟ್ ಹೊಂದಿದೆ. ಇಂಧನ ಇಲಾಖೆಯು ನೀಡುವ ಪಿಂಚಣಿ 1000 ಕೋಟಿ ರೂ ಹಣ ಕೂಡ ಜನರಿಗೆ ತಲುಪಿಲ್ಲ, ಸರ್ಕಾರ ಈ ಹಣವನ್ನು ದುರುಪಯೋಗ ಮಾಡಿಕೊಂಡಿದೆ ಎಂಬುವುದು ಮೇಲ್ನೋಟಕ್ಕೆ ತಿಳಿಯುತ್ತದೆ.

ಎಷ್ಟೆಷ್ಟು ಹಂಚಿಕೆಯಾಗಿತ್ತು?

ಪಿಎಂವೈ ಯೋಜನೆಯಲ್ಲಿ ವಸತಿ ಇಲಾಖೆ, ಆಶ್ರಯ-ಬಸವ , ಬಿಆರ್ ಅಂಬೇಡ್ಕರ್ ನಿವಾಸ್ ಯೋಜನೆಗಳಿಗೆ ಒಟ್ಟು 1600 ಕೋಟಿ ರೂಗಳಷ್ಟು ಬಜೆಟ್ ಹಂಚಿಕೆಯಾಗಿದೆ. ಆದರೆ, ಇವುಗಳು ಶೇ. 5 ರಿಂದ 20ರಷ್ಟು ಮಾತ್ರವೇ ಖರ್ಚಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಸ್ಥಾಪಿತವಾದ ಪಿಎಂ ಗ್ರಾಮ ಸಡಕ್ ಯೋಜನೆಯು ತೀರಾ ಮಂದಗತಿಯಲ್ಲಿ ಸಾಗುತ್ತಿದ್ದು, ಇದಕ್ಕಾಗಿ ಸರ್ಕಾರವು ರೂ 1,771.36 ಕೋಟಿಗಳ ಬಜೆಟ್ ಹಂಚಿಕೆ ಮಾಡಿತ್ತು. ಆದರೆ, ಇಲ್ಲಿ ಕೇವಲ 21.48% ಮಾತ್ರವೇ ಖರ್ಚು ಮಾಡಲಾಗಿದೆ. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣಕ್ಕೆ 3,259.49 ಕೋಟಿ, ನಗರಾಭಿವೃದ್ಧಿಗೆ 2,658.52 ಕೋಟಿ ರೂ., ಗೃಹ ಇಲಾಖೆಗಳಿಗೆ 2,398.85 ಕೋಟಿ ರೂ ಬಜೆಟ್ ಬಿಡುಗಡೆಯಾಗಿತ್ತು. ಇವುಗಳಿಗೆ ಹಂಚಿಕೆಯಾದ ಬಜೆಟ್ ಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಿಲ್ಲ ಎಂಬುವುದು ಅಂಕಿಅಂಶಗಳಲ್ಲಿ ತಿಳಿದುಬಂದಿದೆ.

ಈಗಾಗಲೇ ಖರ್ಚು ವೆಚ್ಚಗಳು ಹೆಚ್ಚಾಗಿವೆ. ಸೆಪ್ಟೆಂಬರ್ ವರೆಗೆ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಪ್ರಕ್ರಿಯೆ ನಡೆಸುತ್ತಿದ್ದೆವು. ಮಾನ್ಸೂನ್ ಸಮಯ ಆಗಿದ್ದರಿಂದ, ಡಾಂಬರೀಕರಣದ ಕೆಲಸವನ್ನು ಸ್ಥಗಿತಗೊಳಿಸಬೇಕಾಗಿತ್ತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ತಿಳಿಸಿದ್ದಾರೆ.

ಕಳೆದ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ, ನೀಡಲಾದ 35.94% ಬಜೆಟ್ ನಲ್ಲಿ ಸರ್ಕಾರವು 77,883.78 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 62,065.15 ಕೋಟಿ ಇತ್ತು, ಇದೀಗ 28.23% ಕ್ಕಿಂತ ಖರ್ಚು ಹೆಚ್ಚಾಗಿದೆ. ಸರ್ಕಾರವು ಎಂಟು ಅಂಶಗಳ ಕಾರ್ಯಕ್ರಮಗಳನ್ನು ಆಯೋಜಿಸಿತ್ತು, ಪ್ರತಿಯೊಂದೂ ಯೋಜನೆಯು 500 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಬಜೆಟ್ ನೀಡಿತ್ತು. ಸಹಕಾರಿ ಬೆಳೆ ಸಾಲಗಳಿಗೆ ಬಡ್ಡಿ ಸಹಾಯಧನ, ವಿಪತ್ತು ಪರಿಹಾರ, ಅಕ್ಕಿ/ಗೋಧಿಗೆ ಸಬ್ಸಿಡಿ, ಆಯುಷ್ಮಾನ್ ಭಾರತ್, ಹೆದ್ದಾರಿ ಅಭಿವೃದ್ಧಿ, MGNREGA ಗಳಿಗೆ 95% ಕ್ಕಿಂತ ಹೆಚ್ಚಿನ ವೆಚ್ಚವನ್ನು ಹಂಚಿಕೆ ಮಾಡಿತ್ತು. ಸರ್ಕಾರವು ಹಂಚಿಕೆ ಮಾಡಿದ್ದ ಬಜೆಟ್ ಗಳು ಜನಸಾಮಾನ್ಯರಿಗೆ ಸಿಗದೇ ದುರುಪಯೋಗವಾಗುತ್ತಿವೆ. ಇದರಿಂದ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

Tags: Basavaraj BommaiBJPCovid 19ಕರೋನಾಕೋವಿಡ್-19ಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಪಟಾಕಿ ಸಿಡಿಸಿ ಬದುಕು ಕತ್ತಲಾಗಿಸುವ ಮುನ್ನ ಯೋಚಿಸಿ : ತಜ್ಞ ವೈದ್ಯರಿಂದ ಪೋಷಕರಿಗೆ ಮನವಿ!

Next Post

ಕರ್ನಾಟಕ ಪ್ರವಾಸಿ ತಾಣಗಳ ವಿವರಗಳನ್ನು ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ – ಕೇಂದ್ರ ಪ್ರವಾಸೋದ್ಯಮ ಸಚಿವಾಲಯ

Related Posts

ಸೈಬರ್ ದಂಧೆಗೆ ಸಿಐಡಿ ಬಿಗ್‌ ಶಾಕ್: 13 ಮಾಸ್ಟರ್ ಮೈಂಡ್‌ಗಳ ಬಂಧನ
Top Story

ಸೈಬರ್ ದಂಧೆಗೆ ಸಿಐಡಿ ಬಿಗ್‌ ಶಾಕ್: 13 ಮಾಸ್ಟರ್ ಮೈಂಡ್‌ಗಳ ಬಂಧನ

by ಪ್ರತಿಧ್ವನಿ
February 6, 2026
0

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ವಿರುದ್ಧ ಸಿಐಡಿ(CID )ಸೈಬರ್ ಕ್ರೈಂ( Cyber Crime) ವಿಭಾಗ ಭಾರೀ ಕಾರ್ಯಾಚರಣೆ ನಡೆಸಿದೆ. ಮ್ಯೂಲ್ ಅಕೌಂಟ್‌ಗಳ ಮೂಲಕ...

Read moreDetails
Daily Horoscope February 6: ಇಂದು ಸಕಲ ಸಂಪತ್ತನ್ನು ಆಕರ್ಷಿಸುವ ರಾಶಿಗಳಿವು..!

Daily Horoscope February 6: ಇಂದು ಸಕಲ ಸಂಪತ್ತನ್ನು ಆಕರ್ಷಿಸುವ ರಾಶಿಗಳಿವು..!

February 6, 2026
BIG BREAKING: ಮಾಲೂರು ಶಾಸಕರಾಗಿ ನಂಜೇಗೌಡ ಮುಂದುವರಿಕೆಗೆ ಸುಪ್ರೀಂ ಅಸ್ತು

BIG BREAKING: ಮಾಲೂರು ಶಾಸಕರಾಗಿ ನಂಜೇಗೌಡ ಮುಂದುವರಿಕೆಗೆ ಸುಪ್ರೀಂ ಅಸ್ತು

February 5, 2026
Oracle Layoffs: ಒರಾಕಲ್‌ನಲ್ಲಿ ಭಾರೀ ಲೇ-ಆಫ್ ಪ್ಲ್ಯಾನ್: 20–30 ಸಾವಿರ ಉದ್ಯೋಗಿಗಳಿಗೆ ಬಿಗ್‌ ಶಾಕ್‌

Oracle Layoffs: ಒರಾಕಲ್‌ನಲ್ಲಿ ಭಾರೀ ಲೇ-ಆಫ್ ಪ್ಲ್ಯಾನ್: 20–30 ಸಾವಿರ ಉದ್ಯೋಗಿಗಳಿಗೆ ಬಿಗ್‌ ಶಾಕ್‌

February 5, 2026
ಜೈಲು ಅಕ್ರಮ ಕಡಿವಾಣಕ್ಕೆ ಮಾಸ್ಟರ್ ಪ್ಲಾನ್

ಜೈಲು ಅಕ್ರಮ ಕಡಿವಾಣಕ್ಕೆ ಮಾಸ್ಟರ್ ಪ್ಲಾನ್

February 5, 2026
Next Post
ಕರ್ನಾಟಕ ಪ್ರವಾಸಿ ತಾಣಗಳ ವಿವರಗಳನ್ನು ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ – ಕೇಂದ್ರ ಪ್ರವಾಸೋದ್ಯಮ ಸಚಿವಾಲಯ

ಕರ್ನಾಟಕ ಪ್ರವಾಸಿ ತಾಣಗಳ ವಿವರಗಳನ್ನು ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ - ಕೇಂದ್ರ ಪ್ರವಾಸೋದ್ಯಮ ಸಚಿವಾಲಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada