ಚಿತ್ರ ; ಕೌಸಲ್ಯ ಸುಪ್ರಜಾ ರಾಮ
ತಾರಾಗಣ ; ರಂಗಾಯಣ ರಘು, ಸುಧಾ ಬೆಳವಾಡಿ, ನಾಗಭೂಷಣ್, ಬೃಂದಾ ಆಚಾರ್ಯ, ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್
ಕನ್ನಡ ಚಿತ್ರರಂಗಕ್ಕೆ ( Kannada Film Industry ) ಕೆಲವು ದಿನಗಳಿಂದ ಉತ್ತಮ ಕೌಟುಂಬಿಕ ಚಿತ್ರದ ಬರ ಕಾಡಿತ್ತು, ಸದ್ಯಕ್ಕೆ ಈಗ ಆ ಬರವನ್ನ ಹೋಗಲಾಡಿಸೋದಕ್ಕೆ ಅಂತ ಬಂದಿರುವ ಚಿತ್ರ ಕೌಸಲ್ಯ ಸುಪ್ರಜಾ ರಾಮ( kousalya supraja rama ) ಎಂಬ ಅಭಿಪ್ರಾಯ ಪ್ರೇಕ್ಷಕರ ( Audience) ವಲಯದಲ್ಲಿ ಮೂಡುತ್ತಿದೆ. ಹೀಗೆ ಪ್ರೇಕ್ಷಕರಲ್ಲಿ ಸಕರಾತ್ಮಕ ( Positive ) ಪ್ರತಿಕ್ರಿಯೆ ಮೂಡಿದ್ರೆ ಸಾಕು, ಅದ್ಯಾವುದೇ ಚಿತ್ರವಾದ್ರೂ ಗೆದ್ದ ಹಾಗೆನೆ..
ಇಲ್ಲಿ ಪ್ರಮುಖವಾದ ಅಂಶ ಅಂದ್ರೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ಜೋಡಿ ಕೌಟುಂಬಿಕ ಪ್ರೇಕ್ಷಕರಿಗೆ ಬಹಳ ಇಷ್ಟವಾಗುತ್ತೆ. ಇನ್ನು ನಿರ್ದೇಶಕ ಶಶಾಂಕ್ ಕೂಡ ಈ ಹಿಂದೆ ತಮ್ಮ ಹಲವು ಚಿತ್ರಗಳಲ್ಲಿ ಕೌಟುಂಬಿಕ ವಿಚಾರಗಳನ್ನ ತೆರೆದಿಟ್ಟಿದ್ದಾರೆ, ಇನ್ನು ಸ್ಯಾಂಡಲ್ವುಡ್ನಲ್ಲಿ ನಿರ್ದೇಶಕ ಶಶಾಂಕ್ ಹಳೆ ಕತೆ, ಫ್ಯಾಮಿಲಿ ಡ್ರಾಮವನ್ನ ಹೇಳುವ ನಿರ್ದೇಶಕರಲ್ಲ, ಅವರ ಚಿತ್ರದಲ್ಲಿ ಯಾರೋದ್ದೋ ಒಬ್ಬರ ಬದುಕು ಕಾಣಿಸುತ್ತೆ. ಈ ಚಿತ್ರದಲ್ಲೂ ಕೂಡ ನಿರ್ದೇಶಕರು ಅಂತಹದ್ದೇ ಕೆಲಸಕ್ಕೆ ಕೈ ಹಾಕಿದ್ದು, ಚಿತ್ರದಲ್ಲಿ ಒಂದೊಳ್ಳೆ ಉತ್ತಮ ಸಂದೇಶವನ್ನ ಇಟ್ಟಿದ್ದಾರೆ.
ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆದ ತಾರಾಗಣ
ಕೌಸಲ್ಯ ಸುಪ್ರಜಾ ರಾಮ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಅಂದ್ರೆ ಈ ಚಿತ್ರದ ತಾರಾಗಣ, ಅದ್ರಲ್ಲೂ ಚಿತ್ರಕತೆಯ ಪ್ರಮುಖ ಪಾತ್ರಗಳಾದ ರಂಗಾಯಣ ರಘ, ಸುಧಾ ಬೆಳವಾಡಿ, ನಾಗಭೂಷಣ್, ಬೃಂದಾ ಆಚಾರ್ಯ, ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಎಲ್ಲರೂ ಕೂಡ ಪೈಪೋಟಿಗೆ ಬಿದ್ದು ನಟನೆ ಮಾಡಿರುವ ಹಾಗೆ ಭಾಸವಾಗುತ್ತದೆ, ಅಷ್ಟರ ಮಟ್ಟಿಗೆ ಈ ಸಿನಿಮಾ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಒಳ ಹೊಕ್ಕು ನೋಡುವ ಪ್ರೇಕ್ಷಕರಿಗೆ ಮನೋರಂಜನೆ ಮಾತ್ರ ತಪ್ಪೋದಿಲ್ಲ.
ಕಥೆಗೆ ತಕ್ಕ ಹಿನ್ನಲೆ ಸಂಗೀತ,
ನಿರ್ದೇಶಕ ಶಶಾಂಕ್ ತಮ್ಮ ಸಿನಿಮಾದಲ್ಲಿ ಕತೆಗೆ ಹೊಂದಿಕೆಯಾಗುವಂತಹ ಸಂಗೀತಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಇದಕ್ಕೆ ಪೂರಕವಾಗಿತೇ ಈ ಚಿತ್ರದಲ್ಲಿ ಕೂಡ ಹಿನ್ನೆಲೆ ಸಂಗೀತಕ್ಕೆ ಹೆಚ್ಚಿನ ಮುದ ನೀಡುವಂತ ಸಂಗೀತವನ್ನ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನೀಡಿದ್ದು, ಈ ಚಿತ್ರದಲ್ಲಿನ ಪ್ರತಿಯೊಂದು ಸಂಗೀತ ಹಾಗೂ ಹಿನ್ನೆಲೆ ಸಂಗೀತ ಪ್ರಕ್ಷಕನನ್ನ ಹಿಡಿದಿಡುವಲ್ಲಿ ಕೂಡ ಯಶಸ್ವಿಯಾಗಿದೆ.
ಈ ಸುದ್ದಿಯನ್ನು ಓದಿ; ಗ್ಯಾಂಗ್ಸ್ಟರ್ ರವಿ ಪೂಜಾರಿ ಜಾಮೀನು ಅರ್ಜಿ ತಿರಸ್ಕೃತ
ಇನ್ನು ಚಿತ್ರದಲ್ಲಿ ಸುಜ್ಞಾನ್ ಅವರ ಛಾಯಾಗ್ರಹಣವಿದ್ದು ಚಿತ್ರ ಅದ್ಭುತವಾಗಿ ಮೂಡಿ ಬರೋದಕ್ಕೆ ಕೂಡ ಕಾರಣವಾಗಿದೆ. ಒಟ್ಟಾರೆಯಾಗಿ ಸಿನಿಮಾದಲ್ಲಿ ಒಳ್ಳೆ ಸಂದೇಶವಿದ್ದು, ಪುರುಷಪ್ರಧಾನ ಸಮಾಜದ ಸಮಸ್ಯೆಗಳನ್ನ ಕೂಡ ಈ ಚಿತ್ರ ಹೇಳಿರುವುದು ಸಾಕಷ್ಟು ಜನರ ಮೆಚ್ಚುಗೆಗೆ ಕೂಡ ಕಾರಣವಾಗಿದೆ.
ಸದ್ಯದ ಮಟ್ಟಿಗೆ ಸ್ಯಾಂಡಲ್ವುಡ್ಗೆ ಬಹಳ ದಿನಗಳ ನಂತರ ಒಂದು ಒಳ್ಳೆಯ ಕೌಟುಂಬಿಕ ಸಿನಿಮಾ ಬಂದಿದೆ ಅಂತ ಹೇಳಿದ್ರೆ ತಪ್ಪಾಗೋದಿಲ್ಲ ಹೀಗಾಗಿನೇ ಮೊದಲ ದಿನವಾದ ಇಂದು ಕೌಸಲ್ಯ ಸುಪ್ರಜಾ ರಾಮ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ ಇನ್ನು ಶನಿವಾರ ಮತ್ತು ಭಾನುವಾರ ಕೂಡ ಇದೇ ರೀತಿಯಾದಂತಹ ರೆಸ್ಪಾನ್ಸ್ ಪ್ರೇಕ್ಷಕರಿಂದ ಸಿಗುವ ಸಾಧ್ಯತೆ ಹೆಚ್ಚಿದೆ.
ಸದ್ಯಕ್ಕೆ ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿದ್ದು, ಉತ್ತಮ ಸಂದೇಶ ನೀಡುವ ಚಿತ್ರತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ ಜೊತೆಗೆ ಸ್ಯಾಂಡಲ್ವುಡದ ತಾರೆಯರು ಕೂಡ ಈ ಚಿತ್ರ ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ