ಚಿತ್ರದುರ್ಗ : ಮೇ.12: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಗೆ ಐಟಿ ನೋಟೀಸ್ ನೀಡಿದ್ದು, ಇದೆಲ್ಲಾ ಪ್ರೀ ಪ್ಲ್ಯಾನ್ ಅಂತಾ ಕಿಡಿಕಾರಿದ್ದಾರೆ. 2023ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಚಿತ್ರದುರ್ಗ ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಕ್ಯಾದಿಗೆರೆ ಮನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ ಲಕ್ಷಾಂತರ ರೂಪಾಯಿ ಹಣ, ಹಾಗೂ ಮದ್ಯ ವಶಕ್ಕೆ ಪಡೆದಿದ್ರು.

ಈ ಘಟನೆ ಮಾಸುವ ಮುನ್ನವೇ ಐಟಿ ರಘು ಆಚಾರ್ ಗೆ ಶಾಕ್ ನೀಡಿದೆ. ದಿನಾಂಕ 10 ರಂದು ವಿಚಾರಣೆಗೆ ಬರುವಂತೆ ನೋಟೀಸ್ ಜಾರಿ ಮಾಡಿದೆ. ಆದ್ರೆ ನೋಟೀಸ್ ಪಡೆಯಲು ರಘು ಆಚಾರ್ ನಿರಾಕರಿಸಿದ್ದು, ಇದು ದುರುದ್ದೇಶದಿಂದ ಪ್ರೀ ಪ್ಲ್ಯಾನ್ ಮಾಡಿ ಐಟಿ ನೋಟೀಸ್ ನೀಡಿದೆ ಎಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಅಹಿಂದಾ ವಿಚಾರ ಧಾರೆಯವನಾಗಿದ್ದು, ಸಣ್ಣ ಜಾತಿಯವನೆಂದು ನನ್ನಮೇಲೆ ಹೀಗೆ ಮಾಡ್ತಿದ್ದಾರೆ ಅಂತಾ ತಮ್ಮ ವಿರೋಧಿಗಳ ಕುರಿತು ಕಿಡಿ ಕಾರಿದ್ದಾರೆ. 13ನೇ ತಾರೀಕು ಚುನಾವಣಾ ಫಲಿತಾಂಶದ ಬಳಿಕ ಯಾವ ಅಧಿಕಾರಿ ಹಣ ತೋರಿಸಿದ್ರು, ಅಂತಾ ಹೇಳ್ತೇನೆ. ಈ ದಾಳಿಯ ಹಿಂದೆ ಒಬ್ಬ ಐಪಿಎಸ್ ಅಧಿಕಾರಿಯ ಕೈವಾಡವಿದೆ. 13ನೇ ತಾರೀಕು ಎಲ್ಲಾ ವಿಚಾರ ಬಹಿರಂಗಪಡಿಸುತ್ತೇನೆ ಎಂದರು