ಶಾಸಕ ಸಿ ಟಿ ರವಿ ಅವರು ಚಿಕ್ಕಮಗಳೂರಿನ ಜಿಲ್ಲೆಯಲ್ಲಿ ಹಿಂದುತ್ವದ ಹೆಸರಿನಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದು, ಕೂಡಲೇ ಇವರನ್ನು ಗಡಿಪಾರು ಮಾಡಬೇಕು ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್ ನ ಅಧ್ಯಕ್ಷ ಸಚಿನ್ ಮೀಗಾ ಆಗ್ರಹಿಸಿದ್ದಾರೆ.
ಮುಂದುವರೆದು, ರಾಜ್ಯದ ಹಿಂದೂಗಳ ವಿರುದ್ಧ ಸದಾ ದ್ರೋಹ ಎಸಗುವ ರವಿ, ಮಂತ್ರಿಯಾಗಿ ಈಗ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿಚಾರದಲ್ಲಿ ರಾಜ್ಯದ ಹಿಂದೂಗಳನ್ನು ತಮ್ಮ ಹೇಳಿಕೆಗಳಿಂದ ಕೆರಳಿಸುತ್ತಿದ್ದಾರೆ ಎಂದರು.

ಪ್ರತಿ ಬಾರಿ ಹಿಂದುತ್ವದ ಹೆಸರಿನಲ್ಲಿ ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳುತ್ತಿರುವ ಸಿ ಟಿ ರವಿ ಅಮಾಯಕ ಹಿಂದುಗಳನ್ನು ಜೀವನ ಪರ್ಯಂತ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದಾರೆ. ಇಂತಹ ವ್ಯಕ್ತಿ ನಿರಂತರವಾಗಿ ಸಮಾಜದ ಶಾಂತಿ ಕದಡುತ್ತಿದ್ದಾರೆ. ಹೀಗಾಗಿ ಅವರನ್ನು ತಕ್ಷಣವೇ ಗಡಿಪಾರು ಮಾಡುವಂತೆ ಒತ್ತಾಯಿಸಿದ್ದಾರೆ.