• Home
  • About Us
  • ಕರ್ನಾಟಕ
Sunday, October 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಕರ್ನಾಟಕ ಕೋವಿಡ್‌ 3ನೇ ಅಲೆಗೆ ಸಮೀಪದಲ್ಲಿದೆ – ಸಾಂಕ್ರಾಮಿಕ ರೋಗ ತಜ್ಞರಿಂದ ಎಚ್ಚರಿಕೆ

Any Mind by Any Mind
August 2, 2021
in ಕರ್ನಾಟಕ, ಶೋಧ
0
ಕರ್ನಾಟಕ ಕೋವಿಡ್‌ 3ನೇ ಅಲೆಗೆ ಸಮೀಪದಲ್ಲಿದೆ – ಸಾಂಕ್ರಾಮಿಕ ರೋಗ ತಜ್ಞರಿಂದ ಎಚ್ಚರಿಕೆ
Share on WhatsAppShare on FacebookShare on Telegram

ರಾಜ್ಯದಲ್ಲಿ ಪ್ರಸ್ತುತ ರಿಪ್ರೊಡೆಕ್ಟಿವ್ ನಂಬರ್ ಶೇ.0.85ರಷ್ಟಿದ್ದು, ಯಾವುದೇ ಸಮಯದಲ್ಲಿ ಈ ದರ ಶೇ.1ಕ್ಕೆ ತಲುಪುವ ಸಾಧ್ಯತೆಗಳಿವೆ. ಈ ರೀತಿಯಾಗಿದ್ದೇ ಆದರೆ ರಾಜ್ಯದ ಪರಿಸ್ಥಿತಿ ಕಠಿಣವಾಗಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್’ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಗಿರಿಧರ ಬಾಬು ಅವರು ಹೇಳಿದ್ದಾರೆ.

ADVERTISEMENT

ರಾಜ್ಯದಲ್ಲಿ ಕರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಮೂರನೇ ಅಲೆಯ ಮುನ್ಸೂಚನೆಯೇ?

ನೀವು ಸೋಂಕಿನ ಪ್ರವೃತ್ತಿಯನ್ನು ಪರೀಕ್ಷಿಸಿದಾಗ, ಅದನ್ನು ನಿರ್ಣಯಿಸಲು ಹಲವಾರು ಮಾರ್ಗಗಳಿವೆ. ರಿಪ್ರೊಡೆಕ್ಟಿವ್ ಮೌಲ್ಯವನ್ನು ಪರಿಶೀಲಿಸುವುದಾದರೆ ಇದು ಜೂನ್ 20ರವರೆಗೆ ಕಡಿಮೆ ಪ್ರಮಾಣದಲ್ಲಿತ್ತು. ಬಳಿಕ ಹೆಚ್ಚಾಗತೊಡಗಿತ್ತು. ಪ್ರಸ್ತುತ ಈ ಮೌಲ್ಯ ಶೇ.0.85ರಷ್ಟಿದೆ. ಇದು ಯಾವುದೇ ಸಮಯದಲ್ಲಿ ಬೇಕಾದರೂ ಶೇ.1ಕ್ಕೆ ತಲುಪಬಹುದು. 3ನೇ ಅಲೆ ಕೂಡ ಎರಡನೇ ಅಲೆ ರೀತಿಯಲ್ಲಿಯೇ ಇರಲಿದೆ. ನಾವು ತೆಗೆದುಕೊಳ್ಳುವ ಕಠಿಣ ಕ್ರಮಗಳ ಮೇಲೆ ಸಾವು-ನೋವುಗಳು ಅವಲಂಬಿತವಾಗಿರುತ್ತವೆ ಎಂದು ಹೇಳಿದ್ದಾರೆ.

ಅಕ್ಕ ಪಕ್ಕದ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಿದ್ದರಿಂದ ರಾಜ್ಯದಲ್ಲಿಯೂ ಈ ಪರಿಸ್ಥಿತಿ ಎದುರಾಗಿದೆಯೇ ಅಥವಾ ರಾಜ್ಯದಲ್ಲಿಯೇ ಸೋಂಕು ಹೆಚ್ಚಾಗಿದೆಯೇ?

ಹಲವಾರು ಅಂಶಗಳು ಇದಕ್ಕೆ ಕಾರಣವಾಗುತ್ತದೆ. ಸೆರೋಪ್ರೆವೆಲೆನ್ಸ್, ಲಸಿಕಾ ವ್ಯಾಪ್ತಿ ಮತ್ತು ಕೋವಿಡ್-ಸೂಕ್ತ ನಡವಳಿಕೆ ಇದಕ್ಕೆ ಪ್ರಮುಖವಾಗುತ್ತವೆ. ರಾಜ್ಯದಲ್ಲಿ ಸೋಂಕು ಹೆಚ್ಚಲು ನೆರೆ ರಾಜ್ಯ ಕೇರಳ ಮಾತ್ರವೇ ಕಾರಣವಲ್ಲ. ಸೋಂಕು ಎಲ್ಲಿಂದಾದರೂ ಪ್ರಪಂಚದ ಯಾವುದೇ ಭಾಗದಿಂದ ಬೇಕಾದರೂ ಬರಬಹುದು. ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಕಡಿಮೆ ಸೆರೋಪ್ರೆವೆಲೆನ್ಸ್ ಇದೆ, ಇದು ಸೋಂಕು ಹಠಾತ್ ಉಲ್ಬಣಗೊಳ್ಳಲು ಕಾರಣವಾಗಬಹುದು. ಬೆಂಗಳೂರಿನಲ್ಲೂ ಕೂಡ ಸೆರೋಪ್ರೆವೆಲೆನ್ಸ್ ಕಡಿಮೆ ಇದೆ. ರಾಜ್ಯದ ಉತ್ತರ, ಕರಾವಳಿ ಭಾಗಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ನಾವು ಒಂದೇರೀತಿಯ ನಿಯಮಗಳನ್ನು ಜಾರಿಗೆ ತರುವುದು ಅಗತ್ಯವಿದೆ. ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವುದು, ಜನರು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಮಾಡುವುದರಿಂದ ಕರೋನ ಮೂರನೇ ಅಲೆಯನ್ನು ತಡೆಯಬಹುದು ಎಂದು ಹೇಳಿದ್ದಾರೆ.

ಲಸಿಕೆ ಕುರಿತು ಪ್ರಸ್ತುತ ರಾಜ್ಯದ ಸ್ಥಿತಿಗತಿ ಹೇಗಿದೆ?

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಸಿಕೆಗಳ ಸಮರ್ಪಕವಾದ ಪೂರೈಕೆ ಇಲ್ಲ. ಹೀಗಾಗಿ ಲಸಿಕೆಗಾಗಿ ಕಾಯುತ್ತಿರುವ ಈ ಸಮಯದಲ್ಲೇ ನಾವು ಸೂಕ್ಷ್ಮ ಯೋಜನೆಗಳನ್ನು ರೂಪಿಸಬೇಕಿದೆ. ಫಲಾನುಭವಿಗಳ ಒಂದೆಡೆ ಸೇರಿದ ಕೋವಿನ್ ಆ್ಯಪ್ ನಲ್ಲಿ ಹೆಸರುಗಳನ್ನು ನೊಂದಾಯಿಸುವ ಕೆಲಸ ಮಾಡಬೇಕು. ಲಸಿಕೆ ಲಭ್ಯವಾದ ಕೂಡಲೇ ಫಲಾನುಭವಿಗಳು ಲಸಿಕೆ ಪಡೆಯುವಂತೆ ಮಾಡಬೇಕು. ಚುನಾವಣಾ ಸಂದರ್ಭದಲ್ಲಿ ಈ ರೀತಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಲಸಿಕೆ ಹಿಂಜರಿಕೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ ಈ ಕುರಿತು ನಿಮ್ಮ ಅಭಿಪ್ರಾಯವೇನು?

ಇದನ್ನು ಅರಿವಿನ ಕೊರತೆ, ಸೂಕ್ಷ್ಮ ಯೋಜನೆಯ ಕೊರತೆ, ಸಜ್ಜುಗೊಳಿಸುವಿಕೆಯ ಕೊರತೆ ಮುಂತಾದ ಹಲವಾರು ವೈಫಲ್ಯಗಳಿಗೂ ಬಳಸಲಾಗುತ್ತದೆ. ಭಯದಿಂದ ಅಥವಾ ಇನ್ನಾವುದೊ ಕಾರಣದಿಂದ ಲಸಿಕೆ ಹಾಕಲು ಇಚ್ಛಿಸದ ಜನರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಭಾರತದಲ್ಲಿ ಲಸಿಕೆಗಳ ಕುರಿತು ಸುಳ್ಳು ಸುದ್ದಿಗಳ ಕಾರಣದಿಂದ ಕೆಲವೇ ಜನರು ಭಯಭೀತರಾಗಿದ್ದಾರೆ. ಇದರಿಂದ ಹೊರಬರಲು ಯುನಿಸೆಫ್, ಸರ್ಕಾರ ಮತ್ತು ಡಬ್ಲ್ಯುಎಚ್‌ಒ ಅಭಿಯಾನಗಳನ್ನು ನಡೆಸುತ್ತಿದೆ ಹೇಳಿದ್ದಾರೆ.

ಐಸಿಎಂಆರ್‌ಗೆ ಸಲ್ಲಿಸಿದ ಸೆರೋಪ್ರೆವೆಲೆನ್ಸ್ ಸಮೀಕ್ಷೆಯ ವರದಿಯು ರಾಜ್ಯದಲ್ಲಿ ಸುಮಾರು 68 ಪ್ರತಿಶತ ಸಿರೊಪೊಸಿಟಿವಿಟಿ ತೋರಿಸುತ್ತದೆ ಈ ಕುರಿತು ನಿಮ್ಮ ಅಭಿಪ್ರಾಯ?

ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಡೆದ ಸೆರೋ ಸಮೀಕ್ಷೆಯಲ್ಲಿ ನಾನು ಭಾಗಿಯಾಗಿದ್ದೇನೆ. ಇಡೀ ರಾಜ್ಯಕ್ಕೆ ಎರಡು ಜಿಲ್ಲೆಗಳ ಫಲಿತಾಂಶಗಳ ಆಧಾರದ ಮೇಲೆ ಸರಾಸರಿ 68 ಪ್ರತಿಶತವನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ. ಮುಂಬರುವ ದಿನಗಳಲ್ಲಿ, 30-40 ಪ್ರತಿಶತಕ್ಕಿಂತ ಕಡಿಮೆ ಸೆರೋಪ್ರೆವೆಲೆನ್ಸ್ ಇರುವ ಪ್ರದೇಶಗಳು ನೋಡುವ ವಿಶ್ವಾಸನನಗಿದೆ ಎಂದು ಹೇಳಿದ್ದಾರೆ.

ಕರೋನ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಳ್ಳಬೇಕಿದಾದ ತಕ್ಷಣದ ಕ್ರಮಗಳೇನು?

ಒಂದು ಘಟನೆ ಬಳಿಕ ಮುಂದಿನದ್ದಕ್ಕೆ ಸಿದ್ಧರಾಗಲು ಕೋವಿಡ್ ವಿರುದ್ಧದ ಹೋರಾಟ ಚುನಾವಣೆಯಂತಲ್ಲ. ಇದು ಒಂದು ಪ್ರಕ್ರಿಯೆಯಾಗಿದ್ದು. ಸದಾಕಾಲ ಎಚ್ಚರಿಕೆ ಹಾಗೂ ಸಿದ್ಧರಾಗಿರಬೇಕು. ಕರ್ನಾಟಕವು ಉತ್ತಮ ಪರೀಕ್ಷಾ ದಾಖಲೆಯನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ, ಆದರೆ, ಈ ಸಂಖ್ಯೆ ಸಾಕಾಗುವುದಿಲ್ಲ. ಬೆಂಗಳೂರು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಪರೀಕ್ಷೆ ನಡೆಯುತ್ತದೆ. ಆದರೆ ಕಡಿಮೆ ಸೆರೋಪ್ರೆವೆಲೆನ್ಸ್ ಹೊಂದಿರುವ ಗ್ರಾಮೀಣ ಪ್ರದೇಶಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ.

ರಾಜಕೀಯ ನಾಯಕರು, ನಟ-ನಟಿಯರು, ಕಲಾವಿದರು, ಧಾರ್ಮಿಕ ನಾಯಕರು ಕೋವಿಡ್ ನಿಯಮಾವಳಿಯನ್ನು ಪಾಲಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ದೊಡ್ಡ ಮಟ್ಟದ ಜನಸಂಖ್ಯೆ ಸೇರದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಹೇಳಿದ್ದಾರೆ.

Source : The New Indian Express

Tags: Covid 19Karnataka Governmentಕರೋನಾಕೋವಿಡ್-19
Previous Post

ಅಪರಾಧಿ ಹಿನ್ನೆಲೆಯುಳ್ಳ ವ್ಯಕ್ತಿಗಳ ಸಂಪರ್ಕದಲ್ಲಿ ಪೊಲೀಸರು ಇರಬಾರದು: ಪೊಲೀಸ್ ಮಹಾನಿರೀಕ್ಷಕರ ಆದೇಶ: KRS ಪಕ್ಷ ಸ್ವಾಗತ

Next Post

ಜನತಾ ಪರಿವಾರದ ಹಿನ್ನೆಲೆಯ ಬೊಮ್ಮಾಯಿ ಸಹವಾಸ ದೋಷದಿಂದ ಬದಲಾಗಿದ್ದಾರೆ -ಸಿದ್ದರಾಮಯ್ಯ

Related Posts

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
0

ಸರ್ಕಾರಿ ಶಾಲಾ ಕಾಲೇಜು ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ...

Read moreDetails

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

October 12, 2025
Next Post
ಜನತಾ ಪರಿವಾರದ ಹಿನ್ನೆಲೆಯ ಬೊಮ್ಮಾಯಿ ಸಹವಾಸ ದೋಷದಿಂದ ಬದಲಾಗಿದ್ದಾರೆ -ಸಿದ್ದರಾಮಯ್ಯ

ಜನತಾ ಪರಿವಾರದ ಹಿನ್ನೆಲೆಯ ಬೊಮ್ಮಾಯಿ ಸಹವಾಸ ದೋಷದಿಂದ ಬದಲಾಗಿದ್ದಾರೆ -ಸಿದ್ದರಾಮಯ್ಯ

Please login to join discussion

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada