ರಾಜ್ಯದಲ್ಲಿ ಇನ್ಮುಂದೆ ಪೆರೋಲ್ ಖೈದಿ ನಾಪತ್ತೆಯಾದರೆ ಜಾಮೀನು ಕೊಟ್ಟವರ ಆಸ್ತಿ ಜಪ್ತಿಯಾಗಲಿದೆ ಎಂಬ ಕಾನೂನನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ವಿಧಾನಪರಿಷತ್ ನಲ್ಲಿ ಅಂಗೀಕರಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಸಚಿವ ಜ್ಞಾನೇಂದ್ರ, ಈ ವಿಧೇಯಕವನ್ನು ಪೆರೋಲ್ ಪಡೆದ ವ್ಯಕ್ತಿಗೆ ಜಾಮೀನು ನೀಡುವ ವ್ಯಕ್ತಿ ಜವಾಬ್ದಾರಿ ಹೊಂದಿರಬೇಕು ಎಂಬ ಕಾರಣದಿಂದಾಗಿ ತರಲಾಗಿದೆ. ಈ ತಿದ್ದು ಪಡಿಯಿಂದಾಗಿ ನ್ಯಾಯಯುತವಾಗಿ ಜಾಮೀನು ನೀಡಿದ ವ್ಯಕ್ತಿಗೆ ಯಾವುದೇ ತೊಂದರೆಯಾಗುವುದಿಲ್ಲ.
ಜಾಮೀನು ನೀಡುವುದನ್ನೇ ದಂಧೆ ಮಾಡಿಕೊಂಡವರಿಗೆ, ಆ ಕೆಲಸ ಮಾಡಬಾರದು ಎಂಬ ಕಾರಣದಿಂದ ಈ ತಿದ್ದುಪಡಿ ಮಾಡಲಾಗಿದೆ. ಈವರಗೆ 15 ಖೈದಿಗಳು ಪೆರೋಲ್ ಮೇಲೆ ತೆರಳಿ ನಾಪತ್ತೆಯಾಗಿದ್ದಾರೆ ಎಂದರು. ಇನ್ನೂ ಕರ್ನಾಟಕ ಬಂಧೀಖಾನೆಗಳ ತಿದ್ದುಪಡಿ ವಿಧೇಯಕದ ಅನುಸಾರವಾಗಿ, ಇನ್ಮುಂದೆ ಪೆರೋಲ್ ಖೈದಿ ನಾಪತ್ತೆಯಾದ್ರೇ, ಜಾಮೀನು ಕೊಟ್ಟವರ ಆಸ್ತಿ ಜಪ್ತಿಯಾಗಲಿದೆ.