ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಗೆ ಹಸ್ತಾಂತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಘಟನೆಯು ಅಂತರ್ ರಾಜ್ಯ ಲಿಂಕ್ನೊಂದಿಗೆ ನಡೆದಿರುವ ಹತ್ಯೆಯಾಗಿರುವುದರಿಂದ ತನಿಖೆಯನ್ನು NIAಗೆ ವಹಿಸಲಾಗಿದೆ ಎಂದು ಸಿಎಂ ಅಧ್ಯಕ್ಷತೆಯಲ್ಲಿ ಪ್ರವೀಣ್ ಸೂದ್ ಹಾಗೂ ಇತರ ಹಿರಿಯ ಅಧಿಕಾರಿಗಳ ಜೊತೆಯ ಸಭೆಯ ನಂತರ ನಡೆದ ಸಭೆಯ ನಂತರ ಹೇಳಿದ್ದಾರೆ.
ಇದು ಅಂತರಾಜ್ಯ ಸಂಪರ್ಕ ಹೊಂದಿರುವ ಸಂಘಟಿತ ಹತ್ಯೆ ಎಂದು ಶಂಕಿಸಲಾಗಿದೆ. ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಿ ವಿಚಾರಣೆಯನ್ನು ತೀವ್ರಗೊಳಿಸುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ NIAಗೆ ಈ ಕುರಿತು ಗೃಹ ಇಲಾಖೆ ಪತ್ರ ಬರೆಯಲಿದೆ ಎಂದಿದ್ದಾರೆ.
ಇದರೊಂದಿಗೆ ಕೇರಳ ಹಾಗೂ ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗುವುದು. ಸಿಸಿ ಕ್ಯಾಮರಾಗಳು ಹಾಗೂ ಪ್ರಮುಖ ಭಾಗಗಳಲ್ಲಿ ಚೆಕ್ ಪೋಸ್ಟ್ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಶಿಬಿರಗಳನ್ನು ಸ್ಥಾಪಿಸುವಂತೆ ಹೇಳಿದ್ದೇನೆ.
![](https://pratidhvani.com/wp-content/uploads/2022/07/295767547_590357229126631_626794164734249603_n-1.jpg)
ದಕ್ಷಿಣ ಕನ್ನಡದಲ್ಲಿ ಮತ್ತೊಂದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯನ್ನು (KSRP) ಅನ್ನು ನಿಯೋಜಿಸಲು ಹಾಗೂ ಜಾಗರೂಕತೆಯನ್ನು ವಹಿಸಲಾಗುವುದು ಎಂದಿದ್ದಾರೆ.
ಸೂರತ್ಕಲ್ನಲ್ಲಿ ಗುರುವಾರ ಹತ್ಯೆಯಾದ ಮೊಹಮ್ಮದ್ ಫಾಜಿಲ್ (23) ಕೊಲೆ ತನಿಖೆಯನ್ನು ಸಹ ತೀವ್ರಗೊಳಿಸಲಾಗಿದೆ ತಪ್ಪಿತಸ್ಥರು ಯಾರೇ ಆಗಿದ್ದರು ಸಹ ಅವರನ್ನು ಬಂಧಿಸಲಾಗುವುದು ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದಿದ್ದಾರೆ.
ವಿವಾದವೆಲ್ಲವು ತಣ್ಣಗಾದ ನಂತರ ಎಲ್ಲಾ ಧರ್ಮದ ಮುಖಂಡರೊಂದಿಗೆ ಜಿಲ್ಲಾವಾರು ಶಾಂತಿ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.