• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಜನಗಣಮನ ಬಗ್ಗೆ ಕಾಗೇರಿ ವಿವಾದತ್ಮಾಕ ಹೇಳಿಕೆ: ಪ್ರಿಯಾಂಕ್ ಖರ್ಗೆ ತಿರುಗೇಟು

ಪ್ರತಿಧ್ವನಿ by ಪ್ರತಿಧ್ವನಿ
November 6, 2025
in ಇದೀಗ, ಕರ್ನಾಟಕ, ದೇಶ, ಶೋಧ
0
ಜನಗಣಮನ ಬಗ್ಗೆ ಕಾಗೇರಿ ವಿವಾದತ್ಮಾಕ ಹೇಳಿಕೆ: ಪ್ರಿಯಾಂಕ್ ಖರ್ಗೆ ತಿರುಗೇಟು
Share on WhatsAppShare on FacebookShare on Telegram
Zohran Mamdani: ಜೊಹ್ರಾನ್‌ ಮಮ್ದಾನಿ ಭಾಷಣಕ್ಕೆ ಶಿಳ್ಳೆ ಚಪ್ಪಾಳೆ ಕೂಗು..! #trump #newyork #pratidhvani

ಬೆಂಗಳೂರು: ರಾಷ್ಟ್ರಗೀತೆ ಬಗ್ಗೆ ಹೇಳಿಕೆ ನೀಡಿರುವ ಕರ್ನಾಟಕ ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗ್ಡೆ ಕಾಗೇರಿ ವಿರುದ್ಧ ಸಚಿವ ಪ್ರಿಯಾಂಕ್ ಗಾಂಧಿ ಕಿಡಿಕಾರಿದ್ದಾರೆ.

ADVERTISEMENT

RSSನ 150 ವರ್ಷಾಚರಣೆ ವೇಳೆ ಮಾತಾನಾಡಿರೋ ಕಾಗೇರಿ, ಜನಗಣಮನ ರಾಷ್ಟ್ರಗೀತೆ ಬ್ರೀಟಿಷರ
ಎಂದು ಹೇಳಿದ್ದರು. ಇದಕ್ಕೆ X ನಲ್ಲಿ ಆಕ್ರೋಶ ವ್ಯಕ್ತಪಡಿಸಿರೋ ಪ್ರಿಯಾಂಕ್ ಗಾಂಧಿ ಈ ಹೇಳಿಕೆ RSS “WhatsApp ಇತಿಹಾಸ”ದ ಮತ್ತೊಂದು ಪಾಠವಾಗಿದೆ ಎಂದಿದ್ದು ರಾಷ್ಟ್ರಗೀತೆ ಇತಿಹಾಸ ನೆನಪಿಸಿ ತಿವಿದಿದ್ದಾರೆ. .

ಕಾಗೇರಿಯವರು ಹೇಳಿರುವುದು ಸಂಪೂರ್ಣ ಅಸಂಬದ್ಧವಾಗಿದೆ. ಟ್ಯಾಗೋರ್ 1911 ರಲ್ಲಿ ಭರೋತೋ ಭಾಗ್ಯೋ ಬಿಧಾತ ಎಂಬ ಸ್ತುತಿಗೀತೆಯನ್ನು ಬರೆದರು. ಅದರ ಮೊದಲ ಚರಣ ಜನಗಣಮನವಾಯಿತು. ಇದನ್ನು ಡಿಸೆಂಬರ್ 27, 1911 ರಂದು ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಮೊದಲು ಹಾಡಲಾಯಿತೇ ಹೊರತು ಇದು ರಾಜ ಗೌರವವಾಗಿ ಹಾಡಿದ್ದಲ್ಲ. ಹಾಗೆ ಟ್ಯಾಗೋರ್ 1937 ಮತ್ತು 1939 ರಲ್ಲಿ ಈ ವಿವಾದಕ್ಕೆ ಸ್ಪಷ್ಟನೆ ನೀಡಿದ್ದು, ಜನಗಣಮನ ಸಾಲು ಭಾರತದ ಹಣೆಬರಹ ರೂಪಿಸುವವರನ್ನ ಹೊಗಳುವ ಅರ್ಥವಿದೆಯೇ ಹೊರತು “ಜಾರ್ಜ್ V, ಜಾರ್ಜ್ VI ಅಥವಾ ಬೇರೆ ಯಾವುದೇ ಜಾರ್ಜ್ ರನ್ನ ಹೊಗಳುವ ಸಾಲು ಆಗಿರಲು ಸಾಧ್ಯವಿಲ್ಲ” ಎಂದಿದ್ದರು.

ಈ ಸಂಸದರು ಇತಿಹಾಸವನ್ನು ಕೆದಕಲು ಬಯಸುವುದಿಲ್ಲ ಎನ್ನುತ್ತಾರೆ. ಆದರೆ ಪ್ರತಿಯೊಬ್ಬ ಬಿಜೆಪಿ, ಆರ್‌ಎಸ್‌ಎಸ್ ನಾಯಕರು, ಕಾರ್ಯಕರ್ತರು ಮತ್ತು “ಸ್ವಯಂಸೇವಕರು” ತಮ್ಮ ಸಂಘದ ಮುಖವಾಣಿ ಆರ್ಗನೈಸರ್‌ನ ಸಂಪಾದಕೀಯಗಳನ್ನು ಓದುವ ಮೂಲಕ ಇತಿಹಾಸವನ್ನು ಪುನರ್ವಿಮರ್ಶಿಸಬೇಕು. ಸಂವಿಧಾನ, ತ್ರಿವರ್ಣ ಧ್ವಜ ಮತ್ತು ರಾಷ್ಟ್ರಗೀತೆಯನ್ನು ಅಗೌರವಿಸುವ ದೊಡ್ಡ ಸಂಪ್ರದಾಯವನ್ನು RSS ಹೊಂದಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ನಾನು ಬಲವಾಗಿ ಒತ್ತಾಯಿಸುತ್ತೇನೆ ಎಂದು ಕಾಗೇರಿ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೆ ಈ “ವೈಆರ್‌ಎಸ್‌ಎಸ್” ಅನ್ನು ಗುಣಪಡಿಸಬೇಕಾಗಿದೆ ಎಂದು ವ್ಯಂಗ್ಯವಾಡಿದ್ದಾರೆ

ಕೆಲ ದಿನಗಳಿಂದಲೂ ಅನೇಕ ರಾಜಕಾರಣಿಗಳು ಜನಗಣಮನವನ್ನು ಬ್ರಿಟಿಷರನ್ನು ಸ್ವಾಗತಿಸಲು ಬರೆಯಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇದು ನಿಜವಲ್ಲ ಎಂದು ಇತಿಹಾಸಕಾರರು ಪದೇ ಪದೇ ವಿವರಿಸಿದ್ದಾರೆ. ರವೀಂದ್ರನಾಥ ಟ್ಯಾಗೋರ್ ಡಿಸೆಂಬರ್ 11, 1911 ರಂದು ಭರೋತೋ ಭಾಗ್ಯೋ ಬಿಧಾತವನ್ನು ಬರೆದರು. ಮರುದಿನ, ಕಿಂಗ್ ಜಾರ್ಜ್ V ಅನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಲು ಕೊರೊನೇಷನ್ ಪಾರ್ಕ್‌ನಲ್ಲಿ ದೆಹಲಿ ದರ್ಬಾರ್ ಅನ್ನು ಆಯೋಜಿಸಲಾಯಿತು. ಇದು ಪಟ್ಟಾಭಿಷೇಕ ಕಾರ್ಯಕ್ರಮಕ್ಕಾಗಿ ಈ ಹಾಡನ್ನು ಬರೆಯಲಾಗಿದೆ ಎಂಬ ತಪ್ಪು ಕಲ್ಪನೆಗೆ ಕಾರಣವಾಯಿತು.

ಆದರೆ ಈ ಹಾಡನ್ನು ಮೊದಲು ಡಿಸೆಂಬರ್ 28, 1911 ರಂದು ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. ಫೆಬ್ರವರಿ 1912 ರಲ್ಲಿ ಆದಿ ಬ್ರಹ್ಮ ಸಮಾಜದ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲೂ ಇದನ್ನು ಹಾಡಲಾಯಿತು.‌

ಇದರ ಗೊಂದಲ ಅಧಿನಾಯಕ ಎಂಬ ಒಂದೇ ಪದದ ಸುತ್ತ ಕೇಂದ್ರೀಕೃತವಾಗಿತ್ತು. ಇದಕ್ಕೆ 1937 ರಲ್ಲಿ ಟಾಗೋರ್ ಒಂದು ಪತ್ರದಲ್ಲಿ ಐದನೆಯವರೂ ಅಥವಾ ಆರನೆಯವರೂ ಅಥವಾ ಯಾವುದೇ ಜಾರ್ಜ್ ಕೂಡ ಯುಗಯುಗಾಂತರಗಳಲ್ಲಿ ಮಾನವ ಹಣೆಬರಹವನ್ನು ರೂಪಿಸಲು ಸಾಧ್ಯವಿಲ್ಲ. ಜನಗಣಮನ ಹಾಡಿನಲ್ಲಿ ನಾನು ಭಾರತದ ಹಣೆಬರಹದ ರೂಪಿಸುವರನ್ನ ಹೊಗಳಿದ್ದೆ. ಅವನು ಎಲ್ಲಾ ಏರಿಳಿತಗಳ ಮೂಲಕ ದಾರಿಹೋಕರಿಗೆ ಮಾರ್ಗದರ್ಶನ ನೀಡುತ್ತಾನೆ. ಜನರಿಗೆ ದಾರಿ ತೋರಿಸುತ್ತಾನೆ ಎಂದು ಶ್ಲಾಘಿಸಿದ್ದೆ ಎಂದು ಹೇಳಿದ್ದರು.

Tags: "priyank khargenational anthem
Previous Post

ದೆಹಲಿಯಲ್ಲಿ ಹೈಕಮಾಂಡ್‌ ನಾಯಕರನ್ನು ಭೇಟಿಯಾಗುತ್ತಿಲ್ಲ- ಡಿ.ಕೆ ಶಿವಕುಮಾರ್‌ ಸ್ಪಷ್ಟನೆ

Next Post

ರಾಹುಲ್‌ ಗಾಂಧಿ ಆರೋಪಕ್ಕೆ ಬ್ರೆಜಿಲ್‌ ಮಾಡೆಲ್‌ ಖಡಕ್‌ ತಿರುಗೇಟು

Related Posts

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ
Top Story

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
February 13, 2026
0

ಬೆಂಗಳೂರು :  ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ...

Read moreDetails
CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

February 13, 2026
ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ  ಜೋ ಸೈಮನ್‌ ಕೊನೆಯುಸಿರು..

ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ ಜೋ ಸೈಮನ್‌ ಕೊನೆಯುಸಿರು..

February 13, 2026
ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
Next Post
ರಾಹುಲ್‌ ಗಾಂಧಿ ಆರೋಪಕ್ಕೆ ಬ್ರೆಜಿಲ್‌ ಮಾಡೆಲ್‌ ಖಡಕ್‌ ತಿರುಗೇಟು

ರಾಹುಲ್‌ ಗಾಂಧಿ ಆರೋಪಕ್ಕೆ ಬ್ರೆಜಿಲ್‌ ಮಾಡೆಲ್‌ ಖಡಕ್‌ ತಿರುಗೇಟು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada