ಹರಿಯಾಣ ವಿಧಾನಸಭೆ ಫಲಿತಾಂಶಕ್ಕೆ (Haryana election result) ಸಂಬಂಧಪಟ್ಟಂತೆ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ.ಕೋಳಿವಾಡ (K B kolivada) ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಹರಿಯಾಣದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಸಿಎಂ ಸಿದ್ದರಾಮಯ್ಯನವರ (Cm siddaramaiah) ಮುಡಾ ಹಗರಣ (Muda scam) ಕಾರಣ ಎಮದು ಹೇಳಿದ್ದಾರೆ.
ಹರಿಯಾಣದ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (Pm narendra modi) ಸಿಎಂ ಸಿದ್ದರಾಮಯ್ಯನರ ಉದಾಹರಣೆ ನೀಡಿದ್ದರು. ಕಾಂಗ್ರೆಸ್ ಕೈಗೆ ಆಡಳಿತ ನೀಡಿದ್ರೆ ಕರ್ನಾಟಕದ ರೀತಿ ಇಲ್ಲಿಯೂ ಭ್ರಷ್ಟ ಸರ್ಕಾರ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಯೋಚನೆ ಮಾಡಿ ಎಂದು ಹೇಳಿದ್ದರು.
ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲಿರುವ ಆರೋಪವೇ ಹರಿಯಾಣದಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗಲು ಕಾರಣ. ಇದೇ ಕಾರಣಕ್ಕೆ ನಾನು ಈ ಮುಂಚೆಯೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಸೂಕ್ತ ಎಂ ಹೇಳಿಕೆ ನೀಡಿದ್ದೆ. ಈಗಲೂ ನನ್ನ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ ಎಂದು ಹೇಳಿದ್ದಾರೆ.