ಕಿಡ್ನ್ಯಾಪ್ ಕೇಸ್ ಒಂದರಲ್ಲಿ ಬಂಧನ ಆಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ H.D Revanna ಅವರನ್ನು ಕೋರಮಂಗಲದಲ್ಲಿರುವ ಜಡ್ಜ್ ನಿವಾಸಕ್ಕೆ ಹಾಜರು ಮಾಡಲಾಗಿತ್ತು. ಈ ವೇಳೆ ನ್ಯಾಯಧೀಶರ ಮನೆಗೆ ಹೋಗ್ತಿದ್ದಂತೆ ಹೆಚ್.ಡಿ ರೇವಣ್ಣ ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ.

ಕಾರಿಂದ ಇಳಿಯುವಾಗಲೇ ಭಾವುಕರಾಗಿದ್ದ ರೇವಣ್ಣ ಜಡ್ಜ್ ಎದುರು ಕೈ ಮುಗಿದುಕೊಂಡು ನಿಂತಾಗ ಗಳಗಳನೆ ಕಣ್ಣೀರು ಹಾಕಿದ್ದಾರೆ. ನಾನು ಯಾರನ್ನೂ ಕಿಡ್ನ್ಯಾಪ್ ಮಾಡಿಲ್ಲ, ಯಾರ ಮೂಲಕವೂ ಕಿಡ್ನ್ಯಾಪ್ ಮಾಡಿಸಿಲ್ಲ. ರಾಜಕೀಯ ಷಡ್ಯಂತ್ರ ಮಾಡಿ ನನ್ನನ್ನು ಬಂಧನ ಮಾಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ತಂದೆ ದೇವೇಗೌಡರ ಮನೆಯಲ್ಲಿದ್ದೆ, ನಾನು ಬೆಂಗಳೂರಿನಲ್ಲೇ ಇದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನ್ಯಾಯಧೀಶರ ಬಳಿ ಕಣ್ಣೀರು ಹಾಕುತ್ತಲೇ ಹೇಳಿದ್ದಾರೆ. ಆಗ ಓಪನ್ ಕೋರ್ಟ್ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಅವಕಾಶವಿದೆ. ತಪ್ಪು ಮಾಡದಿದ್ದರೆ ಕಾನೂನು ಪ್ರಕಾರ ರಕ್ಷಣೆ ಸಿಗಲಿದೆ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
