• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಶೇ.20ರಷ್ಟು ದರ ಏರಿಕೆ ಮಾಡಿದ ರಿಲಯನ್ಸ್ ಜಿಯೊ, ಡಿಸೆಂಬರ್ 1ರಿಂದ ಪರಿಷ್ಕೃತ ದರ ಜಾರಿ

Any Mind by Any Mind
November 28, 2021
in ಕರ್ನಾಟಕ, ದೇಶ
0
ಶೇ.20ರಷ್ಟು ದರ ಏರಿಕೆ ಮಾಡಿದ ರಿಲಯನ್ಸ್ ಜಿಯೊ, ಡಿಸೆಂಬರ್ 1ರಿಂದ ಪರಿಷ್ಕೃತ ದರ ಜಾರಿ
Share on WhatsAppShare on FacebookShare on Telegram

ಭಾರ್ತಿ ಏರ್ಟೆಲ್ ಕಂಪನಿಯು ತನ್ನ ಮೊಬೈಲ್ ಕರೆ ಮತ್ತು ಡೇಟಾ ದರ ಏರಿಸುವುದನ್ನೇ ಕಾಯುತ್ತಿದ್ದ ರಿಲಯನ್ಸ್ ಜಿಯೋ ಈಗ ತಾನೂ ದರ ಏರಿಕೆ ಮಾಡುವುದಾಗಿ ಪ್ರಕಟಿಸಿದೆ.

ADVERTISEMENT

ಏರ್ಟೆಲ್ ದರ ಏರಿಕೆ ಪ್ರಕಟಿಸಿದ ಒಂದೇ ವಾರದಲ್ಲೇ ಜಿಯೋ ಕೂಡಾ ಅದೇ ಹಾದಿಯಲ್ಲಿ ಸಾಗಿದೆ. ರಿಲಯನ್ಸ್ ಪರಿಷ್ಕೃತ ದರವು ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ. ರಿಲಯನ್ಸ್ ಶೇ.20ರಷ್ಟು ದರ ಏರಿಕೆ ಮಾಡುತ್ತಿದೆ.

ನವೆಂಬರ್ 22 ರಂದು ಏರ್ಟೆಲ್ ದರ ಏರಿಕೆಯನ್ನು ಪ್ರಕಟಿಸಿತ್ತು. ಮತ್ತು ಪರಿಷ್ಕೃತ ದರವು ನವೆಂಬರ್ 26ರಿಂದಲೇ ಜಾರಿಯಾಗಿದೆ.

ರಿಲಯನ್ಸ್ ಜಿಯೋ ನೀಡುತ್ತಿರುವ ಎಲ್ಲಾ ಅನ್ಲಿಮಿಟೆಡ್ ಕರೆಗಳು ಮತ್ತು 2 ಜಿಬಿ ಡೇಟಾ ಪ್ಯಾಕುಗಳು 155 ರುಪಾಯಿಗಳಿಂದ ಪ್ರಾರಂಭವಾಗಲಿವೆ. ಇವುಗಳ ವ್ಯಾಲಿಡಿಟಿ 28 ದಿನಗಳು. ಈ ಹಿಂದೆ ಈ ದರವು 129 ರುಪಾಯಿಗಳಾಗಿತ್ತು.

ಈ ಹಿಂದೆ 2,399 ರುಪಾಯಿಗಳಿದ್ದ 365 ದಿನಗಳ ಪ್ಯಾಕ್ ಈಗ 2,879 ರುಪಾಯಿಗಳಿಗೆ ಏರಿದೆ.

ನೂತರ ದರಗಳ ವಿವರ ಕೆಳಗಿನಂತಿದೆ.

ಎರಡು ದಿನಗಳ ಹಿಂದಷ್ಟೇ ಏರ್ಟೆಲ್ ಶೇ.25ರಷ್ಟು ದರ ಏರಿಕೆ ಮಾಡಿತ್ತು. ಹೊಸ ದರ ಜಾರಿಯಾದಗ ಇದುವರೆಗೆ 75 ರುಪಾಯಿ 28 ದಿನಗಳ ವ್ಯಾಲಿಡಿಟಿ ದರವು 99 ರುಪಾಯಿಗೆ, 149 ರುಪಾಯಿಯ 28 ದಿನಗಳ ವ್ಯಾಲಿಟಿಡಿ ದರವು 179 ರುಪಾಯಿಗೆ ಏರಿದೆ. 229 ರುಪಾಯಿ ಪ್ಯಾಕ್ 265 ರುಪಾಯಿಗೂ 249 ರುಪಾಯಿ ಪ್ಯಾಕ್ 299 ರುಪಾಯಿಗೂ, 298 ರುಪಾಯಿ ಪ್ಯಾಕ್ 359ರುಪಾಯಿಗೇರಿವೆ. ಗರಿಷ್ಠ ದರದ 2498 ಪ್ಯಾಕ್ ದರವು 2999 ರುಪಾಯಿಗೆ ಏರಿದೆ.

ಪ್ರತಿ ಬಳಕೆದಾರರನಿಂದ ಮಾಸಿಕ ಆದಾಯವು (ಎಆರ್ಪಿಯು) ಕನಿಷ್ಠ 200 ರುಪಾಯಿ ಇರಬೇಕು, ಅಂತಿಮವಾಗಿ ಇದು 300 ರುಪಾಯಿ ಮಟ್ಟಬೇಕು. ಆಗಾದಾಗ ಮಾತ್ರ ಮೊಬೈಲ್ ಉದ್ಯಮವು ಆರೋಗ್ಯದಾಯಕ ಆದಾಯಗಳಿಕೆ ಸಾಧ್ಯ ಎಂದು ಏರ್ಟೆಲ್ ಹೇಳಿಕೊಂಡಿದೆ. ಪ್ರಸ್ತುತ ಏರ್ಟೆಲ್ ಗಳಿಸುತ್ತಿರುವ ಎಆರ್ಪಿಯು 153 ರುಪಾಯಿಗಳಿವೆ. ಅಂದರೆ ಪ್ರತಿ ಗ್ರಾಹಕನಿಂದ ಏರ್ಟೆಲ್ ಗೆ ದೊರೆಯುವ ಸರಾಸರಿ ಆದಾಯವು 153 ರುಪಾಯಿ. ರಿಲಯನ್ಸ್ ಜಿಯೋ 144 ರುಪಾಯಿ ಗಳಿಸುತ್ತಿದ್ದಾರೆ, ತೀವ್ರ ನಷ್ಟದಲ್ಲಿರುವ ವೊಡಾಫೋನ್ ಐಡಿಯಾ 109 ರುಪಾಯಿ ಗಳಿಸುತ್ತಿದೆ. ಅಂದರೆ, ಎಆರ್ಪಿಯು ಲೆಕ್ಕದಲ್ಲೇ ನೋಡುವುದಾದರೆ ಏರ್ಟೆಲ್ ಶೇ.100ರಷ್ಟು ದರ ಏರಿಕೆ ಮಾಡುತ್ತದೆ ಎಂಬುದನ್ನು ಸೂಚ್ಯವಾಗಿ ಹೇಳಿತ್ತು.

ಏರ್ಟೆಲ್ ಮೊಬೈಲ್ ಕರೆ ಮತ್ತು ಡೇಟಾ ದರ ಏರಿಕೆ ಮಾಡಿರುವುದರಿಂದ ರಿಲಯನ್ಸ್ ಜಿಯೋ ಕೂಡ ದರ ಏರಿಕೆ ಮಾಡುವ ನಿರೀಕ್ಷೆ ಇದೆ ಎಂದು ಪ್ರತಿಧ್ವನಿ ನವೆಂಬರ್ 22 ರಂದೇ ವರದಿ ಮಾಡಿತ್ತು.

ಪ್ರಸ್ತುತ 144 ರುಪಾಯಿ ಎಆರ್ಪಿಯು ಗಳಿಸುತ್ತಿರುವ ರಿಲಯನ್ಸ್ ಜಿಯೋ ಮುಂಬರವ ದಿನಗಳಲ್ಲಿ ಮತ್ತಷ್ಟು ದರ ಏರಿಕೆ ಮಾಡುವ ಸಾಧ್ಯತೆ ಇದೆ.

ಕರೆ ಮತ್ತು ಡೇಟಾ ಸೇವೆ ಒದಗಿಸುತ್ತಿರುವ ಮೊಬೈಲ್ ಕಂಪನಿಗಳು ದೊಡ್ಡ ಪ್ರಮಾಣದ ಸಾಲದ ಹೊರೆಯಿಂದ ಬಳಲುತ್ತಿವೆ. ಹೀಗಾಗಿ ಮುಂಬರುವ ದಿನಗಳಲ್ಲಿ ಸಾಲದ ಹೊರೆಯನ್ನು ತಗ್ಗಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇರುವುದರಿಂದ ಮೊಬೈಲ್ ಕಂಪನಿಗಳು ದರ ಸಮರಕ್ಕೆ ಇಳಿಯುವ ಸಾಧ್ಯತೆ ಇಲ್ಲ. ಅಂದರೆ, ಏರ್ಟೆಲ್, ರಿಲಯನ್ಸ್ ಜಿಯೋ, ವೊಟಾಫೋನ್ ಐಡಿಯಾ ಮುಂಬರುವ ದಿನಗಳಲ್ಲಿ ಮತ್ತೆ ದರ ಏರಿಕೆ ಮಾಡಲಿವೆ. ಒಟ್ಟಾಗಿಯೇ ದರ ಏರಿಕೆ ಪ್ರಕಟಿಸಬಹುದು ಅಥವಾ ಪ್ರತ್ಯೇಕವಾಗಿ ದರ ಏರಿಕೆ ಪ್ರಕಟಿಸಬಹುದು. ಆದರೆ, ಮುಂಬರುವ ದಿನಗಳಲ್ಲಿ ಮೊಬೈಲ್ ಕರೆ ಮತ್ತು ಡೇಟಾ ದರವು ದುಬಾರಿಯಾಗುವುದಂತೂ ನಿಶ್ಛಿತ.

Tags: BJPCovid 19ಜಿಯೋಡಿಸೆಂಬರ್ಬಿಜೆಪಿಮುಖೇಶ್ ಅಂಬಾನಿರಿಲಯನ್ಸ್ ಜಿಯೋ
Previous Post

ಮುರುಗೇಶ್ ನಿರಾಣಿ ಮುಖ್ಯಮಂತ್ರಿಯಾಗಲಿದ್ದಾರೆ – ಸಚಿವ ‌ಈಶ್ವರಪ್ಪ

Next Post

ಸರ್ಕಾರದ ಅಡಿಯಾಳಾದ ʼಸಿಬಿಐ, ಇಡಿʼಗಳ ಸ್ವಾತಂತ್ರ್ಯ ಹರಣ, ಕಾದಿದೆ ಮರಣ ಶಾಸನ – ಪ್ರಶಾಂತ್ ಭೂಷಣ

Related Posts

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
0

ಸರ್ಕಾರಿ ಶಾಲಾ ಕಾಲೇಜು ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ...

Read moreDetails

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

October 12, 2025
Next Post
ಸರ್ಕಾರದ ಅಡಿಯಾಳಾದ ʼಸಿಬಿಐ, ಇಡಿʼಗಳ ಸ್ವಾತಂತ್ರ್ಯ ಹರಣ, ಕಾದಿದೆ ಮರಣ ಶಾಸನ – ಪ್ರಶಾಂತ್ ಭೂಷಣ

ಸರ್ಕಾರದ ಅಡಿಯಾಳಾದ ʼಸಿಬಿಐ, ಇಡಿʼಗಳ ಸ್ವಾತಂತ್ರ್ಯ ಹರಣ, ಕಾದಿದೆ ಮರಣ ಶಾಸನ - ಪ್ರಶಾಂತ್ ಭೂಷಣ

Please login to join discussion

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada