ಶಿವಮೊಗ್ಗ: ಪಂಚರತ್ನ ರಥಯಾತ್ರೆ ಅಂಗವಾಗಿ ಮೂರು ದಿನಗಳ ಶಿವಮೊಗ್ಗ ಪ್ರವಾಸದಲ್ಲಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಹಾಗೂ ಸರ್ಕಾರದ ಧೋರಣೆಗಳ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಜೆಡಿಎಸ್ ಬಿಜೆಪಿಯ ಮುಖವಾಡ ಎಂದು ಕರೆದಿದ್ದಕ್ಕೆ ಕಿಡಿಕಾರಿದ ಕುಮಾರಸ್ವಾಮಿ ಜೆಡಿಎಸ್ ಪಕ್ಷ ಯಾರ ಮುಖವಾಡವೂ ಅಲ್ಲ ಎಂದು ತಿರುಗೇಟು ನೀಡಿದರು.
ಜೆಡಿಎಸ್ ನಾಯಕರ ಮುಖವಾಡ ಕಳಚಿದರೆ, ನರೇಂದ್ರ ಮೋದಿ ಕಾಣುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ಸಿಗೆ ನರೇಂದ್ರ ಮೋದಿ ಬಿಟ್ಟರೆ ಇನ್ನಾರು ಕಾಣಲು ಸಾಧ್ಯ..? ಬೇರೆಯವರು ಯಾರು ಕಾಣೋದಿಲ್ಲ. ನರೇಂದ್ರ ಮೋದಿ ಭಜನೆ ಬಿಟ್ಟರೆ ಕಾಂಗ್ರೆಸ್’ಗೆ ಬೇರೇನೂ ಇಲ್ಲ.! ಈ ಸುರ್ಜೆವಾಲ್ ಗೆ ಬಹಿರಂಗ ಸವಾಲು ಹಾಕಿದ್ದೆ. ಆಪರೇಷನ್ ಕಮಲ ನಂತರ ಮೊದಲ ಚುನಾವಣೆ 2009ರಲ್ಲಾಯ್ತು. ಈಗಿನ ಶಾಸಕಾಂಗ ಪಕ್ಷದ ನಾಯಕರು ಅಂದು ಸುಪಾರಿ ತೆಗೆದುಕೊಂಡಿದ್ದರು. ( ಸಿದ್ದರಾಮಯ್ಯ-ಯಡಿಯೂರಪ್ಪ ಒಪ್ಪಂದ) ಈ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದೆ. ಈ ಸುರ್ಜೇವಾಲ್ ಗೆ ನಾಚಿಕೆ ಆಗಬೇಕು. ಇಷ್ಟು ದಿನಗಳ ನಂತರ ಕರ್ನಾಟಕಕ್ಕೆ ಬಂದು ಜೆಡಿಎಸ್ ಬಿಜೆಪಿ B ಟೀಂ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್ ಗೆ ಯಾವುದೇ ನೈತಿಕತೆ ಇಲ್ಲ. ಈ ಕುರಿತು ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಕೊನೆಯ ಹಂತದಲ್ಲಿದೆ. ಇನ್ನೂ ನೆಲಕಚ್ಚಲಿದೆ. ಈ ಹೇಳಿಕೆಗಳಿಂದ ಏನು ಲಾಭವಿಲ್ಲ. ಜೆಡಿಎಸ್ ನ ವಿರುದ್ಧ ಹೇಳಿಕೆ ನೀಡಿದಷ್ಟು ಕಾಂಗ್ರೆಸ್ ನೆಲಕಚ್ಚುತ್ತದೆ ಎಂದರು.
ಇಂದು, ನಾಳೆ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಸುಮಾರು 60 ರಿಂದ 70 ಮನೆಗಳಿಗೆ ಭೇಟಿ ನೀಡುತ್ತಿದ್ದೇನೆ. ನಾಡಿದ್ದು ತೀರ್ಥಹಳ್ಳಿಯಲ್ಲಿ ಒಂದೂವರೆ ದಿನದ ಪ್ರವಾಸ ಮುಗಿಸಿಕೊಂಡು ನಂತರ ಶೃಂಗೇರಿಗೆ ಭೇಟಿ ನೀಡಲಿದ್ದೇನೆ ಇದು ನಿರಂತರವಾಗಿ ಮುಂದಿನ ತಿಂಗಳು 20ನೇ ತಾರೀಖಿನವರೆಗೂ ಮುಂದುವರೆಯುತ್ತದೆ. ಪಂಚರತ್ನ ಯೋಜನೆಗಳು ಜನರಿಗೆ ವರದಾನ ಆಗಬಲ್ಲವು. ಇಂದು ಕೂಡ ಸಾಕಷ್ಟು ಪೋಷಕರು ಅನಾರೋಗ್ಯ ಮಕ್ಕಳನ್ನು ಕರೆತಂದಿದ್ದರು ನನ್ನ ಜನ ಸಂಪರ್ಕಕ್ಕೆ ಬಂದ ಮೂರು ಕುಟುಂಬಗಳಿಗೆ ಸುಮಾರು ಒಂದು ಕಾಲು ಕೋಟಿ ರೂಪಾಯಿ ಚಿಕಿತ್ಸಾ ವೆಚ್ಚ ಬೇಕು. ಇಂತಹದನ್ನು ನೋಡಿಯೇ ನಾನು ಪಂಚರತ್ನ ಯೋಜನೆ ತಂದಿದ್ದು ಎಂದರು.
ರಾಮನಗರ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ್, ಶಾಸಕಿ ಅನಿತಾ ಬರೋದಕ್ಕಿಂತಾ ಮುಂಚೆ ಟೇಪ್ ಕಟ್ ಮಾಡಿರೋದಕ್ಕಾಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ ಅಷ್ಟೇ ಎಂದು ಹೇಳಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಮಂಡ್ಯದಲ್ಲಿ ಮನೆಯನ್ನಾದರೂ ಮಾಡಲಿ, ಅರಮನೆಯನ್ನಾದರೂ ಮಾಡಲಿ, ಶಿವಮೊಗ್ಗದಲ್ಲಿ ಕಟ್ಟಿದ ಹಾಗೆ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನಾಗಿ ಕಟ್ಟಲಿ, ಬೇಡ ಅಂದವರು ಯಾರು..? ಎಂದು ಕುಮಾರಸ್ವಾಮಿ ಸರ್ಕಾರಿ ನೌಕರರಿಗೆ ಸರ್ಕಾರ ಮಾತು ಕೊಟ್ಟಿದ್ದು 7ನೇ ವೇತನ ಆಯೋಗ ರಚನೆ ಮಾಡುತ್ತೇವೆ ಎಂದರು. ಈಗ ಕೈ ಕೊಟ್ಟಿದ್ದಾರೆ ಸರ್ಕಾರಿ ನೌಕರರು ಅರ್ಥ ಮಾಡಿಕೊಳ್ಳಬೇಕು ನಾನು ನಿಮ್ಮ ಪರವಾಗಿ ಪ್ರಾಮಾಣಿಕವಾಗಿ ಇದ್ದೆ, ಈ ಸುಳ್ಳಿನ ಸರ್ಕಾರದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳುತ್ತೇನೆ ಎಂದರು.












