• Home
  • About Us
  • ಕರ್ನಾಟಕ
Friday, June 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

UP Election 2022 | ಯೂಪಿ ಚುನಾವಣೆಯಲ್ಲಿ ಭಾರೀ ‌ಚರ್ಚೆಯಾಗುತ್ತಿರುವ ಜಾಟ್ ಸಮುದಾಯದ ಆಳ-ಅಗಲ : ಭಾಗ – 2

ಯದುನಂದನ by ಯದುನಂದನ
January 31, 2022
in ದೇಶ, ರಾಜಕೀಯ
0
UP Election 2022 | ಯೂಪಿ ಚುನಾವಣೆಯಲ್ಲಿ ಭಾರೀ ‌ಚರ್ಚೆಯಾಗುತ್ತಿರುವ ಜಾಟ್ ಸಮುದಾಯದ ಆಳ-ಅಗಲ : ಭಾಗ – 2
Share on WhatsAppShare on FacebookShare on Telegram

ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ ಮತ್ತಿತರ ಕಡೆ ಆಗಾಗ್ಗೆ ಚರ್ಚೆಗೆ ಬರುವ‌ ಜಾಟರ ಬಗ್ಗೆ ಈಗಾಗಲೇ ಮೊದಲನೇ ಕಂತಿನಲ್ಲಿ ಆ ಸಮುದಾಯದ ಎಲ್ಲೆಲ್ಲಿ ಪ್ರಭಾವ ಹೊಂದಿದೆ. ಸಮುದಾಯಕ್ಕೆ ದಶಕಗಳಿಂದ ನಾಯಕತ್ವ ನೀಡಿದವರು ಯಾರು? ಹಿಂದುತ್ವ ಮತ್ತು ಮಂಡಲ್ ರಾಜಕಾರಣದ ಬಳಿಕ‌ ಆದ ಬದಲಾವಣೆಗಳೇನು ಎಂಬುದನ್ನು ಓದಿಯಾಗಿದೆ. ಈಗ ಮತ್ತಿತರ ಸಂಗತಿಗಳನ್ನು ನೊಡೋಣ.

ADVERTISEMENT

ಅಜಿತ್ ಸಿಂಗ್ ರಾಜಕೀಯ ಜೀವನ ಹೇಗಿತ್ತು?

ಚರಣ್ ಸಿಂಗ್ ಅವರ ಮಗ ಚೌಧರಿ ಅಜಿತ್ ಸಿಂಗ್ ಅವರು ಐಐಟಿ-ವಿದ್ಯಾವಂತ. ತಂದೆಯಿಂದ ಬಳುವಳಿ‌ ರೂಪದಲ್ಲಿ ಬಂದ ರಾಜಕೀಯದ ಅಧಿಕಾರ, ನಾಯಕತ್ವ ಬಹುಕಾಲ ಸಾಂಗವಾಗಿ ಸಾಗಲಿಲ್ಲ. ಪರಿಣಾಮವಾಗಿ ರಾಷ್ಟ್ರೀಯ ಮತ್ತು ಉತ್ತರ ಪ್ರದೇಶದ ರಾಜಕೀಯದಲ್ಲಿ ಪ್ರಸ್ತುತವಾಗಿರಲು ಆಗಾಗ್ಗೆ ಪಕ್ಷಗಳನ್ನು ಬದಲಾಯಿಸಬೇಕಾಯಿತು. ಮೊದಲಿಗೆ ವಿ.ಪಿ. ಸಿಂಗ್ ಅವರ ಸರ್ಕಾರವನ್ನು ಬೆಂಬಲಿಸಿ ಸರ್ಕಾರದ ಭಾಗವಾಗಿದ್ದರು. ನಂತರ 1995ರಲ್ಲಿ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡು ಪಿ.ವಿ. ನರಸಿಂಹ ರಾವ್ ಅವರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದರು. 1996ರ ಲೋಕಸಭಾ ಚುನಾವಣೆಯಲ್ಲಿ ಅವರು ಬಾಗ್‌ಪತ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದರು. ಆದರೆ 1997ರಲ್ಲಿ ಸಂಸತ್ತಿಗೆ ರಾಜೀನಾಮೆ ನೀಡಿ ತಮ್ಮದೇ ಆದ ಭಾರತೀಯ ಕಿಸಾನ್ ಕಾಮಗಾರಿ ಪಕ್ಷವನ್ನು (BKKP) ಸ್ಥಾಪಿಸಿದರು. ಪರಿಣಾಮವಾಗಿ 1998ರ ಲೋಕಸಭಾ ಚುನಾವಣೆಯಲ್ಲಿ ಅಜಿತ್ ಸಿಂಗ್ ಅವರು ತಮ್ಮ ಸಾಂಪ್ರದಾಯಿಕ ಬಾಗ್ಪತ್ ಸ್ಥಾನವನ್ನು ಕಳೆದುಕೊಂಡರು.

1999ರಲ್ಲಿ ಅಜಿತ್ ಸಿಂಗ್ ಅವರು ರಾಷ್ಟ್ರೀಯ ಲೋಕದಳ (RLD) ಸ್ಥಾಪಿಸಿದರು. ಅದು ಅದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳಲ್ಲಿ ಜಯಗಳಿಸಿತು.‌‌ ಅವುಗಳೆಂದರೆ ಬಾಗ್ಪತ್ ಮತ್ತು ಪಕ್ಕದ ಕೈರಾನಾ. ಆಗ ಅಜಿತ್ ಸಿಂಗ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರವನ್ನು ಬೆಂಬಲಿಸಿ ಸರ್ಕಾರದ ಭಾಗವಾಗಿದ್ದರು. ಇದಾದ ಮೇಲೆ 2004ರಲ್ಲಿ ಈ ಸ್ಥಾನಗಳನ್ನು ಉಳಿಸಿಕೊಂಡಿತ್ತು. ಆದರೆ ಕೇಂದ್ರದಲ್ಲಿ ಸರ್ಕಾರ ಬದಲಾಗಿದ್ದರಿಂದ ಅಜಿತ್ ಸಿಂಗ್ ಕೂಡ ತಮ್ಮ ನಿಲುವು ಬದಲಿಸಿ ಮನಮೋಹನ್ ಸಿಂಗ್ ಸರ್ಕಾರವನ್ನು ಸೇರಲು ಪ್ರಯತ್ನಿಸಿದರು. ಆದರೆ ಹಲವಾರು ವರ್ಷಗಳವರೆಗೆ ಅದು ಕಾರ್ಯರೂಪಕ್ಕೆ ಬರಲಿಲ್ಲ.

ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳ 2009ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಒಂಬತ್ತು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಐದು ಸ್ಥಾನಗಳನ್ನು ಗೆದ್ದಿತ್ತು. ಆದರೂ 2011ರಲ್ಲಿ ಅಜಿತ್ ಸಿಂಗ್ ಅವರು ಮನಮೋಹನ್ ಸಿಂಗ್ ಅವರ ಸರ್ಕಾರಕ್ಕೆ ಬೆಂಬಲ ಸೂಚಿಸಿ ಸರ್ಕಾವನ್ನೂ ಸೇರಿಕೊಂಡರು. ಇವರ ಇಂತಹ ನಡೆಗಳ ಪರಿಣಾಮವಾಗಿ ಮುಂದಿನ ಎರಡು ಲೋಕಸಭಾ ಚುನಾವಣೆಗಳು (2014 ಮತ್ತು 2019ರಲ್ಲಿ) ರಾಷ್ಟ್ರೀಯ ಲೋಕದಳ ರಾಷ್ಟ್ರ ರಾಜಕಾರಣದಲ್ಲಿ ನೆಲೆ ಕಳೆದುಕೊಂಡಿತು. ಅಜಿತ್ ಸಿಂಗ್ ಮತ್ತು ಅವರ ಮಗ ಜಯಂತ್ ಚೌಧರಿ ಇಬ್ಬರೂ ಸೋತರು. 2021ರಲ್ಲಿ ಅಜಿತ್ ಸಿಂಗ್ ಕೊರೋನಾಗೆ ಬಲಿಯಾದರು.

ಮಂಡಲ-ಕಮಂಡಲ ವರ್ಷಗಳಲ್ಲಿ ಹೇಗಿತ್ತು ಪರಿಸ್ಥಿತಿ?

BKKP ಅಜಿತ್ ಸಿಂಗ್ ಅವರು ಒಂಬತ್ತು ಸಲ ರಾಜಕೀಯ ಪಥ ಬದಲಿಸಿದ್ದಾರೆ. 1996ರ ಯುಪಿ ಚುನಾವಣೆಯಲ್ಲಿ ರೈತ ನಾಯಕ ಮಹೇಂದ್ರ ಸಿಂಗ್ ಟಿಕಾಯತ್ ಬೆಂಬಲ ಪಡೆದ ರಾಷ್ಟ್ರೀಯ ಲೋಕದಳ ಮುಲಾಯಂ ಸಿಂಗ್ ಅವರ ಎಸ್ಪಿಯೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಂಡಿತು. 38 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ ಎಂಟು ಸ್ಥಾನಗಳಲ್ಲಿ ಗೆದ್ದಿತು. 2002ರ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 38 ಸ್ಥಾನಗಳಲ್ಲಿ ಸ್ಪರ್ಧಿಸಿ 14 ಸ್ಥಾನ ಗೆದ್ದಿತು. ಅಲ್ಲದೆ ಮಾಯಾವತಿ ನೇತೃತ್ವದ ಬಿಜೆಪಿ-ಬಿಎಸ್ಪಿ ಸರ್ಕಾರವನ್ನು ಬೆಂಬಲಿಸಿತು.‌ ಆದರೆ ಬಿಜೆಪಿ ಜೊತೆಗಿನ ಮೈತ್ರಿಯನ್ನು ಕೆಲವೇ ದಿನಗಳಲ್ಲಿ ಮುರಿದುಕೊಂಡಿತು.

ಇದಾದ ಮೇಲೆ 2003ರಲ್ಲಿ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳ ಮುಲಾಯಂ ಸಿಂಗ್ ಸರ್ಕಾರವನ್ನು ಬೆಂಬಲಿಸಿತು. ಆದರೆ 2007ರ ಉತ್ತರ ಪ್ರದೇಶ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಮುಲಾಯಂ ಸರ್ಕಾರದಿಂದ ಹೊರಬಂದಿತು. 2007ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟವಾದ ಜನಾದೇಶ ಸಿಕ್ಕಿದ್ದರಿಂದ ರಾಷ್ಟ್ರೀಯ ಲೋಕದಳ ಅಸ್ತಿತ್ವ ಕಳೆದುಕೊಂಡಿತು.

2017ರ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಉತ್ತರ ಪ್ರದೇಶದ 17 ಜಿಲ್ಲೆಗಳ 94 ಸ್ಥಾನಗಳಲ್ಲಿ ಬಿಜೆಪಿ 73 ಸ್ಥಾನಗಳನ್ನು ಗೆದ್ದುಕೊಂಡಿತು. ಎಸ್‌ಪಿ 15, ಬಿಎಸ್‌ಪಿ ಮೂರು, ಕಾಂಗ್ರೆಸ್ ಎರಡು ಮತ್ತು ಜಾಟ್‌ಗಳ ಪಕ್ಷವಾದ ಆರ್‌ಎಲ್‌ಡಿ ಕೇವಲ ಒಂದು ಸ್ಥಾನವನ್ನು ಗೆದ್ದಿದ್ದವು. ಹೀಗೆ ಬಿಜೆಪಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ಗೆಲ್ಲಲು ಇತರೆ ಹಿಂದುಳಿದ ವರ್ಗಗಳಾದ ಕುರ್ಮಿಗಳು, ಮೌರ್ಯ, ಶಕ್ಯ, ಸೈನಿ, ಕುಶ್ವಾಹ ಜಾತಿಗಳ ಬಲವೂ ಕಾರಣ. ಆದರೀಗ‌ ಈ ಜಾತಿಗಳ ಪ್ರಬಲ ನಾಯಕರು ಕೂಡ ಇತ್ತೀಚಿಗೆ ಬಿಜೆಪಿ ತ್ಯಜಿಸಿದ್ದಾರೆ. ಇದು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತವಾಗಬಹುದು ಎಂದು ಹೇಳಲಾಗುತ್ತಿದೆ.

2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 15 ಜಾಟ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.‌ ಆ ಪೈಕಿ 14 ಮಂದಿ‌ ಗೆದ್ದಿದ್ದರು. ಈ ಬಾರಿ ಪಕ್ಷವು ಸಮುದಾಯದ 17 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಷ್ಟ್ರೀಯ ಲೋಕದಳ 12 ಜಾಟ್ ಅಭ್ಯರ್ಥಿಗಳನ್ನು ಮತ್ತು ಅದರ ಮೈತ್ರಿ ಪಕ್ಷ ಸಮಾಜವಾದಿ ಆರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜಾಟರಿಗೆ‌ ಈಗ ಹಿಂಪಡೆದಿರುವ ಕೃಷಿ ಕಾನೂನುಗಳ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಮೇಲೆ ಕೋಪವಿದೆ. ಅಲ್ಲದೆ ಕಬ್ಬಿನ ಬಾಕಿ ಪಾವತಿಯಂತಹ ಸಮಸ್ಯೆಗಳು ಸಹ ಬಿಜೆಪಿಗೆ ವಿರುದ್ಧವಾದ ಅಂಶಗಳಾಗಿವೆ. ಅಖಿಲೇಶ್ ಯಾದವ್ ಮತ್ತು ಜಯಂತ್‌ ಚೌಧರಿ ಅವರ ಕಾರಣದಿಂದ ಯಾದವ್, ಮುಸ್ಲೀಮ್ ಮತ್ತು‌ ಜಾಟ್ ಮತದಾರರು ಮತ್ತೆ ಒಟ್ಟಿಗೆ ಬರುತ್ತಿರುವುದು ನಿರ್ಣಾಯಕವಾದ ವಿಷಯವಾಗಿದೆ. ಇದೇ ಕಾರಣಕ್ಕೆ ಬಿಜೆಪಿ ಈ ಚುನಾವಣೆಯನ್ನು ಹಿಂದೂ-ಮುಸ್ಲಿಂ ರೀತಿಯಲ್ಲಿ ಧ್ರುವೀಕರಿಸಲು ಪ್ರಯತ್ನಿಸುತ್ತಿದೆ.

Tags: Congress PartyCovid 19UP Election 2022ಕರೋನಾಕೋವಿಡ್-19ಜಾಟ್ ಸಮುದಾಯಬಿಜೆಪಿಯೂಪಿ ಚುನಾವಣೆ
Previous Post

ಗೋವಾ ಚುನಾವಣೆ | ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಫೆಬ್ರವರಿ 2 ಪ್ರಣಾಳಿಕೆ ಬಿಡುಗಡೆ

Next Post

ಇಬ್ಬರು ವಯಸ್ಕರು ಇಷ್ಟಪಟ್ಟು ಒಟ್ಟಿಗೆ ಇದ್ದರೆ ನೈತಿಕ ಪೊಲೀಸ್ ದಬ್ಬಾಳಿಕೆ ಸಲ್ಲದು : ಹೈಕೋರ್ಟ್ ಆದೇಶ!

Related Posts

Top Story

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೌಶಲ್ಯದ ತರಬೇತಿ ಕೇಂದ್ರ ಆರಂಭ , ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
June 20, 2025
0

ಅಂಕಗಳೊಂದಿಗೆ ಕೌಶಲವಿದ್ದರೆ ಉದ್ಯೋಗಾವಕಾಶ ಬೆಂಗಳೂರು, ಜೂನ್‌ 20: ಯಾವುದೇ ಕೆಲಸದಲ್ಲಿ ಕೌಶಲ್ಯವಿಲ್ಲದಿದ್ದರೆ ಪ್ರಯೋಜನಕ್ಕೆ ಬರುವುದಿಲ್ಲ. ಕಟ್ಟಡ ಕಾರ್ಮಿಕರಿಂದ ಹಿಡಿದು ಎಂಜಿನಿಯರಿಂಗ್‌ ವರೆಗೆ ಎಲ್ಲರಿಗೂ ಕೌಶಲ್ಯ ಅಗತ್ಯ ಎಂದು...

Read moreDetails
ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

June 20, 2025

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ

June 20, 2025
ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

June 20, 2025
ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 

ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 

June 20, 2025
Next Post
ಇಬ್ಬರು ವಯಸ್ಕರು ಇಷ್ಟಪಟ್ಟು ಒಟ್ಟಿಗೆ ಇದ್ದರೆ ನೈತಿಕ ಪೊಲೀಸ್ ದಬ್ಬಾಳಿಕೆ ಸಲ್ಲದು :  ಹೈಕೋರ್ಟ್ ಆದೇಶ!

ಇಬ್ಬರು ವಯಸ್ಕರು ಇಷ್ಟಪಟ್ಟು ಒಟ್ಟಿಗೆ ಇದ್ದರೆ ನೈತಿಕ ಪೊಲೀಸ್ ದಬ್ಬಾಳಿಕೆ ಸಲ್ಲದು : ಹೈಕೋರ್ಟ್ ಆದೇಶ!

Please login to join discussion

Recent News

Top Story

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೌಶಲ್ಯದ ತರಬೇತಿ ಕೇಂದ್ರ ಆರಂಭ , ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
June 20, 2025
ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್
Top Story

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

by ಪ್ರತಿಧ್ವನಿ
June 20, 2025
ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 
Top Story

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

by Chetan
June 20, 2025
Top Story

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ

by ಪ್ರತಿಧ್ವನಿ
June 20, 2025
ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 
Top Story

ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

by Chetan
June 20, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೌಶಲ್ಯದ ತರಬೇತಿ ಕೇಂದ್ರ ಆರಂಭ , ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

June 20, 2025
ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

June 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada