ಜನತಾ ದರ್ಶನದ ಮೂಲಕ ಜನ ಮನಗೆದ್ದಿದ್ದ ಹೆಚ್.ಡಿ.ಕುಮಾರಸ್ವಾಮಿ (HD kumara swamy) ಇದೀಗ ಕೇಂದ್ರ ಸಚಿವರಾಗ್ತಿದ್ದಂತೆ ತಮ್ಮ ಯಶಸ್ವಿ ಕಾರ್ಯಕ್ರಮವನ್ನು ಮತ್ತೆ ಮುಂದುವರಿಸಲು ಸಜ್ಜಾಗಿದ್ದಾರೆ.ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿರುವ ಹೆಚ್ಚಿಕೆ (HDK) ಮತ್ತೆ ಜನತಾ ದರ್ಶನದ ಮೂಲಕ ಜನರ ಮನ ಗೆಲ್ಲಲು ಮುಂದಾಗಿದ್ದಾರೆ.
ಜೆಡಿಎಸ್ಗೆ (JDS) ರಾಜಕೀಯವಾಗಿ ಬಲತಂದು ಕೊಟ್ಟ ಸಕ್ಕರೆನಾಡಿನಿಂದಲೇ (Mandya) ಜನತಾ ದರ್ಶನ ಆರಂಭಕ್ಕೆ ಅಡಿ ಇಟ್ಟಿದ್ದು, ಇವತ್ತು ಇಡೀ ದಿನ ಮಂಡ್ಯದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ.ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಹೆಚ್ಡಿಕೆ ಜನತಾ ದರ್ಶನ ನಡೆಸಲಿದ್ದಾರೆ.
ಜನರ ಅಹವಾಲು ಸ್ವೀಕರಿಸಿ, ಪರಿಹಾರ ಒದಗಿಸಲಿದ್ದಾರೆ.ಜನತಾ ದರ್ಶನ ಸಭೆಗೆ ಖುದ್ದು ಹಾಜರಾಗುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸೂಚಿಸಿದ್ದಾರೆ.ಈ ಮೂಲಕ ಸ್ಥಳದಲ್ಲೆ ಜನರ ಸಮಸ್ಯೆಗೆ ಪರಿಹಾರ ಒದಗಿಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ.