ಬಳ್ಳಾರಿಯ ಸಂಡೂರು ಕ್ಷೇತ್ರದ (Sanduru) ಉಪ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ,ಮಾಜಿ ಸಚಿವ ಬಿ. ಶ್ರೀರಾಮುಲು (B ramulu) ಸಂಡೂರಿನಿಂದ ಅಂತರಕಾಯ್ದು ಕೊಂಡಿದ್ದಾರೆ ಎನ್ನಲಾಗ್ತಿದೆ. ರಾಮುಲು ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೇಟ್ (Bjp ticket) ಆಕಾಂಕ್ಷಿ ಆಗಿದ್ದು, ಚುನಾವಣೆ ಘೋಷಣೆಗೂ ಮುನ್ನ ಸಂಸದ ತುಕಾರಾಂ ವಿರುದ್ದ ರೋಷಾವೇಷದಲ್ಲಿ ಮಾತಾಡ್ತಿದ್ರು.
ಆದ್ರೆ ದೆಹಲಿಯ (Delhi) ವರಿಷ್ಠರ ಭೇಟಿ ಬಳಿಕ ನಾನು ಟಿಕೇಟ್ ಆಕಾಂಕ್ಷಿಯಲ್ಲ ಎಂದು ರಾಮುಲು ಪೋಸ್ಟ್ ಹಾಕಿದ್ದಾರೆ. ಹೀಗಾಗಿ ರಾಮುಲು ಆಪ್ತ ಸ್ನೇಹಿತ ಜನಾರ್ದನ ರೆಡ್ಡಿ (Janardhana reddy) ಕೂಡಾ ರಾಮುಲು ಸ್ಪರ್ಧಿಸಲ್ಲ ಅಂತ ಹೇಳಿದ್ರು.
ಇದಾದ ಬೆನ್ನಲ್ಲೇ ರಾಮುಲು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿಲ್ಲ, ಹಾಗೇ ಪಕ್ಷದ ಕಾರ್ಯಕ್ರಮಗಳಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಈ ಹಿನ್ನಲೆ ಸಂಡೂರು ಎಲೆಕ್ಷನ್ ಅಖಾಡದಲ್ಲಿ ಜನಾರ್ದನ ರೆಡ್ಡಿ ಒಂಟಿಯಾಗಿ ಪ್ರಚಾರಕ್ಕಿಳಿದಿದ್ದಾರೆ.